Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕಲಿಸು ಗುರುವೆ…
Share:
Poems July 10, 2025 ಕೆ.ಆರ್ ಮಂಗಳಾ

ಕಲಿಸು ಗುರುವೆ…

ಬಳಲಿ ಬಂದೆನು ಗುರುವೆ
ನಿನ್ನ ಬಳಿಗೆ
ಬಳಲಿಕೆಯ ಪರಿಹರಿಸು
ಎದೆಯ ದನಿಯೆ

ಇಲ್ಲಸಲ್ಲದ ಹೊರೆಯ
ಹೊತ್ತು ಏಗಿದೆ ಹೆಗಲು
ಜೀತದಲೆ ಜೀಕುತ್ತಾ
ದಿನವ ದೂಡಿರುವೆ
ನಾನು ನನ್ನದು ಎಂಬ
ಗಂಟುನಂಟುಗಳಲ್ಲಿ
ರೆಕ್ಕೆಗಳ ಹೊಲೆದಿರುವೆ
ಆಗಸವ ಮರೆತು…

ಹಗಲ ಮೋಡಗಳು
ಬೆಳಕು ನುಂಗಿರುವಾಗ
ಕವಲು ದಾರಿಗಳಲ್ಲಿ
ಎಡವುತಿರುವೆ
ಮಂಜುಗಣ್ಣಿನಲಿ
ಜಾರಿ ಬಿದ್ದಿರುವೆ
ಮಬ್ಬುಗತ್ತಲಿಗೊಂದು
ಕೈದೀಪ ಹಚ್ಚು…

ಅರಿವು ಮರೆವಿನ ಸಮರ
ಬೆಳಕು ಕತ್ತಲಿನಾಟ
ಕಣ್ಣು ಸೋಲುತಲಿಹವು
ತ್ರಾಣ ಕುಂದಿ
ಎಷ್ಟು ದೂರದ ಪಯಣ
ದಾರಿಯುದ್ದಕೂ ಕದನ
ಪ್ರಾಣ ಹಾರುವ ಮುನ್ನ
ಕಾದಿ ಗೆಲುವುದ ಕಲಿಸು

Previous post ದಡ ಸೋಂಕದ ಅಲೆಗಳು
ದಡ ಸೋಂಕದ ಅಲೆಗಳು
Next post ಅರಿವಿಗೆ ಬಂದ ಆರು ಸ್ಥಲಗಳು
ಅರಿವಿಗೆ ಬಂದ ಆರು ಸ್ಥಲಗಳು

Related Posts

ಇದ್ದಷ್ಟೇ…
Share:
Poems

ಇದ್ದಷ್ಟೇ…

January 10, 2021 ಜ್ಯೋತಿಲಿಂಗಪ್ಪ
ಇದ್ದಷ್ಟೇ ಇದರಾಚೆ ಕನಸೂ ಇಲ್ಲ ನಿದ್ದೆಯೂ ಇಲ್ಲ ಇರುವಷ್ಟು ಇರುವುದು ಇದ್ದ ಹಾಗೆ ಇರು ಕನಸು ಇದ್ದಾಗಷ್ಟೇ ಕನಸು ಇರುವುದು ಎಚ್ಚರಾದರೆ ಕನಸು ಕನವರಿಸುವುದು ಎಚ್ಚರಾಗು ಉದಯದ ಮೊದಲ...
ನೆಲದ ನಿಧಾನ
Share:
Poems

ನೆಲದ ನಿಧಾನ

April 29, 2018 ಕೆ.ಆರ್ ಮಂಗಳಾ
ನನ್ನ ಶರಣರು ಅವರು ಬೇರಿಳಿಸಿ, ಬೆವರಿಳಿಸಿ ಭೂಮಿ ಉತ್ತವರು ಕಕ್ಕುಲತೆಯಿಂದ ಬದುಕ ಕಟ್ಟಿದವರು ಹಸಿದ ಹೊಟ್ಟೆಗಳಿಗೆ ಅನ್ನ ಕೊಟ್ಟವರು ಎದೆಯಿಂದ ಎದೆಗೆ ಪ್ರೀತಿ ಹರಿಸಿದವರು. ನನ್ನ...

Comments 1

  1. Shraddhananda Swamiji
    Jul 15, 2025 Reply

    “Before leaving this world let me learn to win the battle of life this is my humble prayer to you my teacher” This is simple translation of last line of your wonderful brilliant poem.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಈ ಕ್ಷಣದ ಸತ್ಯ
ಈ ಕ್ಷಣದ ಸತ್ಯ
March 12, 2022
ವಚನಗಳಲ್ಲಿ ವೈಜ್ಞಾನಿಕ ಚಿಂತನೆ
ವಚನಗಳಲ್ಲಿ ವೈಜ್ಞಾನಿಕ ಚಿಂತನೆ
March 6, 2024
ವೀರದಾಸಮ್ಮನ ಸಹಜಾಮನಸ್ಕ ಯೋಗ
ವೀರದಾಸಮ್ಮನ ಸಹಜಾಮನಸ್ಕ ಯೋಗ
October 21, 2024
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
January 8, 2023
ನಡುವೆ ಸುಳಿವಾತ್ಮ…
ನಡುವೆ ಸುಳಿವಾತ್ಮ…
April 6, 2024
ಮಿಲಿಂದ ಪ್ರಶ್ನೆ – ಮೂರು ಪ್ರಶ್ನೋತ್ತರಗಳು
ಮಿಲಿಂದ ಪ್ರಶ್ನೆ – ಮೂರು ಪ್ರಶ್ನೋತ್ತರಗಳು
July 10, 2023
ತತ್ವಪದಕಾರರ  ಸಾಮರಸ್ಯ ಲೋಕ
ತತ್ವಪದಕಾರರ ಸಾಮರಸ್ಯ ಲೋಕ
September 6, 2023
ಸೂರ್ಯ
ಸೂರ್ಯ
January 8, 2023
ತಿರುಳ್ಗನ್ನಡದ ತಿರುಕ: ಉತ್ತಂಗಿ ಚೆನ್ನಪ್ಪ
ತಿರುಳ್ಗನ್ನಡದ ತಿರುಕ: ಉತ್ತಂಗಿ ಚೆನ್ನಪ್ಪ
October 19, 2025
ಅಗ್ನಿಯ ಸುಡುವಲ್ಲಿ…
ಅಗ್ನಿಯ ಸುಡುವಲ್ಲಿ…
April 29, 2018
Copyright © 2026 Bayalu