Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕೇಳಿಸಿತೇ?
Share:
Poems April 6, 2024 ಜ್ಯೋತಿಲಿಂಗಪ್ಪ

ಕೇಳಿಸಿತೇ?

ಈ
ಮೂರರ ತಿರುಳ ತೆಗೆದವರಾರು
ಐದರ ಒಗಟ ಬಿಡಿಸಿದವರಾರು
ಆರರ ಬೆಡಗು ಸವಿದವರಾರು

ಎರಡರಲಿ ಒಂದಾಗುವುದು
ಒಂದರಲಿ ಹಲವಾಗುವುದು
ಒಂದೆರಡಾಗಿ ಎರಡು ನಾಲ್ಕಾಗಿ…
ಅನಂತವ ಕಂಡರೆ ಹೇಳಿ

ನಿಂದರೆ ನೀ ಕೆಡುವೆ
ಬಂದರೆ ನಾ ಕೆಡುವೆ

ಸಂತೆಗೆ ಬಂದವರ ಕೂಡೆ
ಸಮಯಾಚಾರವೇ…

ಅರಿವ ಮುನ್ನವೇ ಅರಿದೆನೆಂಬುದಿಲ್ಲ
ಅರಿದ ಮೇಲೆ ಅರಿವೆಂಬುದೇ ಇರದು

ನೆಲಕ್ಕೆ ಬಿತ್ತಿದ ಬೀಜ
ಮೊಳಕೆಯ ಸದ್ದು…
ಕೇಳಿಸಿತೇ…?

Previous post ಗುರು ಶಿಷ್ಯ ಸಂಬಂಧ
ಗುರು ಶಿಷ್ಯ ಸಂಬಂಧ
Next post ಒಂದಾಗಿ ನಿಂತೆ…
ಒಂದಾಗಿ ನಿಂತೆ…

Related Posts

ಮೊಟ್ಟೆ- ಗೂಡು
Share:
Poems

ಮೊಟ್ಟೆ- ಗೂಡು

April 11, 2025 ಜ್ಯೋತಿಲಿಂಗಪ್ಪ
ಮರೆವೆಯ ಗೂಡಲಿ ಒಂದು ಮರಿ ಆಸೆಯ ಮೊಟ್ಟೆ ಗೂಡು ಸಣ್ಣದು ಮೊಟ್ಟೆ ದೊಡ್ಡದು ಮೊಟ್ಟೆ ಬಿರಿದರೆ ಗೂಡು ಸಾಯುವುದು ಗೂಡು ಸಾಯದಿರೆ ಮೊಟ್ಟೆ ಸಾಯುವುದು ಏನು ಮರೆವೆಯೋ ಸೀಸೆಯು ಒಡೆಯದೆ...
ಆ ದಾರಿಯೇನು ಕುರುಡೇ…
Share:
Poems

ಆ ದಾರಿಯೇನು ಕುರುಡೇ…

June 5, 2021 ಜ್ಯೋತಿಲಿಂಗಪ್ಪ
ಅಪ್ಪ ಬೆಳೆಸಿದ ಆಲ ಬಯಲ ಮುಟ್ಟಲಿಲ್ಲ ಮಗ ಕಡಿದ ಬಿಳಿಲು ನೆಲ ಮುಟ್ಟಲಿಲ್ಲ ಈಗ ಆಲದ ಬುಡ ಬಯಲೊಳಗೆ ನೆಲಕಂಟಿದೆ ಈ ಹುಣುಸೇ ಮರದ ಹುಳಿಗೇನು ಮುಪ್ಪೇ ಕನ್ಯೆಯ ಬೆನ್ನ ಬೆವರ ಉಪ್ಪು...

Comments 1

  1. ಜಯರಾಜ ಸಿದ್ದಾಪುರ
    Apr 12, 2024 Reply

    ಮೂರು, ಐದು, ಆರು, ಎರಡು, ಒಂದು… ಇವುಗಳ ಮರ್ಮ ತಿಳಿಯದೇ ಮೊಳಕೆಯ ಸದ್ದು ಹೇಗೆ ತಾನೆ ಕೇಳಿಸುತ್ತದೆ?

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅಷ್ಟವಿಧಾರ್ಚನೆ – ಷೋಡಶೋಪಚಾರ
ಅಷ್ಟವಿಧಾರ್ಚನೆ – ಷೋಡಶೋಪಚಾರ
November 1, 2018
ಅನುಭಾವ ಮತ್ತು ಅನಿರ್ವಚನೀಯತೆ
ಅನುಭಾವ ಮತ್ತು ಅನಿರ್ವಚನೀಯತೆ
March 12, 2022
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
April 29, 2018
ಮುಖ- ಮುಖವಾಡ
ಮುಖ- ಮುಖವಾಡ
February 7, 2021
ಬೆಂಕಿಯೊಳಗಣ ಬೆಳಕು
ಬೆಂಕಿಯೊಳಗಣ ಬೆಳಕು
June 12, 2025
ನೆಲದ ನಿಧಾನ
ನೆಲದ ನಿಧಾನ
April 29, 2018
ಅನಿಮಿಷನ ಕಥೆ- 6
ಅನಿಮಿಷನ ಕಥೆ- 6
April 11, 2025
ಗುರು ಶಿಷ್ಯ ಸಂಬಂಧ
ಗುರು ಶಿಷ್ಯ ಸಂಬಂಧ
April 6, 2024
ಶರಣರು ಕಂಡ ಆಹಾರ ಪದ್ಧತಿ
ಶರಣರು ಕಂಡ ಆಹಾರ ಪದ್ಧತಿ
April 29, 2018
ಪೂರ್ವಚಿಂತನೆಯಿಂದ ಕಂಡು…
ಪೂರ್ವಚಿಂತನೆಯಿಂದ ಕಂಡು…
November 7, 2020
Copyright © 2026 Bayalu