Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗುರುವಿಗೆ ನಮನ…
Share:
Poems January 8, 2023 ಕೆ.ಆರ್ ಮಂಗಳಾ

ಗುರುವಿಗೆ ನಮನ…

ನೋಟದ ನಂಜನು
ಕೂಟದ ತೊಡಕನು
ಭವದ ಹುಟ್ಟನು
ಹುಟ್ಟಿನ ಗುಟ್ಟನು
ಬಿಡಿಸಲು ಕಲಿಸಿದ ಗುರುವಿಗೆ ನಮನ

ಭಾವದ ಒಳಗನು
ವಿಷಯದ ಹುರುಳನು
ವಿದೇಹದ ಇರುವನು
ತ್ರಿಪುಟಿಯ ತಿರುಳನು
ಹುರಿಯಲು ಕಲಿಸಿದ ಗುರುವಿಗೆ ನಮನ

ಅಜ್ಞಾನದ ಕೊರಗನು
ಜ್ಞಾನದ ಹೊರೆಯನು
ಚಿತ್ತದ ಸುಳಿಯನು
ಅಹಮಿನ ಗತ್ತನು
ಇಳಿಸಲು ಕಲಿಸಿದ ಗುರುವಿಗೆ ನಮನ

ಮಾತಿನ ಬೆಳಗನು
ಮೌನದ ಘನವನು
ನಡೆ-ನುಡಿ ಸಂಗಮ
ಸಮರಸ ಸಿರಿಯನು
ಬಾಳಿಗೆ ಇಳಿಸಿದ ಗುರುವಿಗೆ ನಮನ

ಯೋಗದ ಮರ್ಮವ
ಮನಕೆ ಮುಟ್ಟಿಸಿ
ಲಿಂಗದ ಸಂಗಕೆ
ಪ್ರಾಣವ ತೋರಿಸಿ
ನಾನಾರೆಂದು ಕಾಣಲು ಕೈಗೆ
ಭಕ್ತಿಯ ಬೆಳಕಿತ್ತ ಗುರುವಿಗೆ ನಮನ.

Previous post ಸೂರ್ಯ
ಸೂರ್ಯ
Next post ಗುರು ಲಿಂಗ ಜಂಗಮ…
ಗುರು ಲಿಂಗ ಜಂಗಮ…

Related Posts

ನೀರು… ಬರಿ ನೀರೇ?
Share:
Poems

ನೀರು… ಬರಿ ನೀರೇ?

December 13, 2024 ಜ್ಯೋತಿಲಿಂಗಪ್ಪ
ಕತ್ತಲೆಂಬುದು ಕಣ್ಣ ಮುಂದೋ ಕಣ್ಣ ಹಿಂದೋ… ಜ್ಞಾನ ಎಂಬುದು ಅರಿವಲ್ಲ ಅರಿದರೆ ಅಜ್ಞಾನ… ಕತ್ತಲ ಒಳಗಣ ಬೆಳಕ ಕೊಯ್ಯುವ ಜಾಣ ಬಲ್ಲ ಜ್ಞಾನದ ಬೆಳಸ ಜ್ಞಾನವೇನು...
ಮೀನಿನ ಬಯಕೆ
Share:
Poems

ಮೀನಿನ ಬಯಕೆ

June 10, 2023 ಡಾ. ಕೆ. ಎಸ್. ಮಲ್ಲೇಶ್
ಒಮ್ಮೆ ಒಂದು ಪುಟ್ಟ ಮೀನು ಈಜಿ ದಡದ ಬಳಿಗೆ ಬಂದು ಕೆರೆಯ ಪಕ್ಕ ಮನುಜನೊಬ್ಬನನ್ನು ಕಂಡಿತು ಬಟ್ಟಲಂತ ಕಣ್ಣ ತೆರೆದು ಪುಟ್ಟ ಮೀನು ನಗೆಯ ಸೂಸಿ ಗೆಳೆಯನಾಗು ನನಗೆ ಎನುತ ಅಂಗಲಾಚಿತು...

Comments 3

  1. ಪೆರೂರು ಜಾರು, ಉಡುಪಿ
    Jan 16, 2023 Reply

    ನೋಟದ ನಂಜನಿಳಿಸಿದ ಮೇಲೆ
    ಜ್ಞಾನದ ಹೊರೆಯನಿಳಿಸನ್ನಕ್ಕ
    ಭಕ್ತಿಯ ಠಕ್ಕರ ಸಂಗ ಎಚ್ಚರವಕ್ಕ

  2. VIJAYAKUMAR KAMMAR
    Jan 16, 2023 Reply

    ಇದರಾಗ “ಜ್ಞಾನದ ಹೊರೆ” ಯಾಕ ಅಂತ ತಿಳಿಲಿಲ್ಲಾ. 1,3,4 ಹೊಂದೈತಿ. ಇದು ಯಾಕ ಅಂತ ಕುತೂಹಲ ಅಷ್ಟೆ.

  3. VijayalaksHmi s
    Feb 10, 2023 Reply

    Guruvige namana kavithe bahala sogasagide !🙏

Leave a Reply to ಪೆರೂರು ಜಾರು, ಉಡುಪಿ Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅನಿಮಿಷ: ಚಿಗುರಿದ ಒಲುಮೆ (4)
ಅನಿಮಿಷ: ಚಿಗುರಿದ ಒಲುಮೆ (4)
December 13, 2024
ಬಯಲಾದ ಬಸವಯೋಗಿಗಳು
ಬಯಲಾದ ಬಸವಯೋಗಿಗಳು
April 3, 2019
ಛಲಬೇಕು ಶರಣಂಗೆ…
ಛಲಬೇಕು ಶರಣಂಗೆ…
April 29, 2018
ವಚನಗಳಲ್ಲಿ ದೇವನೊಲುಮೆ… ಒಂದು ಚಿಂತನೆ
ವಚನಗಳಲ್ಲಿ ದೇವನೊಲುಮೆ… ಒಂದು ಚಿಂತನೆ
September 14, 2024
ಧರ್ಮೋ ರಕ್ಷತಿ ರಕ್ಷಿತಃ
ಧರ್ಮೋ ರಕ್ಷತಿ ರಕ್ಷಿತಃ
January 7, 2019
…ಬಯಲನೆ ಬಿತ್ತಿ
…ಬಯಲನೆ ಬಿತ್ತಿ
August 11, 2025
ಸವಣ ಸಾಧಕ ಶರಣನಾದ ಬಳ್ಳೇಶ ಮಲ್ಲಯ್ಯ
ಸವಣ ಸಾಧಕ ಶರಣನಾದ ಬಳ್ಳೇಶ ಮಲ್ಲಯ್ಯ
April 29, 2018
ಹೊತ್ತು ಹೋಗದ ಮುನ್ನ…
ಹೊತ್ತು ಹೋಗದ ಮುನ್ನ…
April 29, 2018
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
February 7, 2021
ಬರಿದಾಗುವ ಬೆರಗು
ಬರಿದಾಗುವ ಬೆರಗು
February 6, 2025
Copyright © 2025 Bayalu