Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮುಖ- ಮುಖವಾಡ
Share:
Poems February 7, 2021 ಕೆ.ಆರ್ ಮಂಗಳಾ

ಮುಖ- ಮುಖವಾಡ

ಕಣ್ಣು-ಕೆನ್ನೆ-ಮೂಗು-ಕಿವಿಗಳನ್ನು
ಕೈಯಿಂದ ತಡವಿಕೊಳ್ಳುತ್ತೇನೆ
ಇದು ಮುಖವಾಡವೋ
ಇಲ್ಲಾ ನನ್ನ ಮುಖವೋ?

ಕನ್ನಡಿ ನೋಡುವಾಗೆಲ್ಲಾ
ದಿಗಿಲಾಗುತ್ತದೆ
ನಾನು ಅಂದುಕೊಂಡಿರುವಂತೆ
ಯಾಕಿಲ್ಲಿ ಕಾಣುತ್ತಿಲ್ಲ
ಇದು ನಾನಲ್ಲವಲ್ಲ…

ಗಲಿಬಿಲಿಯಾಗುತ್ತದೆ…
ಒಳ-ಹೊರ ಅಂತರಕಂಡು
ಕಾಲಕ್ಕೆ ಸಿಕ್ಕ ಹೊರ ನೋಟಕ್ಕೂ
ಮನಕ್ಕೆ ನಿಲುಕದ ಒಳ ರೂಪಿಗೂ
ಹೊಂದಿಕೆಯೇ ಆಗುತ್ತಿಲ್ಲವಲ್ಲ…

ಮೇಲು-ಮೇಲಕ್ಕೆ
ಪುಟಿಸುತ್ತಲೇ ಇರುವ
ಚಿತ್ತದಾಟದ ಹೊಲಬ ತಪ್ಪಿಸಿಕೊಂಡು
ಒಳಗಿಳಿಯಲು
ಪರಿತಪಿಸುತ್ತಲೇ ಇದ್ದೇನೆ
ಸಣ್ಣ ಕಿಂಡಿ ಕಂಡರೂ ಸಾಕು…
ಪರಕೀಯವೆನಿಸುತಿಹ ಮುಖವಾಡ
ಕಿತ್ತೊಗೆದು
ನಿಜ ಮುಖವ ಧರಿಸಲು.

Previous post ಒಂದು ತೊಟ್ಟು ಬೆಳಕು
ಒಂದು ತೊಟ್ಟು ಬೆಳಕು
Next post ಕುಂಬಾರ ಲಿಂಗಾಯತರು
ಕುಂಬಾರ ಲಿಂಗಾಯತರು

Related Posts

ಮಾಯದ ಗಾಯ
Share:
Poems

ಮಾಯದ ಗಾಯ

October 19, 2025 ಜ್ಯೋತಿಲಿಂಗಪ್ಪ
ಯಾವಾಗ ಮಳೆ ಬರುವುದೋ ಕಾಯುವ ಆ ದಿನ ಯಾವಾಗ ಮಳೆ ನಿಲ್ಲುವುದೋ ಕಾಯುವ ಈ ದಿನ ದಿನಾ ಕಾಯುವ ಈ ದಿನಕರ ತೋಯಗಳಲಿ ತುಯ್ಯಲಾಟ ಘನವ ನಾನೇನು ಬಲ್ಲೆ ಗೂಡು ಕಟ್ಟಿದ ಹಕ್ಕಿ ಅಂಗಣದಲಿ...
ಹೆಸರಿಲ್ಲದಾ ಊರಿನ ಹಾಡು
Share:
Poems

ಹೆಸರಿಲ್ಲದಾ ಊರಿನ ಹಾಡು

May 6, 2020 ಪದ್ಮಾಲಯ ನಾಗರಾಜ್
ಚಿಂತೆಯೊಳಗೇ ಹಾವೊಂದೈತೆ/ ಡೊಂಕು ಹಾದಿಯ ತೊರೆಯಿರೋ ನಾನು ಎಂಬುದು ಕಳಚಿ ಹೋದರೆ/ ಇಹುದು ಸುಖವೆಂದರಿಯಿರೋ //ಪ// ಮೂರ್ಖತನದ ಕತ್ತಲೊಳಗೆ/ ಭ್ರಮೆಯ ಗಿಳಿಯೊಂದಾಡಿತೋ ಶೋಕಿ ದಾರಿಯು...

Comments 2

  1. ಶೋಭಾದೇವಿ, ಭಾಲ್ಕಿ
    Feb 9, 2021 Reply

    ಪರಕೀಯವೆನಿಸುತಿಹ ಮುಖವಾಡ ಕಿತ್ತೊಗೆಯಲು… ಕವನ ಚೆನ್ನಾಗಿದೆ.

  2. Jyothilingappa
    Feb 9, 2021 Reply

    ಮುಖದ ಹುಡುಕಾಟ… ಸರಳ, ಸಹಜ ಕ್ರಿಯೆಗಳ ಮೂಲಕ ಗಟ್ಟಿಯಾಗಿದೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ವಚನಕಾರರು ಮತ್ತು ಕನ್ನಡ ಭಾಷೆ
ವಚನಕಾರರು ಮತ್ತು ಕನ್ನಡ ಭಾಷೆ
December 6, 2020
ಅಬದ್ಧ ಆರ್ಥಿಕತೆ
ಅಬದ್ಧ ಆರ್ಥಿಕತೆ
March 5, 2019
ಗುರುವಂದನೆ
ಗುರುವಂದನೆ
October 13, 2022
ನಿಲುಗಡೆಯಿಲ್ಲದ ಪಯಣ…
ನಿಲುಗಡೆಯಿಲ್ಲದ ಪಯಣ…
September 6, 2026
ಕನ್ನಡ ಕವಿ ಸಂತರಲ್ಲಿ ಧರ್ಮ…
ಕನ್ನಡ ಕವಿ ಸಂತರಲ್ಲಿ ಧರ್ಮ…
May 10, 2022
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
April 29, 2018
ಬಸವ ಸ್ಮರಣೆ ಇಂದಿಗೂ ಏಕೆ?
ಬಸವ ಸ್ಮರಣೆ ಇಂದಿಗೂ ಏಕೆ?
May 6, 2020
ಗಮ್ಯದೆಡೆಗೆ ಗಮನ
ಗಮ್ಯದೆಡೆಗೆ ಗಮನ
July 5, 2019
ಧರ್ಮದ ನೆಲೆಯಲ್ಲಿ ಬದುಕು
ಧರ್ಮದ ನೆಲೆಯಲ್ಲಿ ಬದುಕು
September 5, 2019
ಕನ್ನಡ ಕಾವ್ಯಗಳಲ್ಲಿ ಶರಣರು
ಕನ್ನಡ ಕಾವ್ಯಗಳಲ್ಲಿ ಶರಣರು
September 6, 2023
Copyright © 2026 Bayalu