Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಸುಳ್ಳು ಅನ್ನೋದು…
Share:
Poems April 6, 2023 ಜ್ಯೋತಿಲಿಂಗಪ್ಪ

ಸುಳ್ಳು ಅನ್ನೋದು…

ನಾ ಭಕ್ತನಾಗದೆ ನೀ ದೇವನಾದೆಯಾ
ಭಕ್ತಿ ಎನ್ನಳವಲ್ಲ ದೇವತನವೂ ನಿನ್ನಳವಲ್ಲ
ಕೂಡಿ ಕೊಂಡಾಡುವ ಭಾವ
ಭಾವ ತಪ್ಪಿದ ಇಜ್ಜೋಡು

ಕತ್ತಲೊಳಗೆ ಬೆತ್ತಲಾಟ
ಅಂಗಣದೊಳಗಾಡುವ ಆರು ಗಿಳಿವಿಂಡು
ಒಂದ್ಹತ್ತಿ ಒಂದಿಳಿದು ಚೆಲ್ಲಾಟ

ಉಪ್ಪು ನೀರಲಿ ನೀರಾದರೆ
ನೀರು ಉಪ್ಪಾಗದೇ
ಕಣ್ಣ ಮುಚ್ಚಿದರೂ ಕಾಣುವುದು ಕಣ್ಣು
ಕಣ್ಣು ಕಂಡರೂ ಕಣ್ಣ ಮುಚ್ಚುವುದು
ನೀರಲಿಳಿದೂ ಈಸದೆ ನೀರಾಸೆ

ಒಂದೇ ರುಚಿಯ ಒಪ್ಪದು ಈ ನಾಲಿಗೆ
ಒಂದೇ ದೈವದ ಎಂಜಲು ರುಚಿಗಾಣದು

ಕಣ್ಣ ಚೆಲ್ಲುವ ಕೇಡು ಬೆರಗು.

**** **** ****

ಈ
ಸುಳ್ಳು ಸುಳ್ಳೂ
ಅನ್ನೋದು ಏನು ಗೊತ್ತೇ
ಇಲ್ಲಾ

ಕಣ್ಣೊಂದು ನೋಡಿತು ನಾನೊಂದು ನೋಡಿದೆ
ಕಿವಿಯೊಂದು ಕೇಳಿತು ನಾನೊಂದು ಕೇಳಿದೆ

ನೋಡಿದ್ದು ಕೇಳಿದ್ದು ಎರಡೂ ನಿಜ ಎರಡೂ ಸುಳ್ಳು
ಎರಡರ ನಡುವಿನ ಸಂದೇಹಿ ನಾನು
ಸುಳ್ಳಾ….

ನಿಜಾ ಹೇಳಿ ಪ್ಲೀಸ್

ಕಣ್ಣಾಸೆಗೆ ನೋಡುವುದು ಬಿಡೆ
ಕಿವಿಯಾಸೆಗೆ ಕೇಳುವುದು ಬಿಡೆ

ಬಿಟ್ಟಿ ಆಸೆ ಬಿಡದ ಬಿಡೆ

ಈ
ಸುಳ್ಳು ಅನ್ನೋದು…

Previous post ನಾನೆಂಬುದ ಅಳಿದು…
ನಾನೆಂಬುದ ಅಳಿದು…
Next post ಹೀಗೊಂದು ಸಂವಾದ…
ಹೀಗೊಂದು ಸಂವಾದ…

Related Posts

ಬೆಳಕು ನುಂಗಿದ ಕತ್ತಲು
Share:
Poems

ಬೆಳಕು ನುಂಗಿದ ಕತ್ತಲು

December 9, 2025 ಜಬೀವುಲ್ಲಾ ಎಂ.ಅಸದ್
ಬೂದಿ ಮುಚ್ಚಿದ ಮುಗಿಲು ಹರಿದ ಗಾಳಿ ಅಲೆಗಳಿಗೆ ನೆನೆದು ನೆಲದ ಬಾಗಿಲು ತೆರೆದು ತೋರಿ ಬಯಲು ಮುರಿದ ಕೈ ಕುಂಟುವ ಕಾಲು ನಾಲಿಗೆ ಚಾಚಿದ ಬಯಕೆ ನೂರು ನೋಡು… ನೋಡು…...
ಕಾಯೋ ಗುರುವೇ…
Share:
Poems

ಕಾಯೋ ಗುರುವೇ…

February 11, 2022 ಕೆ.ಆರ್ ಮಂಗಳಾ
ನಾನು: ಗಾಳಿಯೇ ಆಡದ, ಕತ್ತಲ ಕೋಣ್ಯಾಗ ಕಳೆದು ಹೋಗಿನಿ ನನ ಗುರುವೆ ಚಿಲಕವ ಸರಿಸಿ, ಬಾಗಿಲು ತೆಗೆದು ಬೆಳಕಾ ತೋರಿಸು ನನ ಗುರುವೆ ತಡವುತ ಎಡವುತ, ಅಲ್ಲಲ್ಲೇ ಸುತ್ತುತ ಹೈರಾಣಾಗಿಹೆ...

Comments 3

  1. Kumar Tumkur
    Apr 10, 2023 Reply

    ನಾ ಭಕ್ತನಾಗದೇ ನೀ ದೇವನಾಗಲಾರೆ…. ಅರಿವಿನ ಅಳತೆ ಎಲ್ಲಿಂದ ಎಲ್ಲಿಗೆ??? ಅರ್ಥಪೂರ್ಣ ಕವನಗಳು👏👏

  2. Rajeev Salva
    Apr 10, 2023 Reply

    ಕಣ್ಣು ನೋಡುವುದು, ನಾನು ನೋಡುವುದು ಬೇರೆಯಾಗಿವೆ ಎಂಬ ಗ್ರಹಿಕೆಯಲ್ಲಿಯೇ ಬದುಕಿನ ಅಸಮತೋಲನೆ ಇದೆ.

  3. Padmalaya
    May 9, 2023 Reply

    ಸಂದೇಹ ಸುಳ್ಳ???

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಧರ್ಮದ ಹೋರಾಟ ಗುಣಾತ್ಮಕವಾಗಿರಲಿ
ಧರ್ಮದ ಹೋರಾಟ ಗುಣಾತ್ಮಕವಾಗಿರಲಿ
April 29, 2018
ಕರ್ತಾರನ ಕಮ್ಮಟ- ಭಾಗ 3
ಕರ್ತಾರನ ಕಮ್ಮಟ- ಭಾಗ 3
September 5, 2019
ಈ ಕಾವಿ ಹಾಕ್ಕಂಡ ಮೇಲಾ ಭಿನ್ನ ಬೇಧ ಇಲ್ಲ ಕಾಣೋ…
ಈ ಕಾವಿ ಹಾಕ್ಕಂಡ ಮೇಲಾ ಭಿನ್ನ ಬೇಧ ಇಲ್ಲ ಕಾಣೋ…
February 11, 2022
ದಿಟ್ಟ ನಿಲುವಿನ ಶರಣೆ
ದಿಟ್ಟ ನಿಲುವಿನ ಶರಣೆ
April 29, 2018
ಹರನು ಮೂಲಿಗನಾಗಿ…
ಹರನು ಮೂಲಿಗನಾಗಿ…
March 5, 2019
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
April 6, 2023
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
January 4, 2020
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
April 29, 2018
ಹುಡುಕಾಟ
ಹುಡುಕಾಟ
January 15, 2026
ಶರಣನಾಗುವುದು…
ಶರಣನಾಗುವುದು…
February 10, 2023
Copyright © 2026 Bayalu