Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಮುಖ- ಮುಖವಾಡ
Share:
Poems February 7, 2021 ಕೆ.ಆರ್ ಮಂಗಳಾ

ಮುಖ- ಮುಖವಾಡ

ಕಣ್ಣು-ಕೆನ್ನೆ-ಮೂಗು-ಕಿವಿಗಳನ್ನು
ಕೈಯಿಂದ ತಡವಿಕೊಳ್ಳುತ್ತೇನೆ
ಇದು ಮುಖವಾಡವೋ
ಇಲ್ಲಾ ನನ್ನ ಮುಖವೋ?

ಕನ್ನಡಿ ನೋಡುವಾಗೆಲ್ಲಾ
ದಿಗಿಲಾಗುತ್ತದೆ
ನಾನು ಅಂದುಕೊಂಡಿರುವಂತೆ
ಯಾಕಿಲ್ಲಿ ಕಾಣುತ್ತಿಲ್ಲ
ಇದು ನಾನಲ್ಲವಲ್ಲ…

ಗಲಿಬಿಲಿಯಾಗುತ್ತದೆ…
ಒಳ-ಹೊರ ಅಂತರಕಂಡು
ಕಾಲಕ್ಕೆ ಸಿಕ್ಕ ಹೊರ ನೋಟಕ್ಕೂ
ಮನಕ್ಕೆ ನಿಲುಕದ ಒಳ ರೂಪಿಗೂ
ಹೊಂದಿಕೆಯೇ ಆಗುತ್ತಿಲ್ಲವಲ್ಲ…

ಮೇಲು-ಮೇಲಕ್ಕೆ
ಪುಟಿಸುತ್ತಲೇ ಇರುವ
ಚಿತ್ತದಾಟದ ಹೊಲಬ ತಪ್ಪಿಸಿಕೊಂಡು
ಒಳಗಿಳಿಯಲು
ಪರಿತಪಿಸುತ್ತಲೇ ಇದ್ದೇನೆ
ಸಣ್ಣ ಕಿಂಡಿ ಕಂಡರೂ ಸಾಕು…
ಪರಕೀಯವೆನಿಸುತಿಹ ಮುಖವಾಡ
ಕಿತ್ತೊಗೆದು
ನಿಜ ಮುಖವ ಧರಿಸಲು.

Previous post ಒಂದು ತೊಟ್ಟು ಬೆಳಕು
ಒಂದು ತೊಟ್ಟು ಬೆಳಕು
Next post ಕುಂಬಾರ ಲಿಂಗಾಯತರು
ಕುಂಬಾರ ಲಿಂಗಾಯತರು

Related Posts

ತುದಿಗಳೆರಡು ಇಲ್ಲವಾದಾಗ…
Share:
Poems

ತುದಿಗಳೆರಡು ಇಲ್ಲವಾದಾಗ…

March 9, 2023 ಕೆ.ಆರ್ ಮಂಗಳಾ
ಭೂಮಿ- ಆಕಾಶದ ದೂರ ಅಳಿದಾಗ ಭುವಿಯ ಸೆಳೆತವೂ ಇಲ್ಲ ಆಗಸದ ಎಳೆತವೂ ಇಲ್ಲ. ಹಗಲು- ರಾತ್ರಿಗಳ ಭ್ರಮಣ ಸರಿದಾಗ ಬೆಳಗಿನ ಬಯಕೆಯೂ ಇಲ್ಲ ಕತ್ತಲೆಯ ಭಯವೂ ಇಲ್ಲ. ಧರ್ಮ- ಅಧರ್ಮಗಳ...
ದಾರಿಯಲ್ಲದ ದಾರಿ…
Share:
Poems

ದಾರಿಯಲ್ಲದ ದಾರಿ…

October 10, 2023 ಕೆ.ಆರ್ ಮಂಗಳಾ
ಗುರು ತೋರಿದ ದಾರಿಯಲಿ ಬಂಡೆಗಳ ಸಿಡಿಸಬೇಕು ಗುಡ್ಡಗಳ ಒಡೆಯಬೇಕು ಕಮರಿ, ಹೊಳ್ಳ ದಾಟಬೇಕು ಮುಳ್ಳುಗಂಟಿ ಕಿತ್ತಬೇಕು ಇಷ್ಟಪಟ್ಟು ನಡೆಯದಿದ್ದರೆ ಇದು ಬಲು ಕಷ್ಟದ ದಾರಿ...

Comments 2

  1. ಶೋಭಾದೇವಿ, ಭಾಲ್ಕಿ
    Feb 9, 2021 Reply

    ಪರಕೀಯವೆನಿಸುತಿಹ ಮುಖವಾಡ ಕಿತ್ತೊಗೆಯಲು… ಕವನ ಚೆನ್ನಾಗಿದೆ.

  2. Jyothilingappa
    Feb 9, 2021 Reply

    ಮುಖದ ಹುಡುಕಾಟ… ಸರಳ, ಸಹಜ ಕ್ರಿಯೆಗಳ ಮೂಲಕ ಗಟ್ಟಿಯಾಗಿದೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಸತ್ಯ, ಪರೋಪಕಾರ, ಬ್ರಹ್ಮಚರ್ಯ
ಸತ್ಯ, ಪರೋಪಕಾರ, ಬ್ರಹ್ಮಚರ್ಯ
February 6, 2025
ಜೈಲುವಾಸ ಮತ್ತು ಲಿಂಗಾಯತ ಆಚರಣೆಗಳು
ಜೈಲುವಾಸ ಮತ್ತು ಲಿಂಗಾಯತ ಆಚರಣೆಗಳು
May 8, 2024
ಸವಣ ಸಾಧಕ ಶರಣನಾದ ಬಳ್ಳೇಶ ಮಲ್ಲಯ್ಯ
ಸವಣ ಸಾಧಕ ಶರಣನಾದ ಬಳ್ಳೇಶ ಮಲ್ಲಯ್ಯ
April 29, 2018
ಮೈಸೂರು ಜನಗಣತಿ (ಭಾಗ-3)
ಮೈಸೂರು ಜನಗಣತಿ (ಭಾಗ-3)
May 10, 2023
ಬಸವ ಸ್ಮರಣೆ ಇಂದಿಗೂ ಏಕೆ?
ಬಸವ ಸ್ಮರಣೆ ಇಂದಿಗೂ ಏಕೆ?
May 6, 2020
ಹೀಗೊಂದು ತಲಪರಿಗೆ (ಭಾಗ-5)
ಹೀಗೊಂದು ತಲಪರಿಗೆ (ಭಾಗ-5)
December 8, 2021
ಮನೆ ನೋಡಾ ಬಡವರು
ಮನೆ ನೋಡಾ ಬಡವರು
April 29, 2018
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
April 29, 2018
ಮುಖ- ಮುಖವಾಡ
ಮುಖ- ಮುಖವಾಡ
February 7, 2021
ಬಿಟ್ಟು ಹೋದ ಬಸವಣ್ಣ
ಬಿಟ್ಟು ಹೋದ ಬಸವಣ್ಣ
April 29, 2018
Copyright © 2025 Bayalu