Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹಣತೆಯ ಹಂಗು
Share:
Poems October 19, 2025 ಕೆ.ಆರ್ ಮಂಗಳಾ

ಹಣತೆಯ ಹಂಗು

ನಾನೆಂಬ ಕತ್ತಲೆಗೆ
ನೀನೆಂಬ ಜ್ಯೋತಿ
ನಾನಿದ್ದಾಗ ನೀ
ಇರಲೇ ಬೇಕೆನುವ ತರ್ಕ
ನಾನು ಕರಗದೆ
ನೀನಾಗಲಾರೆ
ನೀನು ಸರಿಯದೇ
ಬೆಳಕ ಕಾಣಲಾರೆ…

ಕತ್ತಲೆಗಲ್ಲವೆ
ಬೆಳಕಿನ ಮೋಹ?

ಕೈಯ ಹಣತೆಯಲಿ
ಕುಣಿವ ದೀಪವ
ನೋಡುತಾ
ಗಾಳಿಗಾರದಂತೆ
ಜೋಪಾನವ ಮಾಡುತಾ
ನೆಲಮುಗಿಲ ಹಬ್ಬಿ
ಕಣ್ಣು ತುಂಬಿಕೊಳ್ಳಲಿ
ಈ ಮಹಾಬೆಳಗು

ಎದೆಯ ಹಣತೆಯಲಿ
ಬತ್ತಿಯ ತೀಡಿಹೆ
ತೈಲವನೆರೆದು
ಜ್ಯೋತಿಗೆ ಕಾದಿಹೆ
ದೀಪ ಹಚ್ಚುತಾ
ದೀಪವಾಗುವ ಕನಸು
ಇಂದು ನಿನ್ನೆಯದಲ್ಲಾ ಗುರುವೆ…

ಅಯ್ಯೋ ತರಳೆ
ಏನಿದು ಮರುಳೆ…
ಬೆಳಕಿನ ಹುಚ್ಚಿದು ತರವೇ?
ಬೆಳಗೂ ನೀನೇ
ಕತ್ತಲೂ ನೀನೇ
ಹುಡುಕುವೆ ಯಾಕೆ ಹೊರಗೆ?

ಸಾವು ಕತ್ತಲಲ್ಲಾ
ಬೆಳಕು ಬದುಕಲ್ಲಾ
ಕತ್ತಲು-ಬೆಳಕುಗಳೆರಡೂ
ವೈರಿಗಳಲ್ಲವೇ ಅಲ್ಲಾ
ಇರುಳ ಕಣ್ಣಿಗಿದೆ
ನಕ್ಷತ್ರದ ಮಿಂಚು
ಕಾಣಲಾರೆಯಾ ಮಗಳೇ?

ಬೆಳಕಿನ ಹುಚ್ಚಿಗೆ
ಕಿಚ್ಚನು ಹಚ್ಚು
ಒಳನೋಟದ ಕಣ್ಣಿಗೆ
ದೃಷ್ಟಿಯ ಹರಿಸು
ಹಣತೆಯೂ ನೀನೆ
ತೈಲವೂ ನೀನೇ
ಬತ್ತಿಯೂ ನೀನೇ ಅರಿಯೇ
ಬಯಲ ಬೆಳಕಿನ
ಕುಡಿಯೂ ನೀನೆ
ಹಣತೆಯ ಹಂಗು ಸರಿಯೇ?

Previous post ಸೋತ ಅಂಗೈಗಳಿಗಂಟಿ…
ಸೋತ ಅಂಗೈಗಳಿಗಂಟಿ…
Next post ಕಡಕೋಳ: ಮರೆತ ಹೆಜ್ಜೆಗಳ ಗುಲ್ದಾಸ್ಥ
ಕಡಕೋಳ: ಮರೆತ ಹೆಜ್ಜೆಗಳ ಗುಲ್ದಾಸ್ಥ

Related Posts

ಗ್ರಹಣ
Share:
Poems

ಗ್ರಹಣ

December 9, 2025 ಡಾ. ಪಂಚಾಕ್ಷರಿ ಹಳೇಬೀಡು
ಗ್ರಹಣ ಹಿಡಿದದ್ದು ಯಾರಿಗೆ? ರವಿಗೋ, ಶಶಿಗೋ, ಮೂರ್ಖನಿಗೋ? ವಿಶಾಲಾಗಸದಿ ಸುತ್ತುವರು ಭೂರವಿಚಂದ್ರತಾರೆ ಸೃಷ್ಟಿಯಲಿ ಸನಿಹವಿಲ್ಲ, ಸಂಬಂಧವುಂಟು! ಸ್ಪರ್ಷ ಮೊದಲಿಲ್ಲ...
ಬಿಂಬ-ಪ್ರತಿಬಿಂಬ
Share:
Poems

ಬಿಂಬ-ಪ್ರತಿಬಿಂಬ

February 5, 2020 ಜ್ಯೋತಿಲಿಂಗಪ್ಪ
ನೀನು ಅಲ್ಲಿ ಉಂಟೆಂದು ನಾನು ಇಲ್ಲಿ ತೆವಳಿ ತೆವಳಿ ಬಳಲಿದೆ ನೀನು ಎಲ್ಲಿರುವೆ ಎಂಬುದು ನನ್ನ ಕಣ್ಣರಿವು ಎಂಬುದ ನಾನಲ್ಲದೆ ನೀನರಿದೆಯಾ ಹೇಳೇ ಅಕ್ಕಾ ಬೆಳಕ ತಿಂದಲ್ಲದೆ ಕನ್ನಡಿಯಲಿ...

Comments 2

  1. Padmalaya
    Oct 23, 2025 Reply

    Waaaw… ಸೂಪರ್ ಮೆಲ್ಲಗೆ ಕಣ್ತೆರೆಯುವ ಹಂಬಲ…

  2. Panchakshari
    Nov 7, 2025 Reply

    ಸುಂದರ, ಒಳನೋಟದ ಭಾವ!

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
April 6, 2023
ಕನ್ನಡಿ ನಂಟು
ಕನ್ನಡಿ ನಂಟು
October 10, 2023
ನಾನೆಂಬ ನಿನಾದ…
ನಾನೆಂಬ ನಿನಾದ…
January 15, 2026
ದುಡಿಮೆಯೆಲ್ಲವೂ ಕಾಯಕವೇ?
ದುಡಿಮೆಯೆಲ್ಲವೂ ಕಾಯಕವೇ?
November 10, 2022
ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ
ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ
March 9, 2023
ಧೀಮಂತ ಶರಣ ಬಹುರೂಪಿ ಚೌಡಯ್ಯ
ಧೀಮಂತ ಶರಣ ಬಹುರೂಪಿ ಚೌಡಯ್ಯ
April 29, 2018
ಕಾಲ ಕಲ್ಪಿತವೇ?!
ಕಾಲ ಕಲ್ಪಿತವೇ?!
September 14, 2024
ಮುಕ್ತಾಯಕ್ಕ- ಅಲ್ಲಮರ ಸಂವಾದ
ಮುಕ್ತಾಯಕ್ಕ- ಅಲ್ಲಮರ ಸಂವಾದ
October 13, 2022
ಹಾಯ್ಕು
ಹಾಯ್ಕು
September 6, 2023
ಕಾಣಿಕೆಯ ರೂಪದ ಕಪ್ಪುಹಣ
ಕಾಣಿಕೆಯ ರೂಪದ ಕಪ್ಪುಹಣ
April 29, 2018
Copyright © 2026 Bayalu