Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಿನ್ನೆ-ಇಂದು
Share:
Poems May 10, 2022 ಕೆ.ಆರ್ ಮಂಗಳಾ

ನಿನ್ನೆ-ಇಂದು

ನಿನ್ನೆ-

ಬೆಳಗ ಕಾಣದ ಮಸುಕು
ಚಿತ್ತದ ಜಾಡ್ಯ, ಮರೆವಿನ ಬಾಧೆ
ಬೆಂಬಿಡದ ಕಾಮನೆಗಳಲಿ
ಬಂಧಿಯಾಗಿದೆ ಜೀವ
ಬಿಡಿಸು ಗುರುವೆ ಇದರ ಪ್ರವರ…

ಇಂದು-

ಬೆಳಕ ಕೊಡುತಿಹ ಆ ದೀಪ
ಯಾವುದಕೆ ಅಂಟಿದೆ?
ಹಣತೆಗೋ, ಬತ್ತಿಗೋ,
ಎಣ್ಣೆಗೋ, ಗಾಳಿಗೋ…
ಇಲ್ಲಾ ನೋಡುವ ಕಣ್ಣ ಪಾಪೆಗೋ?

ಈ ಪ್ರಾಣ ಅದಾವುದಕೆ
ಅಂಟಿಕೊಂಡಿದೆ…
ದೇಹಕ್ಕೋ, ಉಸಿರಿಗೋ,
ನೀರಿಗೋ, ಸೇವಿಸುವ ಆಹಾರಕೋ
ಇಲ್ಲಾ ಒಳಗಣ ಪರಿಕರಗಳಿಗೋ…?

ಆ ಬೆಳಕಿನಂತೆ
ಈ ಪ್ರಾಣಕ್ಕೂ ಅಂಟಿಗೂ ಯಾವ ನಂಟೂ ಇಲ್ಲ…

ದೀಪ ಹಣತೆಯಲ್ಲಿ
ಜೀವ ದೇಹದಲ್ಲಿ
ಬಂಧಿಗಳೇ ಅಲ್ಲಾ!
ಅದು ಉರಿಯುತಲೇ ಬೆಳಗುವ…
ಇದು ಆಗುತಲೇ ಜೀವಿಸುವ…
ಸಹಜ ಪ್ರಕೃತಿಯ ಸೊಬಗು!
ಆಹಾ! ಎಂತಹ ಬೆಡಗು!!

Previous post ಸಂತೆಯೊಳಗಿನ ಧ್ಯಾನ
ಸಂತೆಯೊಳಗಿನ ಧ್ಯಾನ
Next post ಹಿರಿಯರ ಹಾದಿ…
ಹಿರಿಯರ ಹಾದಿ…

Related Posts

ಎರಡು ಎಲ್ಲಿ?
Share:
Poems

ಎರಡು ಎಲ್ಲಿ?

October 5, 2021 ಕೆ.ಆರ್ ಮಂಗಳಾ
ನಾನು ದ್ವೈತವೋ ಅದ್ವೈತವೋ ಹೀಗೊಂದು ಪ್ರಶ್ನೆ ಎದ್ದದ್ದೇ ತಡ ನಡೆದಿತ್ತು ಒಳಗೊಂದು ತಾಕಲಾಟ- ಒಂದೆಡೆ- ನೆನಪುಗಳಿಗೆ, ಕನಸುಗಳಿಗೆ ಪ್ರೀತಿಯ ಕನವರಿಕೆಗಳಿಗೆ ಎದೆಯ ಹಂಬಲಗಳಿಗೆಲ್ಲ...
ಬಿಟ್ಟು ಹೋದ ಬಸವಣ್ಣ
Share:
Poems

ಬಿಟ್ಟು ಹೋದ ಬಸವಣ್ಣ

April 29, 2018 ಡಾ. ಶಶಿಕಾಂತ ಪಟ್ಟಣ
ಬಿಟ್ಟು ಹೋದ ಬಸವಣ್ಣ ನೆತ್ತಿ ಸುಡುವ ಬಿಸಿಲಿನಲ್ಲಿ ತನ್ನ ನೆರಳ ತಾ ತುಳಿದುಕೊಂಡು. ಮನೆಗೆ ಹೋಗದೆ, ಮಡದಿ ಮಕ್ಕಳಿಗೆ ತಿಳಿಸದೆ, ಮತ್ತೆ ಮರಳಿ ಬಾರದ, ಹೊರಳಿ ತಿರುಗಿ ನೋಡದ, ಭಾರ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ವಚನಗಳ ಮಹತ್ವ
ವಚನಗಳ ಮಹತ್ವ
October 5, 2021
ಸುತ್ತಿ ಸುಳಿವ ಆಟ
ಸುತ್ತಿ ಸುಳಿವ ಆಟ
May 6, 2021
ನಾ ಬರಬಾರದಿತ್ತು ಇಂಥ ಊರಿಗೆ…
ನಾ ಬರಬಾರದಿತ್ತು ಇಂಥ ಊರಿಗೆ…
July 10, 2023
ಶರಣರ ದೃಷ್ಟಿಯಲ್ಲಿ ವ್ರತಾಚರಣೆ
ಶರಣರ ದೃಷ್ಟಿಯಲ್ಲಿ ವ್ರತಾಚರಣೆ
October 2, 2018
ಲಿಂಗಾಯತರ ಅವೈದಿಕ ನಂಬಿಕೆಗಳು
ಲಿಂಗಾಯತರ ಅವೈದಿಕ ನಂಬಿಕೆಗಳು
April 29, 2018
ಬೆಳಕ ಬೆಂಬತ್ತಿ…
ಬೆಳಕ ಬೆಂಬತ್ತಿ…
November 9, 2021
ಅಚಲ ಕಥಾಲೋಕ
ಅಚಲ ಕಥಾಲೋಕ
February 10, 2023
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
January 4, 2020
ನಾನು ಯಾರು? ಎಂಬ ಆಳ ನಿರಾಳ-3
ನಾನು ಯಾರು? ಎಂಬ ಆಳ ನಿರಾಳ-3
May 6, 2020
ಕಾಲ- ಕಲ್ಪಿತವೇ?
ಕಾಲ- ಕಲ್ಪಿತವೇ?
April 11, 2025
Copyright © 2025 Bayalu