Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಎರಡು ಎಲ್ಲಿ?
Share:
Poems October 5, 2021 ಕೆ.ಆರ್ ಮಂಗಳಾ

ಎರಡು ಎಲ್ಲಿ?

ನಾನು ದ್ವೈತವೋ ಅದ್ವೈತವೋ
ಹೀಗೊಂದು ಪ್ರಶ್ನೆ ಎದ್ದದ್ದೇ ತಡ
ನಡೆದಿತ್ತು ಒಳಗೊಂದು ತಾಕಲಾಟ-

ಒಂದೆಡೆ-
ನೆನಪುಗಳಿಗೆ, ಕನಸುಗಳಿಗೆ
ಪ್ರೀತಿಯ ಕನವರಿಕೆಗಳಿಗೆ
ಎದೆಯ ಹಂಬಲಗಳಿಗೆಲ್ಲ
ನಾನೇ ಕರುಳಿನ ಸೆಲೆ
ಪೋಣಿಸುತಾ ಮಾತುಗಳ
ನಾನಿಲ್ಲದೆ ನೀನಿಲ್ಲ ಎಂದಿತು ಮನ.

ಇನ್ನೊಂದೆಡೆ-
ಪರವಸ್ತುವಿನ ಪ್ರತಿನಿಧಿ ನಾ
ಜಗತ್ಕರ್ತನ ಪ್ರತಿಬಿಂಬ
ಎಲ್ಲದರ ಸೂತ್ರಧಾರಿ
ನಾನೇ ಅಂತಿಮಸತ್ಯ
ಆತ್ಮದ ಪರ ನಡೆದಿತ್ತು
ಚಿತ್ತದ ವಕಾಲತ್ತು.

ಮನವು ಕಲ್ಪನೆಯಾಟ
ಆತ್ಮ ಜ್ಞಾನದ ನೋಟ
ಮನವು- ಆತ್ಮಗಳೆರಡೂ
ನಾನಲ್ಲ ಗುರುವೇ.
ಇಲ್ಲದ ಮನವೂ ಅಲ್ಲ
ಕಲ್ಪಿತ ಆತ್ಮನೂ ಅಲ್ಲ
ಎರಡರ ಹಂಗಳಿದಲ್ಲದೆ
ಆಳ-ನಿರಾಳವಿಲ್ಲ.

Previous post ಮಣ್ಣು ಮೆಟ್ಟಿದ ದಾರಿ
ಮಣ್ಣು ಮೆಟ್ಟಿದ ದಾರಿ
Next post ಹಳದಿ ಹೂವಿನ ಸುತ್ತಾ…
ಹಳದಿ ಹೂವಿನ ಸುತ್ತಾ…

Related Posts

ನನ್ನ ಶರಣರು…
Share:
Poems

ನನ್ನ ಶರಣರು…

April 9, 2021 ಕೆ.ಆರ್ ಮಂಗಳಾ
ನನ್ನ ಶರಣರು ಅವರು- ಬೇರಿಳಿಸಿ, ಬೆವರಿಳಿಸಿ ಭೂಮಿ ಉತ್ತವರು ಕಕ್ಕುಲತೆಯಿಂದ ಬದುಕ ಕಟ್ಟಿದವರು ಹಸಿದ ಹೊಟ್ಟೆಗಳಿಗೆ ಅನ್ನ ಕೊಟ್ಟವರು ಎದೆಯಿಂದ ಎದೆಗೆ ಪ್ರೀತಿ ಹರಿಸಿದವರು. ನನ್ನ...
ಗುರುವೆ ಸುಜ್ಞಾನವೇ…
Share:
Poems

ಗುರುವೆ ಸುಜ್ಞಾನವೇ…

September 7, 2021 ಕೆ.ಆರ್ ಮಂಗಳಾ
ಇದೆ ಎಂದೊಲಿದದ್ದು ಇಲ್ಲ ಹಾಗೇನೂ ಅಲ್ಲ ಎಂದು ಬಲವಾಗಿ ನಂಬಿದ್ದೂ ಇಲ್ಲವೇ ಇಲ್ಲ… ಹಂಬಲಿಸಿ ಹಿಡಿದಿದ್ದೆ ಹಟ ತೊಟ್ಟು ಪಡೆದಿದ್ದೆ ಹಬ್ಬಿಸಿಕೊಂಡಿದ್ದೇ ಕುಸುರಿ ಭಾವಗಳ, ಮನದ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಪ್ರಮಾಣಗಳಿಂದ ಅಪ್ರಮಾಣದೆಡೆ…
ಪ್ರಮಾಣಗಳಿಂದ ಅಪ್ರಮಾಣದೆಡೆ…
July 10, 2025
ಬಸವನಾ ಯೋಗದಿಂ…
ಬಸವನಾ ಯೋಗದಿಂ…
July 1, 2018
ಶಿವಾಚಾರ
ಶಿವಾಚಾರ
April 9, 2021
ಗುರುವಂದನೆ
ಗುರುವಂದನೆ
October 13, 2022
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
ವಚನಗಳು ಮತ್ತು ವ್ಯಕ್ತಿತ್ವ ವಿಕಸನ
May 6, 2021
ಸಾವಿಲ್ಲದ ಝೆನ್ ಗುರು-2
ಸಾವಿಲ್ಲದ ಝೆನ್ ಗುರು-2
May 10, 2022
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
ಅಪರೂಪದ ಸಂಶೋಧಕ: ಅಣಜಿಗಿ ಗೌಡಪ್ಪ ಸಾಧು
January 8, 2023
ದಿ ತಾವೋ ಆಫ್ ಫಿಸಿಕ್ಸ್- ಒಂದು ನೋಟ
ದಿ ತಾವೋ ಆಫ್ ಫಿಸಿಕ್ಸ್- ಒಂದು ನೋಟ
December 8, 2021
ಕರ್ತಾರನ ಕಮ್ಮಟ- ಭಾಗ 3
ಕರ್ತಾರನ ಕಮ್ಮಟ- ಭಾಗ 3
September 5, 2019
ಜಾತಿಗಳು ಬೆರೆಯದೆ ಸುಖವಿಲ್ಲ
ಜಾತಿಗಳು ಬೆರೆಯದೆ ಸುಖವಿಲ್ಲ
September 13, 2025
Copyright © 2025 Bayalu