Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮುಖ- ಮುಖವಾಡ
Share:
Poems February 7, 2021 ಕೆ.ಆರ್ ಮಂಗಳಾ

ಮುಖ- ಮುಖವಾಡ

ಕಣ್ಣು-ಕೆನ್ನೆ-ಮೂಗು-ಕಿವಿಗಳನ್ನು
ಕೈಯಿಂದ ತಡವಿಕೊಳ್ಳುತ್ತೇನೆ
ಇದು ಮುಖವಾಡವೋ
ಇಲ್ಲಾ ನನ್ನ ಮುಖವೋ?

ಕನ್ನಡಿ ನೋಡುವಾಗೆಲ್ಲಾ
ದಿಗಿಲಾಗುತ್ತದೆ
ನಾನು ಅಂದುಕೊಂಡಿರುವಂತೆ
ಯಾಕಿಲ್ಲಿ ಕಾಣುತ್ತಿಲ್ಲ
ಇದು ನಾನಲ್ಲವಲ್ಲ…

ಗಲಿಬಿಲಿಯಾಗುತ್ತದೆ…
ಒಳ-ಹೊರ ಅಂತರಕಂಡು
ಕಾಲಕ್ಕೆ ಸಿಕ್ಕ ಹೊರ ನೋಟಕ್ಕೂ
ಮನಕ್ಕೆ ನಿಲುಕದ ಒಳ ರೂಪಿಗೂ
ಹೊಂದಿಕೆಯೇ ಆಗುತ್ತಿಲ್ಲವಲ್ಲ…

ಮೇಲು-ಮೇಲಕ್ಕೆ
ಪುಟಿಸುತ್ತಲೇ ಇರುವ
ಚಿತ್ತದಾಟದ ಹೊಲಬ ತಪ್ಪಿಸಿಕೊಂಡು
ಒಳಗಿಳಿಯಲು
ಪರಿತಪಿಸುತ್ತಲೇ ಇದ್ದೇನೆ
ಸಣ್ಣ ಕಿಂಡಿ ಕಂಡರೂ ಸಾಕು…
ಪರಕೀಯವೆನಿಸುತಿಹ ಮುಖವಾಡ
ಕಿತ್ತೊಗೆದು
ನಿಜ ಮುಖವ ಧರಿಸಲು.

Previous post ಒಂದು ತೊಟ್ಟು ಬೆಳಕು
ಒಂದು ತೊಟ್ಟು ಬೆಳಕು
Next post ಕುಂಬಾರ ಲಿಂಗಾಯತರು
ಕುಂಬಾರ ಲಿಂಗಾಯತರು

Related Posts

ಹಣತೆ ಸಾಕು
Share:
Poems

ಹಣತೆ ಸಾಕು

September 14, 2024 ಜ್ಯೋತಿಲಿಂಗಪ್ಪ
ಬೆಳಕ ನೋಡಲಾಗದ ಕಣ್ಣು ದೀಪ ಹಚ್ಚಿದರೆ ಕಣ್ಣು ಕತ್ತಲು ಹಚ್ಚದಿರೆ ಹೃದಯ ಕತ್ತಲು ದೀಪ ಬೆಳಗಿಸುವ ಕಷ್ಟ ಕತ್ತಲೆಂಬುದು ಕತ್ತಲಾಗದು ಬೆಳಕೆಂಬುದು ಬೆಳಕಾಗದು ಏನೂ ಕೂಡಿಡದೆ...
ಮೊಟ್ಟೆ- ಗೂಡು
Share:
Poems

ಮೊಟ್ಟೆ- ಗೂಡು

April 11, 2025 ಜ್ಯೋತಿಲಿಂಗಪ್ಪ
ಮರೆವೆಯ ಗೂಡಲಿ ಒಂದು ಮರಿ ಆಸೆಯ ಮೊಟ್ಟೆ ಗೂಡು ಸಣ್ಣದು ಮೊಟ್ಟೆ ದೊಡ್ಡದು ಮೊಟ್ಟೆ ಬಿರಿದರೆ ಗೂಡು ಸಾಯುವುದು ಗೂಡು ಸಾಯದಿರೆ ಮೊಟ್ಟೆ ಸಾಯುವುದು ಏನು ಮರೆವೆಯೋ ಸೀಸೆಯು ಒಡೆಯದೆ...

Comments 2

  1. ಶೋಭಾದೇವಿ, ಭಾಲ್ಕಿ
    Feb 9, 2021 Reply

    ಪರಕೀಯವೆನಿಸುತಿಹ ಮುಖವಾಡ ಕಿತ್ತೊಗೆಯಲು… ಕವನ ಚೆನ್ನಾಗಿದೆ.

  2. Jyothilingappa
    Feb 9, 2021 Reply

    ಮುಖದ ಹುಡುಕಾಟ… ಸರಳ, ಸಹಜ ಕ್ರಿಯೆಗಳ ಮೂಲಕ ಗಟ್ಟಿಯಾಗಿದೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ವೈಚಾರಿಕ ಚಳುವಳಿಯ ಮರುಸ್ಥಾಪನೆ
ವೈಚಾರಿಕ ಚಳುವಳಿಯ ಮರುಸ್ಥಾಪನೆ
April 29, 2018
ಕಾಯವೇ ಕೈಲಾಸ
ಕಾಯವೇ ಕೈಲಾಸ
April 29, 2018
ಧೀಮಂತ ಶರಣ ಬಹುರೂಪಿ ಚೌಡಯ್ಯ
ಧೀಮಂತ ಶರಣ ಬಹುರೂಪಿ ಚೌಡಯ್ಯ
April 29, 2018
ನಾ ಬರಬಾರದಿತ್ತು ಇಂಥ ಊರಿಗೆ…
ನಾ ಬರಬಾರದಿತ್ತು ಇಂಥ ಊರಿಗೆ…
July 10, 2023
ಸ್ತ್ರೀ ಸ್ವಾತಂತ್ರ್ಯ ಕುರಿತು…
ಸ್ತ್ರೀ ಸ್ವಾತಂತ್ರ್ಯ ಕುರಿತು…
April 29, 2018
ಅಮುಗೆ ರಾಯಮ್ಮ (ಭಾಗ-3)
ಅಮುಗೆ ರಾಯಮ್ಮ (ಭಾಗ-3)
November 10, 2022
ಜಗವ ಸುತ್ತಿಪ್ಪುದು ನಿನ್ನ ಮಾಯೆ…
ಜಗವ ಸುತ್ತಿಪ್ಪುದು ನಿನ್ನ ಮಾಯೆ…
April 29, 2018
ನನ್ನ-ನಿನ್ನ ನಡುವೆ
ನನ್ನ-ನಿನ್ನ ನಡುವೆ
June 5, 2021
ಶರಣರು ಕಂಡ ಆಹಾರ ಪದ್ಧತಿ
ಶರಣರು ಕಂಡ ಆಹಾರ ಪದ್ಧತಿ
April 29, 2018
ವಚನಗಳಲ್ಲಿ ದೇವನೊಲುಮೆ… ಒಂದು ಚಿಂತನೆ
ವಚನಗಳಲ್ಲಿ ದೇವನೊಲುಮೆ… ಒಂದು ಚಿಂತನೆ
September 14, 2024
Copyright © 2025 Bayalu