Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಎಲ್ಲಿದೆ ಈ ಕ್ಷಣ?
Share:
Poems October 21, 2024 ಕೆ.ಆರ್ ಮಂಗಳಾ

ಎಲ್ಲಿದೆ ಈ ಕ್ಷಣ?

ವರ್ತಮಾನದಲ್ಲಿ ನಡೆಯಲರಿಯದೆ
ನುಡಿಯಲರಿಯದೆ ಬಾಳಲರಿಯದೆ
ಕಳದೇ ಹೋಗುವ ಬದುಕು
ಕಾಣಲಾರದು ಯಾಕೆ- ‘ಈ ಕ್ಷಣ’?

ರಾಗಾಲಾಪಗಳ ಬಣ್ಣಗಳಲಿ
ಮಿಂದೇಳುತಿರುವಾಗ
ಬಯಕೆ ಬೇಗುದಿಗಳಲಿ
ಬೇಯುತಿರುವಾಗ, ಎಲ್ಲಿದೆ ಈ ಕ್ಷಣ?

ಅವರಿವರ ಸುದ್ದಿಯಲೇ
ದಿನ ಸವೆಯುತಿರುವಾಗ
ದ್ವೇಷ-ರೋಷ-ವಿಷಯಗಳ
ವಿಷ ತೊನೆಯುತಿರುವಾಗ, ತಿಳಿದೀತೆ ಈ ಕ್ಷಣ?

ಹಿಂದುಮುಂದುಗಳ ಗೊಂದಲ
ತಲೆ ತುಂಬಿಕೊಂಡಾಗ
ಆಸೆ ಆಮೋದಗಳಿಗೆ
ಹಗಲಿರುಳು ಸವೆವಾಗ, ಅರಿವಾದೀತೇ ಈ ಕ್ಷಣ?

ಸುಖ-ದುಃಖ ಸರಪಳಿಯ
ನನಗೆ ನಾನೇ ಹೊಸೆದು
ಸ್ವಹಿತದ ಸಂಬಂಧಗಳ
ಕೂಡಿ ಕಳೆಯುತಿರುವಾಗ ಸಿಕ್ಕೀತೆ ಈ ಕ್ಷಣ?

ಕಣ್ಣು ಹಾಯಿಸಿದಲೆಲ್ಲಾ
ಮನವು ಹರಿದಲೆಲ್ಲಾ
ಪೂರ್ವ ಸಂಚಿತಗಳೇ
ಬಗೆಬಗೆಯಾಗಿ ತೋರುವಾಗ, ಕಂಡೀತೆ ಈ ಕ್ಷಣ?

ಮಾತಲ್ಲೂ ಮೌನದಲೂ
ಪೂಜೆಯಲೂ, ಧ್ಯಾನದಲೂ
ಸಿಗದ ಈ ಕ್ಷಣ
ಕಣ್ಮುಂದೆ, ಕಾಲಡಿಯೇ
ಸರಿದು ಹೋಗುವ ಪರಿಗೆ
ಕಂಗಾಲಾಗಿ ಬೆಚ್ಚಿ ನಿಂತಾಗ
ಕರುಣಾಮಯಿ ಗುರು ಹೇಳಿದ-

ಈ ಕ್ಷಣಕೂ ಮುಖ್ಯ
ಇನ್ನೇನೋ ಇದೆ ಎನುವ
ಮನದ ಮೋಡಿ ಮಾತಿಗೆಲ್ಲಾ
ಕಿವಿಯಾಗಬೇಡಮ್ಮಾ
ಅಲ್ಲೇನಿದೆ…
ಬರಿ ತೆವಲುಗಳು
ಸುಖದ ಅಮಲುಗಳು
ಒಣ ಯೋಚನೆಗಳು
ನಾಳಿನ ಭಯಗಳು
ಏನೇನೋ ಆತಂಕಗಳು…
ಚಿತ್ತದಾಟದಲಿ ಮುಳುಗಿರುವುದೂ
ಗಾಢ ನಿದ್ದೆಯೇ!

ಕಂಗಳ ಕರುಳ ಕೊಯ್ಯದೆ
ಮನದ ತಿರುಳ ಹುರಿಯದೆ
ಹಿಡಿಯಲಾರೆ ನೀನದರ ಜಾಡ
ಕಾಣಲಾರೆ ಅದರ ಬೆಳಗ.
ತಿಳಿ ಮಗಳೇ-
ಈ ಕ್ಷಣವೆಂದರೆ
ಬೇರೇನೂ ಅಲ್ಲ-
ಅದೊಂದು ಬಿಡುಗಡೆ, ಮಹಾ ಎಚ್ಚರ!

