Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗುರುವಿಗೆ ನಮನ…
Share:
Poems January 8, 2023 ಕೆ.ಆರ್ ಮಂಗಳಾ

ಗುರುವಿಗೆ ನಮನ…

ನೋಟದ ನಂಜನು
ಕೂಟದ ತೊಡಕನು
ಭವದ ಹುಟ್ಟನು
ಹುಟ್ಟಿನ ಗುಟ್ಟನು
ಬಿಡಿಸಲು ಕಲಿಸಿದ ಗುರುವಿಗೆ ನಮನ

ಭಾವದ ಒಳಗನು
ವಿಷಯದ ಹುರುಳನು
ವಿದೇಹದ ಇರುವನು
ತ್ರಿಪುಟಿಯ ತಿರುಳನು
ಹುರಿಯಲು ಕಲಿಸಿದ ಗುರುವಿಗೆ ನಮನ

ಅಜ್ಞಾನದ ಕೊರಗನು
ಜ್ಞಾನದ ಹೊರೆಯನು
ಚಿತ್ತದ ಸುಳಿಯನು
ಅಹಮಿನ ಗತ್ತನು
ಇಳಿಸಲು ಕಲಿಸಿದ ಗುರುವಿಗೆ ನಮನ

ಮಾತಿನ ಬೆಳಗನು
ಮೌನದ ಘನವನು
ನಡೆ-ನುಡಿ ಸಂಗಮ
ಸಮರಸ ಸಿರಿಯನು
ಬಾಳಿಗೆ ಇಳಿಸಿದ ಗುರುವಿಗೆ ನಮನ

ಯೋಗದ ಮರ್ಮವ
ಮನಕೆ ಮುಟ್ಟಿಸಿ
ಲಿಂಗದ ಸಂಗಕೆ
ಪ್ರಾಣವ ತೋರಿಸಿ
ನಾನಾರೆಂದು ಕಾಣಲು ಕೈಗೆ
ಭಕ್ತಿಯ ಬೆಳಕಿತ್ತ ಗುರುವಿಗೆ ನಮನ.

Previous post ಸೂರ್ಯ
ಸೂರ್ಯ
Next post ಗುರು ಲಿಂಗ ಜಂಗಮ…
ಗುರು ಲಿಂಗ ಜಂಗಮ…

Related Posts

ನಿಮ್ಮಿಂದಲೇ ನಾನು
Share:
Poems

ನಿಮ್ಮಿಂದಲೇ ನಾನು

February 11, 2022 ಜ್ಯೋತಿಲಿಂಗಪ್ಪ
ನಾನು ಹುಟ್ಟಿದ ಮೇಲೆ ಹುಟ್ಟಿತು ನನ್ನ ಇತಿಹಾಸ ನಾನು ಸತ್ತ ಮೇಲೆ ಹುಟ್ಟಿದ್ದು ನನ್ನ ಚರಿತ್ರೆ ಈ ನಡುವಿನ ಅಂತರ ನಾನು ಇದ್ದುದ್ದು ನನ್ನ ಸುಳ್ಳು ನಿಜ ನಾನು ಹೇಳಬಲ್ಲನೇ ನನ್ನ...
ಅಂದು-ಇಂದು
Share:
Poems

ಅಂದು-ಇಂದು

December 8, 2021 ಕೆ.ಆರ್ ಮಂಗಳಾ
ಅಂದು- ಹೇಗೋ ಎಂತೋ ಸುರುಸುರುಳಿಯಾಗಿ ಬಗೆಬಗೆಯಲಿ ಪರಿಪರಿಯಲಿ ಸುತ್ತಿಕೊಂಡಿದ್ದು- ಮೆತ್ತಿಕೊಂಡಿದ್ದು ಬೆಳೆಯುತ್ತಾ-ಬಲಿಯುತ್ತಾ ನಂಟಾಗಿ- ಗಂಟಾಗಿ ಯಮಯಾತನೆಯ ಹೊರೆಯಾಗಿ...

Comments 3

  1. ಪೆರೂರು ಜಾರು, ಉಡುಪಿ
    Jan 16, 2023 Reply

    ನೋಟದ ನಂಜನಿಳಿಸಿದ ಮೇಲೆ
    ಜ್ಞಾನದ ಹೊರೆಯನಿಳಿಸನ್ನಕ್ಕ
    ಭಕ್ತಿಯ ಠಕ್ಕರ ಸಂಗ ಎಚ್ಚರವಕ್ಕ

  2. VIJAYAKUMAR KAMMAR
    Jan 16, 2023 Reply

    ಇದರಾಗ “ಜ್ಞಾನದ ಹೊರೆ” ಯಾಕ ಅಂತ ತಿಳಿಲಿಲ್ಲಾ. 1,3,4 ಹೊಂದೈತಿ. ಇದು ಯಾಕ ಅಂತ ಕುತೂಹಲ ಅಷ್ಟೆ.

  3. VijayalaksHmi s
    Feb 10, 2023 Reply

    Guruvige namana kavithe bahala sogasagide !🙏

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಬೆಳಕಿನೆಡೆಗೆ…
ಬೆಳಕಿನೆಡೆಗೆ…
June 10, 2023
ಕಾಲ ಮತ್ತು ದೇಶ
ಕಾಲ ಮತ್ತು ದೇಶ
September 13, 2025
ಯಾಲಪದದ ಸೊಗಡು
ಯಾಲಪದದ ಸೊಗಡು
December 13, 2024
ಸಂಭ್ರಮಿಸುವೆ ಬುದ್ದನಾಗಿ
ಸಂಭ್ರಮಿಸುವೆ ಬುದ್ದನಾಗಿ
August 11, 2025
ತುದಿಗಳೆರಡು ಇಲ್ಲವಾದಾಗ…
ತುದಿಗಳೆರಡು ಇಲ್ಲವಾದಾಗ…
March 9, 2023
ಕರ್ತಾರನ ಕಮ್ಮಟ  ಭಾಗ-6
ಕರ್ತಾರನ ಕಮ್ಮಟ ಭಾಗ-6
December 22, 2019
ವಚನಗಳಲ್ಲಿ ದೇವನೊಲುಮೆ… ಒಂದು ಚಿಂತನೆ
ವಚನಗಳಲ್ಲಿ ದೇವನೊಲುಮೆ… ಒಂದು ಚಿಂತನೆ
September 14, 2024
ಯೋಗಿಯಾದರೆ ಸಿದ್ಧರಾಮನಂತಾಗಬೇಕು
ಯೋಗಿಯಾದರೆ ಸಿದ್ಧರಾಮನಂತಾಗಬೇಕು
April 29, 2018
ಪಾದಪೂಜೆ- ಪಾದೋದಕಗಳ ಪ್ರಸ್ತುತತೆ
ಪಾದಪೂಜೆ- ಪಾದೋದಕಗಳ ಪ್ರಸ್ತುತತೆ
April 29, 2018
ಅನಿಮಿಷ: ಚಿಗುರಿದ ಒಲುಮೆ (4)
ಅನಿಮಿಷ: ಚಿಗುರಿದ ಒಲುಮೆ (4)
December 13, 2024
Copyright © 2025 Bayalu