Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಸಂಭ್ರಮಿಸುವೆ ಬುದ್ದನಾಗಿ
Share:
Poems August 11, 2025 ಜಬೀವುಲ್ಲಾ ಎಂ.ಅಸದ್

ಸಂಭ್ರಮಿಸುವೆ ಬುದ್ದನಾಗಿ

ಓಡೆದಿರುವುದು ಕನ್ನಡಕದ ಗಾಜಷ್ಟೆ
ಲೋಕ ಎಂದಿನಂತೆಯೇ ಇದೆ

ಮುರಿದಿರುವುದು ನಿನ್ನ ಮನಸ್ಸಷ್ಟೆ
ಸೇತುವೆಗಳು ಗಟ್ಟಿಮುಟ್ಟಾಗಿಯೇ ಇವೆ

ನೀ ನಡೆವ ದಾರಿ ನಿನ್ನೋಬ್ಬನದಲ್ಲ
ಎಲ್ಲರದೂ ಅಹುದು

ನಿನ್ನ ನೋವಿಗೆ ನೀನೆ ಅಧಿಪತಿ
ಯಾರೂ ಭಾಗಿಯಲ್ಲ
ಕಚಗುಳಿ ಕೊಟ್ಟು ಕಂಬನಿಗಳ ನಗಿಸು

ಇರುವಲ್ಲಿಂದ ಕದಲು
ಮೆಲ್ಲಗೆ ಮೊದಲು
ಮೊಗ್ಗು ಹೂವಾಗಿ ಬಿರಿವಂತೆ

ಮರೆಯಾಗುವ ಸೂರ್ಯನನ್ನೊಮ್ಮೆ
ಕಣ್ತುಂಬಿಕೋ
ನಾಳೆಯ ಭರವಸೆಯೊಂದಿಗೆ
ಮತ್ತೆ ಹುಟ್ಟುವನು ಕಂಡುಕೋ

ನಾವೆ, ನಾವಿಕ, ಹುಟ್ಟು ಎಲ್ಲಾ ನೆಪಗಳಷ್ಟೇ
ಗಾಳಿ ಮತ್ತು ಅಲೆಗಳಿಗಷ್ಟೆ ಸಾಧ್ಯ
ತೀರಕೆ ಒಯ್ಯಲು, ನೆನಪಿಟ್ಟಿಕೋ ಅದನು

ಕಳೆ ಬಯಕೆಗಳ
ಪಾಡು ಹಾಡಾಗಲಿ
ಬಯಲಾಗುವ ಒಲವಿಗೆ
ದುಃಖ ಗೆದ್ದವನಾಗಿ
ಭ್ರಮೆಗಳಿಂದ ಹೊರ ಬಂದು
ಬದುಕಿಗೆ ಬದ್ಧನಾಗಿ
ಸಂಭ್ರಮಿಸುವೆ ಬುದ್ಧನಾಗಿ.

Previous post ಲಿಂಗಾಯತ ಧರ್ಮ ಪೌರಾಣಿಕವಾದುದಲ್ಲ…
ಲಿಂಗಾಯತ ಧರ್ಮ ಪೌರಾಣಿಕವಾದುದಲ್ಲ…
Next post …ಬಯಲನೆ ಬಿತ್ತಿ
…ಬಯಲನೆ ಬಿತ್ತಿ

Related Posts

ನೀನು ನಾನಲ್ಲ…
Share:
Poems

ನೀನು ನಾನಲ್ಲ…

July 21, 2024 ಕೆ.ಆರ್ ಮಂಗಳಾ
ಹಿಂದಿನ ಹೆಜ್ಜೆಗಳಲಿ ತನ್ನನ್ನೇ ಅರಸುವ ಮುಂದಿನ ದಿನಗಳಲಿ ತನ್ನನ್ನೇ ಮೆರೆಯಿಸುವ ಅಸ್ತಿತ್ವದ ಹುಡುಕಾಟವೇ ನೀನು ನಾನಲ್ಲ ಎಂದೋ ಆದುದನು ಜತನದಲಿ ಕೂಡಿಟ್ಟು ಎಲ್ಲವನೂ ಎಲ್ಲರನೂ ಆ...
ಒಂದಾಗಿ ನಿಂತೆ…
Share:
Poems

ಒಂದಾಗಿ ನಿಂತೆ…

April 6, 2024 ಕೆ.ಆರ್ ಮಂಗಳಾ
ಆಗೀಗ ನೀರು ಕಾಣುವ ಮಧುಮಾಲತಿ ಬಳ್ಳಿಯಲಿ ತೊನೆವ ಕೆಂಪು-ಬಿಳಿ ಹೂಗಳು ಪಕ್ಕದಲ್ಲೇ ನಸುಗಂಪಿನ ದುಂಡು ಮಲ್ಲಿಗೆಯ ದಂಡು ದೇಟಿನ ತುಂಬ ಬಣ್ಣಬಣ್ಣದ ದಾಸವಾಳ, ಅರೆಬೆತ್ತಲಾದ ಸಂಪಿಗೆ...

Comments 1

  1. ಆನಂದ ಪಿ
    Aug 17, 2025 Reply

    ಬುದ್ಧನಾಗಿ ಸಂಭ್ರಮಿಸುವ ಭಾಗ್ಯ ಎಷ್ಟು ಜನರಿಗಿದೆ?

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನೆಟ್ಟ ನಂಜು ಹಾಲೀಂಟದು
ನೆಟ್ಟ ನಂಜು ಹಾಲೀಂಟದು
June 5, 2021
ತಿರುಳ್ಗನ್ನಡದ ತಿರುಕ: ಉತ್ತಂಗಿ ಚೆನ್ನಪ್ಪ
ತಿರುಳ್ಗನ್ನಡದ ತಿರುಕ: ಉತ್ತಂಗಿ ಚೆನ್ನಪ್ಪ
October 19, 2025
ಜಗವ ಸುತ್ತಿಪ್ಪುದು ನಿನ್ನ ಮಾಯೆ…
ಜಗವ ಸುತ್ತಿಪ್ಪುದು ನಿನ್ನ ಮಾಯೆ…
April 29, 2018
ನನ್ನ-ನಿನ್ನ ನಡುವೆ
ನನ್ನ-ನಿನ್ನ ನಡುವೆ
June 5, 2021
ಹರನು ಮೂಲಿಗನಾಗಿ…
ಹರನು ಮೂಲಿಗನಾಗಿ…
March 5, 2019
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-3
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-3
December 6, 2020
ಶಿವನ ಕುದುರೆ…
ಶಿವನ ಕುದುರೆ…
May 1, 2019
ನೆಲದ ಮರೆಯ ನಿಧಾನದಂತೆ…
ನೆಲದ ಮರೆಯ ನಿಧಾನದಂತೆ…
April 29, 2018
ಶರಣರು ಕಂಡ ಆಹಾರ ಪದ್ಧತಿ
ಶರಣರು ಕಂಡ ಆಹಾರ ಪದ್ಧತಿ
April 29, 2018
ನಲುಗಿದ ಕಲ್ಯಾಣ – ನೊಂದ ಶರಣರು
ನಲುಗಿದ ಕಲ್ಯಾಣ – ನೊಂದ ಶರಣರು
January 10, 2021
Copyright © 2025 Bayalu