Previous post ಈ ಬಳ್ಳಿ…
ಈ ಬಳ್ಳಿ…
Next post ಅನಿಮಿಷ: ಚಿಗುರಿದ ಒಲುಮೆ (4)
ಅನಿಮಿಷ: ಚಿಗುರಿದ ಒಲುಮೆ (4)

Related Posts

ಈ ಬಳ್ಳಿ…
Share:
Poems

ಈ ಬಳ್ಳಿ…

October 21, 2024 ಜ್ಯೋತಿಲಿಂಗಪ್ಪ
ಗಾಳಿ ಉರಿಸುವುದು ಆರಿಸುವುದು ದೀಪ ಬೆಳಗಿಸುವುದು ಯಾರು…? ನಾನೂ ಒಂದು ದೀಪ ದ್ವೀಪದ ದಡ ಕಾಯುತ್ತಾ ಕಾಯುತ್ತಾ ಅಲೆ ಎಣಿಸುತಿರುವೆ ಈ ಸಂಖ್ಯೆ ಮೂರನ್ನು ದಾಟದೇ… ಈ...
ಬಿಟ್ಟು ಹೋದ ಬಸವಣ್ಣ
Share:
Poems

ಬಿಟ್ಟು ಹೋದ ಬಸವಣ್ಣ

April 29, 2018 ಡಾ. ಶಶಿಕಾಂತ ಪಟ್ಟಣ
ಬಿಟ್ಟು ಹೋದ ಬಸವಣ್ಣ ನೆತ್ತಿ ಸುಡುವ ಬಿಸಿಲಿನಲ್ಲಿ ತನ್ನ ನೆರಳ ತಾ ತುಳಿದುಕೊಂಡು. ಮನೆಗೆ ಹೋಗದೆ, ಮಡದಿ ಮಕ್ಕಳಿಗೆ ತಿಳಿಸದೆ, ಮತ್ತೆ ಮರಳಿ ಬಾರದ, ಹೊರಳಿ ತಿರುಗಿ ನೋಡದ, ಭಾರ...

Comments 1

  1. ಶೋಭಾದೇವಿ ಅಮರಶೆಟ್ಟಿ, ಧಾರವಾಡ
    Oct 24, 2024 Reply

    ಈ ಕ್ಷಣವೆಂದರೆ ನಿಜವಾಗಿಯೂ ಮಹಾ ಎಚ್ಚರವೇ!!!
    ಎಲ್ಲಿದೆ ಈ ಕ್ಷಣ ತುಂಬ ಚೆನ್ನಾಗಿದೆ👌👌👍

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಪೊರೆವ ದನಿ…
ಪೊರೆವ ದನಿ…
August 11, 2025
ಮಹಾನುಭಾವಿ ಆದಯ್ಯ
ಮಹಾನುಭಾವಿ ಆದಯ್ಯ
April 29, 2018
ಸಾವಿನ ಅರಿವೆ ಕಳಚಿ!
ಸಾವಿನ ಅರಿವೆ ಕಳಚಿ!
September 14, 2024
ಪ್ರೇಮ ಮತ್ತು ದ್ವೇಷ
ಪ್ರೇಮ ಮತ್ತು ದ್ವೇಷ
July 10, 2025
ಈ ಕ್ಷಣದ ಸತ್ಯ
ಈ ಕ್ಷಣದ ಸತ್ಯ
March 12, 2022
ಗುರುವಂದನೆ
ಗುರುವಂದನೆ
October 13, 2022
ಬಿಟ್ಟು ಹೋದ ಬಸವಣ್ಣ
ಬಿಟ್ಟು ಹೋದ ಬಸವಣ್ಣ
April 29, 2018
ಕಲ್ಯಾಣದ ಮಹಾಮನೆ
ಕಲ್ಯಾಣದ ಮಹಾಮನೆ
June 12, 2025
ಭಾರ
ಭಾರ
October 6, 2020
ಒಂದಾಗಿ ನಿಂತೆ…
ಒಂದಾಗಿ ನಿಂತೆ…
April 6, 2024
Copyright © 2026 Bayalu