Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಆಸರೆ
Share:
Poems August 6, 2022 ಜ್ಯೋತಿಲಿಂಗಪ್ಪ

ಆಸರೆ

ಅರಿವಿನ
ಮನೆಯ ಮುಂದೆ ನಿಂತು
ಭಿಕ್ಷೆ
ಬೇಡುತಿರುವೆ ನಿಂತು ನೀಡುವರು
ಯಾರು
ಮನೆ ಖಾಲಿ

ಅರಿಯದೆ ಅರಿವು ನಿಲ್ಲದು

ಊರ
ಹೊರಗೆ ನಿಂತು
ಒಳಗೆ
ಹೋಗುವ ದಾರಿ ಕೇಳುತಿರುವೆ
ಹೇಳರು.

ಗಾಳಿಯ ಸದ್ದು
ಮಣ್ಣಿನ ವಾಸನೆ
ನೀರ ನಿನಾದ
ಬಯಲ ಮೋಹ

ಅರಿವಿನ ಕನ್ನಡಿಯಲಿ ಬಿಂಬ

ಊರ ಒಳ ಹೊರಗು

ಬಯಲಿನಲಿ ಏನುಂಟು
ಏನಿಲ್ಲ ಎಲ್ಲವೂ ಖಾಲಿ

ಅಂಗಣ
ಒಳಗೊಂದು ನೀರ ಹೆಜ್ಜೆ.

*** ***

ಈ
ನೆಲದ ಹಾಸಿಗೆ ನನದಲ್ಲ
ಆಗಸದ ಹೊದಿಕೆ ನನದಲ್ಲ
ಹಸಿದು ಉಣ್ಣುವ ಉಣ್ಣೂ ನನದಲ್ಲ

ನನ್ನದೆನ್ನುವುದೇನಿದೆ ನಾನು
‘ನಾನೂ’ ನನದಲ್ಲ
ಈ ‘ಅರಿವು’ ಬಾರದೇ ಇರದು

ಆಸರೆಗೆ ಗೋಡೆ ಮಾಡುಗಳಿಲ್ಲದ
ಬಯಲು ಧರ್ಮ ಇದೆ

ಇರು ಇನ್ನೆರಡು ದಿನ
ತೊಗಲರಿದು ಇಲ್ಲವಾಗುವೆ
ನಾನೇನೆಂದರಿಯುವೆ ಕೊಡಹು ಜೋಳಿಗೆ

ಈಗಷ್ಟೇ ದಾರಿ ಬದಿಯ ಮರಗಳಲಿ
ಚೆರ್ರೀ ಹೂಗಳು ಅರಳಿವೆ
ನೋಡು

ಯಾವ ದಾರಿಯೂ ತೆರೆಯದು.

Previous post ಮನುಷ್ಯತ್ವ ಮರೆಯಾಗದಿರಲಿ
ಮನುಷ್ಯತ್ವ ಮರೆಯಾಗದಿರಲಿ
Next post ಹುಚ್ಚು ಖೋಡಿ ಮನಸು
ಹುಚ್ಚು ಖೋಡಿ ಮನಸು

Related Posts

ಹಣತೆ ಸಾಕು
Share:
Poems

ಹಣತೆ ಸಾಕು

September 14, 2024 ಜ್ಯೋತಿಲಿಂಗಪ್ಪ
ಬೆಳಕ ನೋಡಲಾಗದ ಕಣ್ಣು ದೀಪ ಹಚ್ಚಿದರೆ ಕಣ್ಣು ಕತ್ತಲು ಹಚ್ಚದಿರೆ ಹೃದಯ ಕತ್ತಲು ದೀಪ ಬೆಳಗಿಸುವ ಕಷ್ಟ ಕತ್ತಲೆಂಬುದು ಕತ್ತಲಾಗದು ಬೆಳಕೆಂಬುದು ಬೆಳಕಾಗದು ಏನೂ ಕೂಡಿಡದೆ...
ಅರಿವು-ಮರೆವಿನಾಟ
Share:
Poems

ಅರಿವು-ಮರೆವಿನಾಟ

August 8, 2021 ಕೆ.ಆರ್ ಮಂಗಳಾ
ನೀನರಿಯೆ ನಾನಾರೆಂದು ನಾಮರೆತೆ ನೀನಾರೆಂದು ನನ್ನಲ್ಲೇ ನೀನಿದ್ದರೂ ನಿನ್ನಿಂದಲೇ ನಾ ಬದುಕಿದ್ದರೂ… ಇದೇ ಅಲ್ಲವೇ ವಿಸ್ಮಯ? ನಾ-ನೀನೆಂಬ ಉಭಯವೇ ಇಲ್ಲ ಭ್ರಮೆಗೆ ಬಲಿಯಾಗದೆ ತಿಳಿದು...

Comments 1

  1. Vinayak Narasapura
    Aug 8, 2022 Reply

    ಅರಿವಿನ ಭಿಕ್ಷೆಯ ಕವನ ಮನಮುಟ್ಟುವಂತಿದೆ. ಕವಿತೆಯ ಹಲವಾರು ಸಾಲುಗಳು ಮತ್ತೆ ಮತ್ತೆ ಓದಿಸಿಕೊಂಡವು.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮೂರನೇ ಕಣ್ಣು: ಅನಿಮಿಷ(11)
ಮೂರನೇ ಕಣ್ಣು: ಅನಿಮಿಷ(11)
October 19, 2025
ಮೈಸೂರು ಜನಗಣತಿಯ ಮಹತ್ವ (1871)
ಮೈಸೂರು ಜನಗಣತಿಯ ಮಹತ್ವ (1871)
March 9, 2023
ಹಿರಿಯರ ಹಾದಿ…
ಹಿರಿಯರ ಹಾದಿ…
July 4, 2022
ಅವಿರಳ ಅನುಭಾವಿ: ಚನ್ನಬಸವಣ್ಣ
ಅವಿರಳ ಅನುಭಾವಿ: ಚನ್ನಬಸವಣ್ಣ
March 6, 2020
ಶಿವಾಚಾರ
ಶಿವಾಚಾರ
April 9, 2021
ಸುಮ್ಮನೆ ಇರು
ಸುಮ್ಮನೆ ಇರು
December 6, 2020
ಪೊರೆವ ದನಿ…
ಪೊರೆವ ದನಿ…
August 11, 2025
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
April 29, 2018
ಯುವಮನಗಳೊಂದಿಗೆ ಸಂವಾದ
ಯುವಮನಗಳೊಂದಿಗೆ ಸಂವಾದ
September 13, 2025
ಅರಿವಿಗೆ ಬಂದ ಆರು ಸ್ಥಲಗಳು
ಅರಿವಿಗೆ ಬಂದ ಆರು ಸ್ಥಲಗಳು
August 11, 2025
Copyright © 2025 Bayalu