Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕಣ್ಣ ದೀಪ
Share:
Poems September 7, 2021 ಜ್ಯೋತಿಲಿಂಗಪ್ಪ

ಕಣ್ಣ ದೀಪ

ನನ್ನ
ಮನೆಯ ಅಂಗಳದಲ್ಲಿ
ಒಬ್ಬ ಬುದ್ಧನಿದ್ದಾನೆ

ಶೋ ಕೇಸಿನಲ್ಲಿ
ಒಬ್ಬ ಬುದ್ಧನಿದ್ದಾನೆ

ಗೋಡೆಯ ಮೇಲೆ
ಒಬ್ಬ ಬುದ್ಧನಿದ್ದಾನೆ

ಎಲ್ಲೆಲ್ಲೂ ಬುದ್ಧ ಬುದ್ಧ
ಒಳಗೆ ಖಾಲಿ

ಗೋಡೆಯ
ಹಿಂದೆ ದೀಪ ಇಟ್ಟು ಹೋದ

ಊರು
ತುಂಬಾ ಬಿಕ್ಕುಗಳೇ

ಬೇಡುವ
ಕೈ ಕೊಡುವ ಕೈಯ ಕಾಯುತಿದೆ

ಬಯಲ
ಹುಡುಕಿ ಹೊರಟಿದ್ದು ನಿಜ
ಬಯಲಾಗಲಿಲ್ಲ

ನಿಜದ
ದಾರಿಯಲಿ ಸಿಕ್ಕಿದ್ದು
ಬಯಲು

ಕಣ್ಣ
ದೀಪ ಆರಿಸುವ ಗಾಳಿ
ಕತ್ತಲು

ಈಗ
ಊರ ತುಂಬಾ ಬಸವಗಳೇ
ಲಿಂಗವಿಲ್ಲ

ಆ
ಪ್ರಾಣಿಗೆ ಹೊಟ್ಟೆ
ತುಂಬಿತೋ ಸಿಟ್ಟೆಲ್ಲಾ ಇಳಿಯಿತು

ಈ
ಪ್ರಾಣಕೆ ಹೊಟ್ಟೆಯೇ ಇಲ್ಲಾ
ಸಿಟ್ಟೇ ಎಲ್ಲಾ.

Previous post ಅಸ್ತಿತ್ವವಾದಿ ಬಸವಣ್ಣ
ಅಸ್ತಿತ್ವವಾದಿ ಬಸವಣ್ಣ
Next post ಗುರುವೆ ಸುಜ್ಞಾನವೇ…
ಗುರುವೆ ಸುಜ್ಞಾನವೇ…

Related Posts

ನದಿಯನರಸುತ್ತಾ…
Share:
Poems

ನದಿಯನರಸುತ್ತಾ…

October 6, 2020 ಜ್ಯೋತಿಲಿಂಗಪ್ಪ
ಜ್ಞಾನವೆಂಬುದೇನು? ಮನೋ ಭೇದ. -ಅಲ್ಲಮ ನಾನು ಹುಟ್ಟುವಾಗ ಹೇಳಿ ಬಂದೆನೇ ಸಾಯುವಾಗಲೂ ಅಷ್ಟೇ ಬದುಕು ಹೇಳದು ಏನೂ ಈ ಕಡಲಲಿ ಕಳೆದಿರುವ ನದಿ ಹುಡುಕುತಿರುವೆ ಹುಡುಕುತಿರುವ ನದಿ...
WHO AM I?
Share:
Poems

WHO AM I?

June 17, 2020 Chittara K. V
I have a wide brain And a open mind I think a lot at times But I come to a point To ask myself- Who am I? I swallow the pain But speak with the...

Comments 2

  1. Rajesh Bhadravathi
    Sep 9, 2021 Reply

    ನನ್ನ ಮನೆಯಲ್ಲೂ ಬುದ್ಧನ ಮೂರ್ತಿಗಳು ತುಂಬಿಕೊಂಡಿವೆ. ನಿಮ್ಮ ಕವನದ ಆಶಯ ನೇರ ನನ್ನ ಮನಸ್ಸನ್ನೇ ಕೆಣಕುವಂತೆ ತೋರಿತು.

  2. Shrinivasa
    Sep 23, 2021 Reply

    I absolutely love your blog, content and layout are amazing. I find many of your posts to be exactly what I am looking for. Thank you.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಬಯಲಾದ ದೇವರು
ಬಯಲಾದ ದೇವರು
January 15, 2026
ಹೀಗೊಂದು ಸಂವಾದ…
ಹೀಗೊಂದು ಸಂವಾದ…
April 6, 2023
ಮನುಷ್ಯತ್ವ ಮರೆಯಾಗದಿರಲಿ
ಮನುಷ್ಯತ್ವ ಮರೆಯಾಗದಿರಲಿ
August 6, 2022
ಸತ್ಯ, ಪರೋಪಕಾರ, ಬ್ರಹ್ಮಚರ್ಯ
ಸತ್ಯ, ಪರೋಪಕಾರ, ಬ್ರಹ್ಮಚರ್ಯ
February 6, 2025
ಲಿಂಗಾಯತಧರ್ಮ ಸಂಸ್ಥಾಪಕರು -2
ಲಿಂಗಾಯತಧರ್ಮ ಸಂಸ್ಥಾಪಕರು -2
May 8, 2024
ಮನವೇ ಮನವೇ…
ಮನವೇ ಮನವೇ…
May 6, 2020
ಕಾಲ ಕಲ್ಪಿತವೇ?!
ಕಾಲ ಕಲ್ಪಿತವೇ?!
September 14, 2024
ಲಿಂಗಾಯತರ ಅವೈದಿಕ ನಂಬಿಕೆಗಳು
ಲಿಂಗಾಯತರ ಅವೈದಿಕ ನಂಬಿಕೆಗಳು
April 29, 2018
ಬಯಲಾದ ಬಸವಯೋಗಿಗಳು
ಬಯಲಾದ ಬಸವಯೋಗಿಗಳು
April 3, 2019
ಗುರುವಿಗೆ ನಮನ…
ಗುರುವಿಗೆ ನಮನ…
January 8, 2023
Copyright © 2026 Bayalu