Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಪೊರೆವ ದನಿ…
Share:
Poems August 11, 2025 ಕೆ.ಆರ್ ಮಂಗಳಾ

ಪೊರೆವ ದನಿ…

ಮೈಯೆಲ್ಲಾ ಕಿವಿಯಾಗಿ
ಮನವೆಲ್ಲಾ ಕಣ್ಣಾಗಿ
ಕೇಳಿಸಿಕೊಂಡೆನಯ್ಯಾ
ನೀನಾಡಿದ ಒಂದೊಂದು ನುಡಿಯ
ಮರೆತು ಹೋಗದಂತೆ
ನಾಲಿಗೆಗೆ ಮಂತ್ರವಾಗಿಸಿದೆ
ಜಾರಿಹೋಗದಂತೆ
ಜೋಪಾನದಿ ಎದೆಗಿಳಿಸಿಕೊಂಡೆ.

ಇಲ್ಲಿದೆ ಕೊಳೆ ಅಲ್ಲಿದೆ ಹೊಲೆ
ಇದೋ ನೋಡು
ದುರ್ವಿಚಾರಗಳ ನೆಲೆ
ಅದೇಕೆ ಬಂತು
ತನ್ನೆಲ್ಲಾ ಬಳಗಸಹಿತ
ದುರ್ಗುಣಗಳ ದಂಡು
ಹುಡುಕಿ ತೆಗೆ ತೆವಲುಗಳ
ಹಿಸುಕಿ ನೋಡು
ನಂಬಿಕೆಗಳ, ಭಾವಗಳ
ಬೂಟಾಟಿಕೆಯ ನಡೆಗಳ
ತೋರುತ್ತ ಹೋದೆಯಯ್ಯಾ
ಮಿಂಚಿನ ಚಾಟಿಯಂತೆ…

ಹಗಲುರಾತ್ರಿ ಎನದೆ
ಬೇಡದ್ದು, ಮರೆತದ್ದು
ಅಗತ್ಯವೇ ಇಲ್ಲದ್ದು
ಎಲ್ಲ ಕಲಬೆರಕೆಯಾಗಿ
ಸುಳಿಯಾಗಿ ಸೆಳೆವಾಗ
ಎದೆಯುದ್ದ, ಕೊರಳುದ್ದ
ಉಕ್ಕೇರಿ ಅಪ್ಪಳಿಸುವಾಗ
ಕೊಚ್ಚಿ ಹೋಗದಂತೆ
ನಿಲುವ ಗುಟ್ಟ ಹೇಳಿಕೊಟ್ಟೆ.

ಸುತ್ತುವರಿದ ಕದಳಿಯಲಿ
ಕಳೆದುಹೋಗದಂತೆ
ಎದುರಿನ ಜಾಲಕ್ಕೆ
ಸಿಕ್ಕಿ ಬೀಳದಂತೆ
ನನ್ನದೇ ಮೋಸಕ್ಕೂ
ನಾನೊಳಗಾಗದಂತೆ
ಭವದ ಜಟಿಲತೆಗಳಿಗೆ
ಎದೆಗುಂದದಂತೆ
ಮೂರರ ಮಾಯೆಗೆ
ಮಾರುಹೋಗದಂತೆ
ಪಾರಾಗುವ ಪಟ್ಟುಗಳ
ಕಲಿಸಿ ಕಾಪಾಡಿದೆ.

Previous post …ಬಯಲನೆ ಬಿತ್ತಿ
…ಬಯಲನೆ ಬಿತ್ತಿ
Next post ಮೈಯೆಲ್ಲಾ ಕಣ್ಣಾಗಿ (10)
ಮೈಯೆಲ್ಲಾ ಕಣ್ಣಾಗಿ (10)

Related Posts

ರೆಕ್ಕೆ ಬಿಚ್ಚಿ…
Share:
Poems

ರೆಕ್ಕೆ ಬಿಚ್ಚಿ…

May 8, 2024 ಕೆ.ಆರ್ ಮಂಗಳಾ
‘ವರ್ಚ್ಯುವಲ್ ವರ್ಲ್ಡ್’ ಎನುವುದು ಕಂಪ್ಯೂಟರ್ ಯುಗದ ಕೂಸಲ್ಲ ಸ್ವಾಮಿ… ಅದರದು ಅನಾದಿ ಇತಿಹಾಸ ಸರ್ವವ್ಯಾಪಿ, ಸರ್ವಶಕ್ತ ಸ್ವರೂಪಿ ಸೂರ್ಯನ ಸುತ್ತ ಭೂಮಿ ಸುತ್ತಿದರೆ ಇದರ...
ನಾನು ಯಾರು?
Share:
Poems

ನಾನು ಯಾರು?

December 8, 2021 Bayalu
ಕನ್ನಡಿ ಪ್ರತಿಬಿಂಬದಲ್ಲಿ ಕಂಡ ಕರಿಮೈಯ ಕವಚ ನೋಡಿ ಊಹಿಸಿಕೊಂಡದ್ದು ಸತ್ತು ಶವವಾಗಿ ಮಣ್ಣಲ್ಲಿ ಮಣ್ಣಾಗಿ ಹೋದವರನು ಕಂಡು ಊಹೆ ಕಳಚಿ, ಮೈಯ ಭ್ರಮೆಯಿಂದ ಹೊರಬಿದ್ದವನು ಕೇಳಿದ ನಾನು...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಗಮ್ಯದೆಡೆಗೆ ಗಮನ
ಗಮ್ಯದೆಡೆಗೆ ಗಮನ
July 5, 2019
ಲಿಂಗಾಯತ ಧರ್ಮ ಪೌರಾಣಿಕವಾದುದಲ್ಲ…
ಲಿಂಗಾಯತ ಧರ್ಮ ಪೌರಾಣಿಕವಾದುದಲ್ಲ…
August 11, 2025
ವಚನಕಾರ ಸಿದ್ಧರಾಮ ಮತ್ತು ರಾಘವಾಂಕನ ಸಿದ್ಧರಾಮ
ವಚನಕಾರ ಸಿದ್ಧರಾಮ ಮತ್ತು ರಾಘವಾಂಕನ ಸಿದ್ಧರಾಮ
December 6, 2020
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ…
ಕಾಯಕದಿಂದ ಪ್ರತ್ಯಕ್ಷ ಪ್ರಾಣಲಿಂಗದೆಡೆಗೆ…
June 14, 2024
ದುಡಿಮೆಯೆಲ್ಲವೂ ಕಾಯಕವೇ?
ದುಡಿಮೆಯೆಲ್ಲವೂ ಕಾಯಕವೇ?
November 10, 2022
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
December 3, 2018
ಅವಿರಳ ಅನುಭಾವಿ-2
ಅವಿರಳ ಅನುಭಾವಿ-2
April 6, 2020
ಬಯಲಾಟ
ಬಯಲಾಟ
March 17, 2021
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
April 29, 2018
ಹುಡುಕಿಕೊಡು ಗುರುವೇ…
ಹುಡುಕಿಕೊಡು ಗುರುವೇ…
July 4, 2022
Copyright © 2026 Bayalu