Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗುರುವೆಂಬೋ ಬೆಳಗು…
Share:
Poems February 6, 2025 ಕೆ.ಆರ್ ಮಂಗಳಾ

ಗುರುವೆಂಬೋ ಬೆಳಗು…

ಒಳಗಿರುವುದೆಲ್ಲವೂ
ಕೂಡಿಸಿಟ್ಟುಕೊಂಡದ್ದೇ
ಬುದ್ಧಿ ಬಲಿತಾಗಿನಿಂದ
ಗೊತ್ತಿದ್ದೋ… ಇಲ್ಲದೆಯೋ

ನನಗೆ ನೆನಪಿದೆ
ಕಂಡದ್ದು ಉಂಡದ್ದು
ಮುಟ್ಟಿದ್ದು ಮೂಸಿದ್ದು
ತಟ್ಟಿದ್ದು ಸೆಳೆದದ್ದು
ನಕ್ಕಿದ್ದು ನಗಿಸಿದ್ದು
ಅತ್ತದ್ದು ಅಳಿಸಿದ್ದು..
ಎಲ್ಲ ಒಳಗಿಳಿದು
ಕಡು ಕೆಂಪಗಾಗಿ
ನರನಾಡಿಗಳಿಗೆಲ್ಲ ನುಗ್ಗಿ
ಲೆಕ್ಕಕ್ಕೆ ಸಿಗದಷ್ಟು
ಕತೆಗಳನು ಹೇಳೋ
ನೆನಪಿನ ಕೋಶಗಳಾಗಿ
ಹೆಜ್ಜೆಹಜ್ಜೆಗೂ ಕುರುಹಾಗಿ
ಕೆಣಕುತಿರುವುದೆಲ್ಲವೂ
ಹಿಂದಣ ಹಂಗು…

ಇಂದಲ್ಲ ನಾಳೆ
ಮತ್ತೆ ಯಾವಾಗಲಾದರೂ
ಸಿಕ್ಕೀತು, ದಕ್ಕೀತು
ಎನುವ ಬಯಕೆಗಳೆಲ್ಲ
ಕನವರಿಕೆಗಳಾಗಿ
ನಾಳೆಗಳ ಹಳವಂಡಗಳಾಗಿ
ಅದಾಗಿದ್ದರೆ ಇದಾಗಿದ್ದರೆ
ಎನುವ ರೆಗಳ ಲೋಕವಾಗಿ
ಹಾಗಾದರೆ ಹೀಗಾದರೆ
ಎನುವ ಲೆಕ್ಕಾಚಾರಗಳಾಗಿ
ಆಸೆಗಳಾಗಿ ಮೋಹವಾಗಿ
ನಿರೀಕ್ಷೆಯ ಭಾರವಾದದ್ದೆಲ್ಲಾ
ಮುಂದಣ ಮಾಯೆ…

ಹಿಂದು-ಮುಂದುಗಳ
ಸೆಳೆತದ ಸುಳಿಯೊಳಗೆ
ಸಮಯ ಸರಿದದ್ದು ಗೊತ್ತಾಗಿ
ಎಲ್ಲೋ ಎಡವಟ್ಟಾಯ್ತಲ್ಲ
ಅಯ್ಯೋ ಸಾಕೆನಗೆಂದು
ಜೀವ ಬಸವಳಿದಾಗ…
ಪ್ರಾಣವಾಯುವಿನಂತೆ
ಉಸಿರಾದ ನನ್ನ ಗುರು
ಅರಿವಾಗಿ, ಬೆಳಕಾಗಿ
ಎಚ್ಚರದ ಗಂಟೆಯಾಗಿ
ಇರುವಿಕೆಯ ಬಯಲಾಗಿ
ಕೈಹಿಡಿದ ತಾಯಾಗಿ!

