Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಿನ್ನೆ-ಇಂದು
Share:
Poems May 10, 2022 ಕೆ.ಆರ್ ಮಂಗಳಾ

ನಿನ್ನೆ-ಇಂದು

ನಿನ್ನೆ-

ಬೆಳಗ ಕಾಣದ ಮಸುಕು
ಚಿತ್ತದ ಜಾಡ್ಯ, ಮರೆವಿನ ಬಾಧೆ
ಬೆಂಬಿಡದ ಕಾಮನೆಗಳಲಿ
ಬಂಧಿಯಾಗಿದೆ ಜೀವ
ಬಿಡಿಸು ಗುರುವೆ ಇದರ ಪ್ರವರ…

ಇಂದು-

ಬೆಳಕ ಕೊಡುತಿಹ ಆ ದೀಪ
ಯಾವುದಕೆ ಅಂಟಿದೆ?
ಹಣತೆಗೋ, ಬತ್ತಿಗೋ,
ಎಣ್ಣೆಗೋ, ಗಾಳಿಗೋ…
ಇಲ್ಲಾ ನೋಡುವ ಕಣ್ಣ ಪಾಪೆಗೋ?

ಈ ಪ್ರಾಣ ಅದಾವುದಕೆ
ಅಂಟಿಕೊಂಡಿದೆ…
ದೇಹಕ್ಕೋ, ಉಸಿರಿಗೋ,
ನೀರಿಗೋ, ಸೇವಿಸುವ ಆಹಾರಕೋ
ಇಲ್ಲಾ ಒಳಗಣ ಪರಿಕರಗಳಿಗೋ…?

ಆ ಬೆಳಕಿನಂತೆ
ಈ ಪ್ರಾಣಕ್ಕೂ ಅಂಟಿಗೂ ಯಾವ ನಂಟೂ ಇಲ್ಲ…

ದೀಪ ಹಣತೆಯಲ್ಲಿ
ಜೀವ ದೇಹದಲ್ಲಿ
ಬಂಧಿಗಳೇ ಅಲ್ಲಾ!
ಅದು ಉರಿಯುತಲೇ ಬೆಳಗುವ…
ಇದು ಆಗುತಲೇ ಜೀವಿಸುವ…
ಸಹಜ ಪ್ರಕೃತಿಯ ಸೊಬಗು!
ಆಹಾ! ಎಂತಹ ಬೆಡಗು!!

Previous post ಸಂತೆಯೊಳಗಿನ ಧ್ಯಾನ
ಸಂತೆಯೊಳಗಿನ ಧ್ಯಾನ
Next post ಹಿರಿಯರ ಹಾದಿ…
ಹಿರಿಯರ ಹಾದಿ…

Related Posts

ಹಾಯ್ಕು
Share:
Poems

ಹಾಯ್ಕು

September 6, 2023 ಜ್ಯೋತಿಲಿಂಗಪ್ಪ
೦೧ ದೀಪ ಹಿಡಿದು ಇರುಳು ಆ ನಕ್ಷತ್ರ ಹುಡುಕಲುಂಟೇ… ೦೨ ಮದವೇ ಮದ್ಯ ಮದ ಏರಿದ ಅಷ್ಟೂ ಮತ್ತು ಏರಿತು. ೦೩ ಸಾವು ಎಂಬುದು ಕೊಬ್ಬಿನ ಮಾತು ಅಲ್ಲಾ ಮೆಲ್ಲ ಮಾತಾಡು. ೦೪...
ಸೂರ್ಯ
Share:
Poems

ಸೂರ್ಯ

January 8, 2023 ಜ್ಯೋತಿಲಿಂಗಪ್ಪ
ಸೂರ್ಯ ಈ ಸಂತೆಯೊಳಗೇನು ಹುಡುಕುತಿರುವೇ…? ನಿಶ್ಶಬ್ದ, ಮಾರುವುದಿಲ್ಲವೇ…! ಅದು ಮಂದಿರ ಮಸೀದಿ ಚರ್ಚು ಮಠಗಳ ಹಕ್ಕು ಸುಮ್ಮನೇ ಕುಳಿತು ಕಣ್ಣೊಳಗಣ ಬೆಳಕ ಸದ್ದು ಕೇಳು ಈ ಸಂತೆಗೆ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಹಿರಿಯರ ಹಾದಿ…
ಹಿರಿಯರ ಹಾದಿ…
July 4, 2022
ಲಿಂಗಾಯತ ಮಠಗಳು ಮತ್ತು ಬಸವತತ್ವ
ಲಿಂಗಾಯತ ಮಠಗಳು ಮತ್ತು ಬಸವತತ್ವ
July 21, 2024
ಮನ ಉಂಟೇ ಮರುಳೇ, ಶಿವಯೋಗಿಗೆ?
ಮನ ಉಂಟೇ ಮರುಳೇ, ಶಿವಯೋಗಿಗೆ?
November 10, 2022
ಅದ್ವಿತೀಯ ಶರಣರು
ಅದ್ವಿತೀಯ ಶರಣರು
February 6, 2025
ಅರ್ಥ – ವ್ಯರ್ಥ
ಅರ್ಥ – ವ್ಯರ್ಥ
April 5, 2026
ಕುವೆಂಪು ಕಣ್ಣಲ್ಲಿ ಬಸವಣ್ಣ
ಕುವೆಂಪು ಕಣ್ಣಲ್ಲಿ ಬಸವಣ್ಣ
October 19, 2025
ಗುರು ತತ್ತ್ವವೇ ಅಥವಾ ವ್ಯಕ್ತಿಯೆ?
ಗುರು ತತ್ತ್ವವೇ ಅಥವಾ ವ್ಯಕ್ತಿಯೆ?
July 1, 2018
ಹೀಗೊಂದು ತಲಪರಿಗೆ (ಭಾಗ-5)
ಹೀಗೊಂದು ತಲಪರಿಗೆ (ಭಾಗ-5)
December 8, 2021
ವೈಚಾರಿಕ ಚಳುವಳಿಯ ಮರುಸ್ಥಾಪನೆ
ವೈಚಾರಿಕ ಚಳುವಳಿಯ ಮರುಸ್ಥಾಪನೆ
April 29, 2018
ಮಿತ್ರ-ಶತೃಗಳಿರುವುದು ನಡಾವಳಿಕೆಯಲ್ಲಿ
ಮಿತ್ರ-ಶತೃಗಳಿರುವುದು ನಡಾವಳಿಕೆಯಲ್ಲಿ
September 7, 2021
Copyright © 2026 Bayalu