Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಸಂಭ್ರಮಿಸುವೆ ಬುದ್ದನಾಗಿ
Share:
Poems August 11, 2025 ಜಬೀವುಲ್ಲಾ ಎಂ.ಅಸದ್

ಸಂಭ್ರಮಿಸುವೆ ಬುದ್ದನಾಗಿ

ಓಡೆದಿರುವುದು ಕನ್ನಡಕದ ಗಾಜಷ್ಟೆ
ಲೋಕ ಎಂದಿನಂತೆಯೇ ಇದೆ

ಮುರಿದಿರುವುದು ನಿನ್ನ ಮನಸ್ಸಷ್ಟೆ
ಸೇತುವೆಗಳು ಗಟ್ಟಿಮುಟ್ಟಾಗಿಯೇ ಇವೆ

ನೀ ನಡೆವ ದಾರಿ ನಿನ್ನೋಬ್ಬನದಲ್ಲ
ಎಲ್ಲರದೂ ಅಹುದು

ನಿನ್ನ ನೋವಿಗೆ ನೀನೆ ಅಧಿಪತಿ
ಯಾರೂ ಭಾಗಿಯಲ್ಲ
ಕಚಗುಳಿ ಕೊಟ್ಟು ಕಂಬನಿಗಳ ನಗಿಸು

ಇರುವಲ್ಲಿಂದ ಕದಲು
ಮೆಲ್ಲಗೆ ಮೊದಲು
ಮೊಗ್ಗು ಹೂವಾಗಿ ಬಿರಿವಂತೆ

ಮರೆಯಾಗುವ ಸೂರ್ಯನನ್ನೊಮ್ಮೆ
ಕಣ್ತುಂಬಿಕೋ
ನಾಳೆಯ ಭರವಸೆಯೊಂದಿಗೆ
ಮತ್ತೆ ಹುಟ್ಟುವನು ಕಂಡುಕೋ

ನಾವೆ, ನಾವಿಕ, ಹುಟ್ಟು ಎಲ್ಲಾ ನೆಪಗಳಷ್ಟೇ
ಗಾಳಿ ಮತ್ತು ಅಲೆಗಳಿಗಷ್ಟೆ ಸಾಧ್ಯ
ತೀರಕೆ ಒಯ್ಯಲು, ನೆನಪಿಟ್ಟಿಕೋ ಅದನು

ಕಳೆ ಬಯಕೆಗಳ
ಪಾಡು ಹಾಡಾಗಲಿ
ಬಯಲಾಗುವ ಒಲವಿಗೆ
ದುಃಖ ಗೆದ್ದವನಾಗಿ
ಭ್ರಮೆಗಳಿಂದ ಹೊರ ಬಂದು
ಬದುಕಿಗೆ ಬದ್ಧನಾಗಿ
ಸಂಭ್ರಮಿಸುವೆ ಬುದ್ಧನಾಗಿ.

Previous post ಲಿಂಗಾಯತ ಧರ್ಮ ಪೌರಾಣಿಕವಾದುದಲ್ಲ…
ಲಿಂಗಾಯತ ಧರ್ಮ ಪೌರಾಣಿಕವಾದುದಲ್ಲ…
Next post …ಬಯಲನೆ ಬಿತ್ತಿ
…ಬಯಲನೆ ಬಿತ್ತಿ

Related Posts

ಒಂದು ತೊಟ್ಟು ಬೆಳಕು
Share:
Poems

ಒಂದು ತೊಟ್ಟು ಬೆಳಕು

February 7, 2021 ಜ್ಯೋತಿಲಿಂಗಪ್ಪ
ಈ ಕತ್ತಲು ಒಂದು ತೊಟ್ಟು ಬೆಳಕು ಕುಡಿಯಿತು ಅಮಲೇರಿದೆ ಗಾಳಿ ಪಾಲು ಮುಂದಣ ಗೆರೆ ಹಿಂದಕೂ ತಾಗಿದೆ ಪರಿಧಿಯ ಬಿಂದು ತನ್ನ ಇಚ್ಛೆಯನರಿಯದು ಸುತ್ತುವುದು ಬಯಲು ಎಂಬುದೇನು ಬಯಲು ಏನೂ...
ನಾನು ಯಾರು?
Share:
Poems

ನಾನು ಯಾರು?

December 8, 2021 Bayalu
ಕನ್ನಡಿ ಪ್ರತಿಬಿಂಬದಲ್ಲಿ ಕಂಡ ಕರಿಮೈಯ ಕವಚ ನೋಡಿ ಊಹಿಸಿಕೊಂಡದ್ದು ಸತ್ತು ಶವವಾಗಿ ಮಣ್ಣಲ್ಲಿ ಮಣ್ಣಾಗಿ ಹೋದವರನು ಕಂಡು ಊಹೆ ಕಳಚಿ, ಮೈಯ ಭ್ರಮೆಯಿಂದ ಹೊರಬಿದ್ದವನು ಕೇಳಿದ ನಾನು...

Comments 1

  1. ಆನಂದ ಪಿ
    Aug 17, 2025 Reply

    ಬುದ್ಧನಾಗಿ ಸಂಭ್ರಮಿಸುವ ಭಾಗ್ಯ ಎಷ್ಟು ಜನರಿಗಿದೆ?

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ದಿಟ್ಟ ಹೆಜ್ಜೆಯ ಗುರುವಿನ ವಾಣಿಗಳು
ದಿಟ್ಟ ಹೆಜ್ಜೆಯ ಗುರುವಿನ ವಾಣಿಗಳು
June 17, 2020
ತೊತ್ತುಗೆಲಸವ ಮಾಡು
ತೊತ್ತುಗೆಲಸವ ಮಾಡು
June 5, 2021
ಮುಂದಿನ ಪೀಳಿಗೆಗೆ ಶರಣರ ಕಲ್ಪನೆ
ಮುಂದಿನ ಪೀಳಿಗೆಗೆ ಶರಣರ ಕಲ್ಪನೆ
March 6, 2024
‘ಅಲ್ಲಮ’ ಎಂಬ ಹೆಸರು
‘ಅಲ್ಲಮ’ ಎಂಬ ಹೆಸರು
August 6, 2022
ಅವಿರಳ ಅನುಭಾವಿ-2
ಅವಿರಳ ಅನುಭಾವಿ-2
April 6, 2020
ಬಸವಣ್ಣವರ ಆಶಯಗಳು
ಬಸವಣ್ಣವರ ಆಶಯಗಳು
July 4, 2021
ನಾನೆಲ್ಲಿ ಇದ್ದೆ?
ನಾನೆಲ್ಲಿ ಇದ್ದೆ?
April 29, 2018
ಶೂನ್ಯ ಸಂಪಾದನೆ ಎಂದರೇನು?
ಶೂನ್ಯ ಸಂಪಾದನೆ ಎಂದರೇನು?
January 8, 2023
ಕುವೆಂಪು ಮತ್ತು ಬ್ರೆಕ್ಟ್
ಕುವೆಂಪು ಮತ್ತು ಬ್ರೆಕ್ಟ್
August 11, 2025
ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು
ಕಲ್ಯಾಣ ಕೈಲಾಸವೆಂಬ ನುಡಿ ಹಸನಾಯಿತ್ತು
December 6, 2020
Copyright © 2026 Bayalu