Previous post ಮಣ್ಣಲ್ಲಿ ಹುಟ್ಟಿ…
ಮಣ್ಣಲ್ಲಿ ಹುಟ್ಟಿ…
Next post ಅನಿಮಿಷನ ಕಥೆ- 6
ಅನಿಮಿಷನ ಕಥೆ- 6

Related Posts

ಒಂದು ತೊಟ್ಟು ಬೆಳಕು
Share:
Poems

ಒಂದು ತೊಟ್ಟು ಬೆಳಕು

February 7, 2021 ಜ್ಯೋತಿಲಿಂಗಪ್ಪ
ಈ ಕತ್ತಲು ಒಂದು ತೊಟ್ಟು ಬೆಳಕು ಕುಡಿಯಿತು ಅಮಲೇರಿದೆ ಗಾಳಿ ಪಾಲು ಮುಂದಣ ಗೆರೆ ಹಿಂದಕೂ ತಾಗಿದೆ ಪರಿಧಿಯ ಬಿಂದು ತನ್ನ ಇಚ್ಛೆಯನರಿಯದು ಸುತ್ತುವುದು ಬಯಲು ಎಂಬುದೇನು ಬಯಲು ಏನೂ...
ಗುರುಪಥ
Share:
Poems

ಗುರುಪಥ

January 4, 2020 ಕೆ.ಆರ್ ಮಂಗಳಾ
ಎಲ್ಲೆಲ್ಲಿಯೋ ಸುತ್ತಿ, ಎಲ್ಲೆಲ್ಲಿಯೋ ಅಲೆದು ಕಂಡಕಂಡವರನ್ನೆಲ್ಲ ಕೇಳಿ ಓದುಬಲ್ಲವರನ್ನೆಲ್ಲ ಹುಡುಕಿ ಸುಸ್ತಾದದ್ದೆ ಬಂತು, ದಾರಿ ಸಿಗಲಿಲ್ಲ ಹೇಳುವದನ್ನೆಲ್ಲ ಹಿಡಿದು...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ವಚನ ಸಾಹಿತ್ಯದಲ್ಲಿ ಆಯಗಾರರು
ವಚನ ಸಾಹಿತ್ಯದಲ್ಲಿ ಆಯಗಾರರು
May 10, 2023
ಜಾತಿಗಳು ಬೆರೆಯದೆ ಸುಖವಿಲ್ಲ
ಜಾತಿಗಳು ಬೆರೆಯದೆ ಸುಖವಿಲ್ಲ
September 13, 2025
ಮೈಸೂರು ಜನಗಣತಿಯ ಮಹತ್ವ (1871)
ಮೈಸೂರು ಜನಗಣತಿಯ ಮಹತ್ವ (1871)
March 9, 2023
ಒಂದಷ್ಟು ಸರಳ ಸಲಹೆಗಳು…
ಒಂದಷ್ಟು ಸರಳ ಸಲಹೆಗಳು…
June 10, 2023
ಬೇಡವಾದುದನ್ನು ಡಿಲೀಟ್ ಮಾಡುತ್ತಿರಬೇಕು
ಬೇಡವಾದುದನ್ನು ಡಿಲೀಟ್ ಮಾಡುತ್ತಿರಬೇಕು
January 7, 2022
ಶರಣರ ದೃಷ್ಟಿಯಲ್ಲಿ ವ್ರತಾಚರಣೆ
ಶರಣರ ದೃಷ್ಟಿಯಲ್ಲಿ ವ್ರತಾಚರಣೆ
October 2, 2018
ನೀರು ನೀರಡಿಸಿದಾಗ
ನೀರು ನೀರಡಿಸಿದಾಗ
September 4, 2018
ಮಾಣಿಕ್ಯದ ದೀಪ್ತಿ
ಮಾಣಿಕ್ಯದ ದೀಪ್ತಿ
June 12, 2025
ಸುಳ್ಳು ಅನ್ನೋದು…
ಸುಳ್ಳು ಅನ್ನೋದು…
April 6, 2023
ವಚನ–ಶ್ರಮಣಧಾರೆಗಳ ಸಂಧಿಭೂಮಿ
ವಚನ–ಶ್ರಮಣಧಾರೆಗಳ ಸಂಧಿಭೂಮಿ
April 5, 2026
Copyright © 2026 Bayalu