Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಿಜ ನನಸಿನ ತಾವ…
Share:
Poems July 10, 2023 ಕೆ.ಆರ್ ಮಂಗಳಾ

ನಿಜ ನನಸಿನ ತಾವ…

ಕಣ್ಣು ಮುಚ್ಚಿದಾಗ ಬರುವ ಕನಸಿಗೂ
ಕಣ್ಬಿಟ್ಟಾಗಿನ ದಿನದ ಚಿತ್ರಾವಳಿಗೂ
ಏನಿಹುದು ಅಂತರ?
ನಗು, ಅಳು, ನೋವು, ಸಂಕಟ…
ಅನುಭವದಲ್ಲಿ ಅದ್ದಿ ತೆಗೆದಂತೆ
ಎಲ್ಲ ಎದುರೆದುರೇ ನಡೆದಂತೆ!
ಹೊಯ್ದಾಟಗಳ ಹಗಲ ನನಸು,
ಕನವರಿಕೆಗಳಾ ಇರುಳ ಕನಸು

ನನಸಂತೆ ಕನಸಲೂ ಅದೇ ಅದೇ
ಒಡಲ ಹಸಿವು, ಹುಸಿಗಳು
ಚಡಪಡಿಕೆಗಳು, ಹುಡುಕಾಟಗಳು
ಅಸಹಾಯಕತೆಯ ತಡವರಿಕೆಗಳು
ಇಲ್ಲಿರುವವರೆಲ್ಲಾ ಅಲ್ಲಿ ಸಿಗುತ್ತಾರೆ
ಅಲ್ಲಿಯವರೆಲ್ಲಾ ಇಲ್ಲಿ ಕಾಣುತ್ತಾರೆ
ಸಂಬಂಧಗಳು, ವಿರೋಧಗಳು,
ದಡಗಳೆರಡರ ಮೇಲೂ ನಿತ್ಯ ಹರಿದಾಡುತ್ತವೆ

ಕನಸು-ನನಸಿನ ಮೋಡಿಯಾಟದಲಿ
ನಾಳೆಗಳು ನಿನ್ನೆಗಳಾಗುತಿವೆ
ಮಲಗಿದಾಗ ದಿನ ಮರೆಯಾಗುತ್ತದೆ
ಎಚ್ಚರಾದಾಗ ಕನಸು ಸರಿಯುತ್ತದೆ
ಯಾವುದು ದಿಟ, ಯಾವುದು ಸಟೆ?
ಅಲ್ಲಿ ತೋರಿದ್ದೋ, ಇಲ್ಲಿ ಕಂಡದ್ದೋ?

ಅರಿವಾಗಿ ಎದೆಗಿಳಿದ ಗುರು ಹೇಳಿದ-
ಎರಡೂ ಸುಳ್ಳಲ್ಲ, ನಿಜದಿರುವೂ ಅಲ್ಲಿಲ್ಲ
ವಿಷಮ ವಿಷಯಗಳ ಹಗಲಿನ ಜಾತ್ರೆ
ಸಿಗದ ಬೇಗುದಿಗಳ ಇರುಳಿನ ಸಂತೆ
ಎಚ್ಚರವಾಗದ ಅಮಲಿನ ಬದುಕಿಗೆ
ಸತ್ಯದ ನೆಲೆಯು ಕಾಣುವುದೆ?
ಕನಸೊಳಗೊಂದು ಕನಸನು ಕಟ್ಟಲು
ನಿಜ ನನಸಿನ ಮರ್ಮ ತಿಳಿಯುವುದೆ?

ನಿನ್ನ ಕದಳಿಯ ನೀ ದಾಟಲೇ ಬೇಕು
ನಿನ್ನ ತಾವಕೆ ನೀ ಸೇರಲೇ ಬೇಕು
ಜಂಗಮ ಚಲನೆಯ ಲಾಸ್ಯವನರಿಯಲು
ಅಚಲವಾಗಿ ನೀ ನಿಲ್ಲಲೇ ಬೇಕು.

Previous post ಗೇಣು ದಾರಿ
ಗೇಣು ದಾರಿ
Next post ಬೆಳಕಿನೆಡೆಗೆ- 2
ಬೆಳಕಿನೆಡೆಗೆ- 2

Related Posts

ಮಾಯದ ಗಾಯ
Share:
Poems

ಮಾಯದ ಗಾಯ

October 19, 2025 ಜ್ಯೋತಿಲಿಂಗಪ್ಪ
ಯಾವಾಗ ಮಳೆ ಬರುವುದೋ ಕಾಯುವ ಆ ದಿನ ಯಾವಾಗ ಮಳೆ ನಿಲ್ಲುವುದೋ ಕಾಯುವ ಈ ದಿನ ದಿನಾ ಕಾಯುವ ಈ ದಿನಕರ ತೋಯಗಳಲಿ ತುಯ್ಯಲಾಟ ಘನವ ನಾನೇನು ಬಲ್ಲೆ ಗೂಡು ಕಟ್ಟಿದ ಹಕ್ಕಿ ಅಂಗಣದಲಿ...
ಮಣ್ಣಿನ ಹೃದಯದಲಿ
Share:
Poems

ಮಣ್ಣಿನ ಹೃದಯದಲಿ

September 13, 2025 ಜಬೀವುಲ್ಲಾ ಎಂ.ಅಸದ್
ಅಳಿದ ಮೇಲೆ ಉಳಿಯುವುದೇನು? ಕೇವಲ ಕುರುಹು ಅಷ್ಟೇ! ಗಾಳಿ ಬೀಸಿದಾಗ ಎಲೆ ಉದುರಿದ ಹಾಗೇ ