Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ದಾರಿಯಲ್ಲದ ದಾರಿ…
Share:
Poems October 10, 2023 ಕೆ.ಆರ್ ಮಂಗಳಾ

ದಾರಿಯಲ್ಲದ ದಾರಿ…

ಗುರು ತೋರಿದ ದಾರಿಯಲಿ
ಬಂಡೆಗಳ ಸಿಡಿಸಬೇಕು
ಗುಡ್ಡಗಳ ಒಡೆಯಬೇಕು
ಕಮರಿ, ಹೊಳ್ಳ ದಾಟಬೇಕು
ಮುಳ್ಳುಗಂಟಿ ಕಿತ್ತಬೇಕು

ಇಷ್ಟಪಟ್ಟು ನಡೆಯದಿದ್ದರೆ
ಇದು ಬಲು ಕಷ್ಟದ ದಾರಿ

ಧರ್ಮಗ್ರಂಥಗಳ ಹಿಡಿದರೆ
ಎದುರಿದ್ದೂ ಕಾಣದಾ ದಾರಿ

ಮಾತಿನಾಟಕೆ ಸಿಲುಕಿದರೆ
ಮರೆಯಾಗೋ ದಾರಿ

ಅರ್ಥಕ್ಕೆ ಆತುಕೊಂಡರೆ
ಪತ್ತೆಯಾಗದ ದಾರಿ

ಜ್ಞಾನದಾಹಕೆ ಬಾಯ್ತೆರೆದರೆ
ಮರೀಚಿಕೆಯಾಗೋ ದಾರಿ

ಯೋಗದ ಬೆನ್ನ ಬಿದ್ದರೆ
ದೂರ ಉಳಿಯುವ ದಾರಿ

ನಮ್ಮ ಕಗ್ಗಾಡನ್ನು
ನಾವೇ ತರಿಯಬೇಕು
ನಮ್ಮ ಕದಳಿಯ ಹೊಲಬ
ನಾವೇ ಅರಿಯಬೇಕು

ಕೆಚ್ಚಿರಬೇಕು ನಡೆಯುದಕೆ
ಹುಚ್ಚಿರಬೇಕು ಬಿಡೆ ಎನ್ನಲಿಕೆ
ಪಟ್ಟುಹಿಡಿಯಲೇ ಬೇಕು
ಬಾಗದ ಮನಸಿನ ಮುಂದೆ

ಸರಳಾತಿ ಸರಳವಾಗಿದ್ದರೂ
ಸುಲಭದಲಿ ಸಿಗದು
ಹಮ್ಮುಬಿಮ್ಮುಗಳಿಗಂತೂ
ಹತ್ತಿರವೇ ಸುಳಿಯದು
ಅಂತಿಂಥದಲ್ಲ ಈ ಮಹಾದಾರಿ
ಕರುಣೆಯಲಿ ಗುರು ಕೊಟ್ಟ
ಶಿವಪಥಕೊಯ್ಯುವ ಈ ರಹದಾರಿ.

Previous post ಕನ್ನಡಿ ನಂಟು
ಕನ್ನಡಿ ನಂಟು
Next post ಕಡಕೋಳ : ಮರೆತ ಹೆಜ್ಜೆಗಳ ಗುಲ್ದಾಸ್ಥ
ಕಡಕೋಳ : ಮರೆತ ಹೆಜ್ಜೆಗಳ ಗುಲ್ದಾಸ್ಥ

Related Posts

ಕೇಳಿಸಿತೇ?
Share:
Poems

ಕೇಳಿಸಿತೇ?

April 6, 2024 ಜ್ಯೋತಿಲಿಂಗಪ್ಪ
ಈ ಮೂರರ ತಿರುಳ ತೆಗೆದವರಾರು ಐದರ ಒಗಟ ಬಿಡಿಸಿದವರಾರು ಆರರ ಬೆಡಗು ಸವಿದವರಾರು ಎರಡರಲಿ ಒಂದಾಗುವುದು ಒಂದರಲಿ ಹಲವಾಗುವುದು ಒಂದೆರಡಾಗಿ ಎರಡು ನಾಲ್ಕಾಗಿ… ಅನಂತವ ಕಂಡರೆ...
ಸಾವಿನ ಅರಿವೆ ಕಳಚಿ!
Share:
Poems

ಸಾವಿನ ಅರಿವೆ ಕಳಚಿ!

September 14, 2024 ಜಬೀವುಲ್ಲಾ ಎಂ.ಅಸದ್
ತೆರೆದ ಬೆಂಕಿಯ ಕಣ್ಣಲಿ ತಾವರೆಯ ಪ್ರತಿಬಿಂಬ ಕತ್ತಲೆ ಬೆಳಕಿನ ನಡುವಿನ ಯುದ್ಧ ಮುಗುಳ್ನಕ್ಕ ಬುದ್ಧ! ಕಟ್ಟಿದ ಸೇತುವೆ ಬಳಸಿದ ಲತೆ ಚಿಗುರಿದ ಎಲೆಎಲೆಯ ತುಂಬಾ ಇಬ್ಬನಿಯ ಕಲರವ...

Comments 1

  1. Padmalaya
    Oct 11, 2023 Reply

    ಕಿತ್ತಬೇಕು ಅಲ್ಲಮ್ಮಕೀಳಬೇಕು

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದರೆ ಎನಗಿದು ಸೋಜಿಗ…
ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದರೆ ಎನಗಿದು ಸೋಜಿಗ…
June 3, 2019
ಬಸವಣ್ಣ -ಬೆಂಜಮಿನ್ ಬ್ಲೂಮರ ಕಲಿಕಾ ವರ್ಗೀಕರಣ
ಬಸವಣ್ಣ -ಬೆಂಜಮಿನ್ ಬ್ಲೂಮರ ಕಲಿಕಾ ವರ್ಗೀಕರಣ
January 7, 2022
ಒಂದಾಗಿ ನಿಂತೆ…
ಒಂದಾಗಿ ನಿಂತೆ…
April 6, 2024
ಭಾವದಲ್ಲಿ ಭ್ರಮಿತರಾದವರ…
ಭಾವದಲ್ಲಿ ಭ್ರಮಿತರಾದವರ…
July 4, 2022
ಶರಣರು ಕಂಡ ಆಹಾರ ಪದ್ಧತಿ
ಶರಣರು ಕಂಡ ಆಹಾರ ಪದ್ಧತಿ
April 29, 2018
ಅಲ್ಲಮಪ್ರಭುವಿನ ಶೂನ್ಯವಚನಗಳು
ಅಲ್ಲಮಪ್ರಭುವಿನ ಶೂನ್ಯವಚನಗಳು
October 13, 2022
ನಿನಗೂ ನನಗೂ ಒಂದೇ ನಿಜ
ನಿನಗೂ ನನಗೂ ಒಂದೇ ನಿಜ
January 15, 2026
ಪೈಗಂಬರರ ಮಾನವೀಯ ಸಂದೇಶ
ಪೈಗಂಬರರ ಮಾನವೀಯ ಸಂದೇಶ
November 7, 2020
ವಚನ – ಚಿಂತನ
ವಚನ – ಚಿಂತನ
October 10, 2023
ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ
ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ
May 1, 2019
Copyright © 2026 Bayalu