Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಆಸರೆ
Share:
Poems August 6, 2022 ಜ್ಯೋತಿಲಿಂಗಪ್ಪ

ಆಸರೆ

ಅರಿವಿನ
ಮನೆಯ ಮುಂದೆ ನಿಂತು
ಭಿಕ್ಷೆ
ಬೇಡುತಿರುವೆ ನಿಂತು ನೀಡುವರು
ಯಾರು
ಮನೆ ಖಾಲಿ

ಅರಿಯದೆ ಅರಿವು ನಿಲ್ಲದು

ಊರ
ಹೊರಗೆ ನಿಂತು
ಒಳಗೆ
ಹೋಗುವ ದಾರಿ ಕೇಳುತಿರುವೆ
ಹೇಳರು.

ಗಾಳಿಯ ಸದ್ದು
ಮಣ್ಣಿನ ವಾಸನೆ
ನೀರ ನಿನಾದ
ಬಯಲ ಮೋಹ

ಅರಿವಿನ ಕನ್ನಡಿಯಲಿ ಬಿಂಬ

ಊರ ಒಳ ಹೊರಗು

ಬಯಲಿನಲಿ ಏನುಂಟು
ಏನಿಲ್ಲ ಎಲ್ಲವೂ ಖಾಲಿ

ಅಂಗಣ
ಒಳಗೊಂದು ನೀರ ಹೆಜ್ಜೆ.

*** ***

ಈ
ನೆಲದ ಹಾಸಿಗೆ ನನದಲ್ಲ
ಆಗಸದ ಹೊದಿಕೆ ನನದಲ್ಲ
ಹಸಿದು ಉಣ್ಣುವ ಉಣ್ಣೂ ನನದಲ್ಲ

ನನ್ನದೆನ್ನುವುದೇನಿದೆ ನಾನು
‘ನಾನೂ’ ನನದಲ್ಲ
ಈ ‘ಅರಿವು’ ಬಾರದೇ ಇರದು

ಆಸರೆಗೆ ಗೋಡೆ ಮಾಡುಗಳಿಲ್ಲದ
ಬಯಲು ಧರ್ಮ ಇದೆ

ಇರು ಇನ್ನೆರಡು ದಿನ
ತೊಗಲರಿದು ಇಲ್ಲವಾಗುವೆ
ನಾನೇನೆಂದರಿಯುವೆ ಕೊಡಹು ಜೋಳಿಗೆ

ಈಗಷ್ಟೇ ದಾರಿ ಬದಿಯ ಮರಗಳಲಿ
ಚೆರ್ರೀ ಹೂಗಳು ಅರಳಿವೆ
ನೋಡು

ಯಾವ ದಾರಿಯೂ ತೆರೆಯದು.

Previous post ಮನುಷ್ಯತ್ವ ಮರೆಯಾಗದಿರಲಿ
ಮನುಷ್ಯತ್ವ ಮರೆಯಾಗದಿರಲಿ
Next post ಹುಚ್ಚು ಖೋಡಿ ಮನಸು
ಹುಚ್ಚು ಖೋಡಿ ಮನಸು

Related Posts

ಸುಳ್ಳು ಅನ್ನೋದು…
Share:
Poems

ಸುಳ್ಳು ಅನ್ನೋದು…

April 6, 2023 ಜ್ಯೋತಿಲಿಂಗಪ್ಪ
ನಾ ಭಕ್ತನಾಗದೆ ನೀ ದೇವನಾದೆಯಾ ಭಕ್ತಿ ಎನ್ನಳವಲ್ಲ ದೇವತನವೂ ನಿನ್ನಳವಲ್ಲ ಕೂಡಿ ಕೊಂಡಾಡುವ ಭಾವ ಭಾವ ತಪ್ಪಿದ ಇಜ್ಜೋಡು ಕತ್ತಲೊಳಗೆ ಬೆತ್ತಲಾಟ ಅಂಗಣದೊಳಗಾಡುವ ಆರು ಗಿಳಿವಿಂಡು...
ಅಪ್ಪನಿಲ್ಲದ ಮನೆ
Share:
Poems

ಅಪ್ಪನಿಲ್ಲದ ಮನೆ

January 10, 2021 ಕೆ.ಆರ್ ಮಂಗಳಾ
ಅಪ್ಪನಿಲ್ಲದ ಮನೆ ಎಲ್ಲ ಇದ್ದೂ ಭಣಗುಡುತ್ತಿದೆ. ಎದೆಯ ಬೆಳಕೇ ಆರಿ ಹೋದಂತೆ ಮನದಲ್ಲಿ ಗಾಢ ಕಾರ್ಗತ್ತಲೆ ಅವ್ವ ಹೇಳಿಕೊಂಡು ಹಗುರಾಗುತ್ತಿದ್ದಳು ಅಪ್ಪ ಮೌನ ಹೊದ್ದು...

Comments 1

  1. Vinayak Narasapura
    Aug 8, 2022 Reply

    ಅರಿವಿನ ಭಿಕ್ಷೆಯ ಕವನ ಮನಮುಟ್ಟುವಂತಿದೆ. ಕವಿತೆಯ ಹಲವಾರು ಸಾಲುಗಳು ಮತ್ತೆ ಮತ್ತೆ ಓದಿಸಿಕೊಂಡವು.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕಾದಿ ಗೆಲಿಸಯ್ಯ ಎನ್ನನು
ಕಾದಿ ಗೆಲಿಸಯ್ಯ ಎನ್ನನು
April 29, 2018
ಭಾರ
ಭಾರ
October 6, 2020
ಸದ್ಗುರು ಸಾಧಕ ಬಸವಣ್ಣ
ಸದ್ಗುರು ಸಾಧಕ ಬಸವಣ್ಣ
May 6, 2021
ಭೃತ್ಯಾಚಾರ
ಭೃತ್ಯಾಚಾರ
June 5, 2021
ನಾನು  ಬಿಂಬ
ನಾನು ಬಿಂಬ
September 13, 2025
ಸಂತೆಯ ಸಂತ
ಸಂತೆಯ ಸಂತ
September 7, 2020
ಸಹಜತೆಯೇ ನಿಜನೆಲೆ
ಸಹಜತೆಯೇ ನಿಜನೆಲೆ
February 5, 2020
ಮಾಡುವಂತಿರಬೇಕು, ಮಾಡದಂತಿರಬೇಕು…
ಮಾಡುವಂತಿರಬೇಕು, ಮಾಡದಂತಿರಬೇಕು…
April 29, 2018
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
July 4, 2022
ಅಷ್ಟವಿಧಾರ್ಚನೆ – ಷೋಡಶೋಪಚಾರ
ಅಷ್ಟವಿಧಾರ್ಚನೆ – ಷೋಡಶೋಪಚಾರ
November 1, 2018
Copyright © 2025 Bayalu