Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಸಂಭ್ರಮಿಸುವೆ ಬುದ್ದನಾಗಿ
Share:
Poems August 11, 2025 ಜಬೀವುಲ್ಲಾ ಎಂ.ಅಸದ್

ಸಂಭ್ರಮಿಸುವೆ ಬುದ್ದನಾಗಿ

ಓಡೆದಿರುವುದು ಕನ್ನಡಕದ ಗಾಜಷ್ಟೆ
ಲೋಕ ಎಂದಿನಂತೆಯೇ ಇದೆ

ಮುರಿದಿರುವುದು ನಿನ್ನ ಮನಸ್ಸಷ್ಟೆ
ಸೇತುವೆಗಳು ಗಟ್ಟಿಮುಟ್ಟಾಗಿಯೇ ಇವೆ

ನೀ ನಡೆವ ದಾರಿ ನಿನ್ನೋಬ್ಬನದಲ್ಲ
ಎಲ್ಲರದೂ ಅಹುದು

ನಿನ್ನ ನೋವಿಗೆ ನೀನೆ ಅಧಿಪತಿ
ಯಾರೂ ಭಾಗಿಯಲ್ಲ
ಕಚಗುಳಿ ಕೊಟ್ಟು ಕಂಬನಿಗಳ ನಗಿಸು

ಇರುವಲ್ಲಿಂದ ಕದಲು
ಮೆಲ್ಲಗೆ ಮೊದಲು
ಮೊಗ್ಗು ಹೂವಾಗಿ ಬಿರಿವಂತೆ

ಮರೆಯಾಗುವ ಸೂರ್ಯನನ್ನೊಮ್ಮೆ
ಕಣ್ತುಂಬಿಕೋ
ನಾಳೆಯ ಭರವಸೆಯೊಂದಿಗೆ
ಮತ್ತೆ ಹುಟ್ಟುವನು ಕಂಡುಕೋ

ನಾವೆ, ನಾವಿಕ, ಹುಟ್ಟು ಎಲ್ಲಾ ನೆಪಗಳಷ್ಟೇ
ಗಾಳಿ ಮತ್ತು ಅಲೆಗಳಿಗಷ್ಟೆ ಸಾಧ್ಯ
ತೀರಕೆ ಒಯ್ಯಲು, ನೆನಪಿಟ್ಟಿಕೋ ಅದನು

ಕಳೆ ಬಯಕೆಗಳ
ಪಾಡು ಹಾಡಾಗಲಿ
ಬಯಲಾಗುವ ಒಲವಿಗೆ
ದುಃಖ ಗೆದ್ದವನಾಗಿ
ಭ್ರಮೆಗಳಿಂದ ಹೊರ ಬಂದು
ಬದುಕಿಗೆ ಬದ್ಧನಾಗಿ
ಸಂಭ್ರಮಿಸುವೆ ಬುದ್ಧನಾಗಿ.

Previous post ಲಿಂಗಾಯತ ಧರ್ಮ ಪೌರಾಣಿಕವಾದುದಲ್ಲ…
ಲಿಂಗಾಯತ ಧರ್ಮ ಪೌರಾಣಿಕವಾದುದಲ್ಲ…
Next post …ಬಯಲನೆ ಬಿತ್ತಿ
…ಬಯಲನೆ ಬಿತ್ತಿ

Related Posts

ಪ್ರೇಮ ಮತ್ತು ದ್ವೇಷ
Share:
Poems

ಪ್ರೇಮ ಮತ್ತು ದ್ವೇಷ

July 10, 2025 ಜಬೀವುಲ್ಲಾ ಎಂ.ಅಸದ್
ಹಾರುವುದಾದರೂ ಎಲ್ಲಿಗೆ? ರೆಕ್ಕೆ ಇಲ್ಲದ ಹಕ್ಕಿಗಳು ಹೇಗೆ? ಗಾಳಿ ಹಾರಿಸುವುದಿಲ್ಲ ನೆಲ ನಡೆಸುವುದಿಲ್ಲ ಜಲ ಈಜಿಸುವುದಿಲ್ಲ ಕಲಿಯಬೇಕು ತಂತಾನೆ ಎಲ್ಲಾ ಹಾಗೂ ಪ್ರೀತಿಸುವುದನ್ನು...
ಮನಸ್ಸು
Share:
Poems

ಮನಸ್ಸು

September 7, 2020 ಕೆ.ಆರ್ ಮಂಗಳಾ
ಏನ ಹೇಳಲಿ ಗುರುವೇ ಮನಸಿನ ಬಗೆಗೆ? ಹಿಂದಕ್ಕೆ ಜಾರುತ್ತಾ ಮುಂದಕ್ಕೆ ತುಯ್ಯುತ್ತಾ ಜೋಕಾಲಿಯಾಟದಲಿ ಮೈಮರೆಸಿಬಿಟ್ಟಿದೆ ಇದಾವ ಮರದ ಕೊಂಬೆಗೆ ನೇತು ಹಾಕಿಕೊಂಡಿದೆ… ಎಂದು ಕಟ್ಟಿದೆನೋ...

Comments 1

  1. ಆನಂದ ಪಿ
    Aug 17, 2025 Reply

    ಬುದ್ಧನಾಗಿ ಸಂಭ್ರಮಿಸುವ ಭಾಗ್ಯ ಎಷ್ಟು ಜನರಿಗಿದೆ?

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನೀರು ನೀರಡಿಸಿದಾಗ
ನೀರು ನೀರಡಿಸಿದಾಗ
September 4, 2018
ಶಿವನ ಕುದುರೆ…
ಶಿವನ ಕುದುರೆ…
May 1, 2019
ಬೇಡವಾದುದನ್ನು ಡಿಲೀಟ್ ಮಾಡುತ್ತಿರಬೇಕು
ಬೇಡವಾದುದನ್ನು ಡಿಲೀಟ್ ಮಾಡುತ್ತಿರಬೇಕು
January 7, 2022
ಯಾಕೀ ಗೊಡವೆ?
ಯಾಕೀ ಗೊಡವೆ?
August 10, 2023
ಯುದ್ದವೋ… ಶಾಂತಿಯೋ…
ಯುದ್ದವೋ… ಶಾಂತಿಯೋ…
April 5, 2026
ಸತ್ಯ, ಪರೋಪಕಾರ, ಬ್ರಹ್ಮಚರ್ಯ
ಸತ್ಯ, ಪರೋಪಕಾರ, ಬ್ರಹ್ಮಚರ್ಯ
February 6, 2025
ಹೆಂಗೂಸೆಂಬ ಭಾವ ತೋರದ ಮುನ್ನ…
ಹೆಂಗೂಸೆಂಬ ಭಾವ ತೋರದ ಮುನ್ನ…
June 10, 2023
ದುಡಿಮೆಯೆಲ್ಲವೂ ಕಾಯಕವೇ?
ದುಡಿಮೆಯೆಲ್ಲವೂ ಕಾಯಕವೇ?
November 10, 2022
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
May 6, 2021
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ…
October 6, 2020
Copyright © 2026 Bayalu