Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅರಿವು-ಮರೆವಿನಾಟ
Share:
Poems August 8, 2021 ಕೆ.ಆರ್ ಮಂಗಳಾ

ಅರಿವು-ಮರೆವಿನಾಟ

ನೀನರಿಯೆ ನಾನಾರೆಂದು
ನಾಮರೆತೆ ನೀನಾರೆಂದು
ನನ್ನಲ್ಲೇ ನೀನಿದ್ದರೂ
ನಿನ್ನಿಂದಲೇ ನಾ ಬದುಕಿದ್ದರೂ…
ಇದೇ ಅಲ್ಲವೇ ವಿಸ್ಮಯ?

ನಾ-ನೀನೆಂಬ ಉಭಯವೇ ಇಲ್ಲ
ಭ್ರಮೆಗೆ ಬಲಿಯಾಗದೆ
ತಿಳಿದು ನೋಡೆಂದ ಗುರು-
ನೀನೇ ನಾನೋ, ನಾನೇ ನೀನೋ…
ಮತ್ತೇ ಶುರುವಾಯ್ತು ಗೊಂದಲ.

ನೀನು ನೀನೆಂದು
ಕನವರಿಸುತಿರುವುದೆಲ್ಲ ಬುದ್ಧಿಯ ಬೇಧ
ನಾನು ನಾನು ಎಂದು
ಬಡಬಡಿಸುತಿರುವುದೆಲ್ಲ ಮನದ ಕಸ

ಈ ತಿಪ್ಪೆಯ ಮೇಲೆ ಕೂತು
ಹಿಡಿಯಬಹುದೇ ಸತ್ಯದ ಕೈಯ?
ಅಂಟಿಸಿಕೊಂಡ ರೆಕ್ಕೆಗಳ ನೆಚ್ಚಿ
ಹಾರಲಾದೀತೆ ಬಯಲಿನತ್ತ?

ಬಣ್ಣಬಣ್ಣದ ಮಾತುಗಳೆಲ್ಲ
ಮೌನದಲಿ ಕರಗಿ
ಎಲ್ಲ ಖಾಲಿಯಾಗುವ ತನಕ
ಕೇಳಲಾದೀತೆ ಎದೆಯ ಗುಟ್ಟು?

Previous post ಹುಡುಕಾಟ…
ಹುಡುಕಾಟ…
Next post ನಾನು ಕಂಡ ಡಾ.ಕಲಬುರ್ಗಿ
ನಾನು ಕಂಡ ಡಾ.ಕಲಬುರ್ಗಿ

Related Posts

ಗುಟುಕು ಆಸೆ…
Share:
Poems

ಗುಟುಕು ಆಸೆ…

May 8, 2024 ಜ್ಯೋತಿಲಿಂಗಪ್ಪ
ಕಣ್ಣ ಮುಂದಣ ಬೆಳಕು ಹಿಂದಣ ನೆರಳು ಕಂಡೂ ಕಾಣವು ಈ ಕಣ್ಣಿಗೆ ನಾಚಿಕೆಯೇ ಸದ್ದು ಕಾಣಲು ಹವಣಿಸುವುದು ಸದ್ದು ಕಾಣುವುದೇ..ಕೇಳಿಸಿಕೋ ಗಗನಕ್ಕೆ ಬಯಲುಂಟೇ ಬಯಲಿಗೆ ಗಗನ ಉಂಟೇ ರಗುತದ...
ಬೆಂಕಿಯೊಳಗಣ ಬೆಳಕು
Share:
Poems

ಬೆಂಕಿಯೊಳಗಣ ಬೆಳಕು

June 12, 2025 ಜ್ಯೋತಿಲಿಂಗಪ್ಪ
ನಿಜದ ಮುಖವ ಬಲ್ಲೆಯಾ ಅವರ ಮುಖವ ಇವರು ನೋಡುವುದು ಇವರ ಮುಖವ ಅವರು ನೋಡುವುದು ಅವರವರ ಮುಖವ ಅವರರಿಯರು ಇಚ್ಛೆಯನರಿದು ಮಾತಾಡಿದರೆ ಮೆಚ್ಚುಗೆ ಹನಿ ಹನಿ ಹರಿದು ಹಳ್ಳ ಹಳ್ಳ ಹಳ್ಳ...

Comments 2

  1. Jyothilingappa
    Aug 9, 2021 Reply

    ಬುದ್ಧಿಯ ಬೇಧ
    ಮನದ ಕಸ… ಆಹಾ!

  2. ಪೇರೂರು ಜಾರು, ಮಂಗಳೂರು
    Aug 14, 2021 Reply

    ಅರಿವು ಮರೆವು
    ಅರಿತೇ ಮರೆಯುವುದು
    ಅರಿಯದೇ ಮರೆಯುವುದು
    ಕೆಲವ ಕುರಿತು ಮರೆಯುವುದು
    ಬಯಲಾಗು ಮರೆಯುವುದು
    ಎಲ್ಲ ಆಟಕ್ಕೂ ಕೊನೆ ತಿಳಿ
    ಅದೇ ಅರಿವು ತಿಳಿಯದೊಡೆ
    ಬಾಳ ಮರೆವು
    ಆಟ ಮುಗಿಯಲೇ ಬೇಕು
    ಮಂಗಳ ಹಾಡಲೇ ಬೇಕು
    (ಮಂಗಳಾ ಬರೆಯಲೂ ಬೇಕು)

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮರೆಯಲಾಗದ ಜನಪರ ಹೋರಾಟಗಾರ
ಮರೆಯಲಾಗದ ಜನಪರ ಹೋರಾಟಗಾರ
May 10, 2023
ಪದ, ಬಳಕೆ ಮತ್ತು ಅರ್ಥ
ಪದ, ಬಳಕೆ ಮತ್ತು ಅರ್ಥ
November 9, 2021
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
April 29, 2018
ಕಲ್ಯಾಣವೆಂಬ ಪ್ರಣತೆ
ಕಲ್ಯಾಣವೆಂಬ ಪ್ರಣತೆ
April 3, 2019
ಹಾಯ್ಕುಗಳು
ಹಾಯ್ಕುಗಳು
November 10, 2022
ತತ್ವಪದಗಳ ಗಾಯನ ಪರಂಪರೆ
ತತ್ವಪದಗಳ ಗಾಯನ ಪರಂಪರೆ
February 7, 2021
ಒಂದಷ್ಟು ಸರಳ ಸಲಹೆಗಳು…
ಒಂದಷ್ಟು ಸರಳ ಸಲಹೆಗಳು…
June 10, 2023
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
April 29, 2018
ಸಾಂಸ್ಕೃತಿಕ ನಿರೂಪಣೆಗಳು ಮತ್ತು ಶರಣರು
ಸಾಂಸ್ಕೃತಿಕ ನಿರೂಪಣೆಗಳು ಮತ್ತು ಶರಣರು
April 6, 2023
ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು
ಜಂಗಮಕ್ಕೆರೆದರೆ ಸ್ಥಾವರ ನೆನೆಯಿತ್ತು
June 14, 2024
Copyright © 2025 Bayalu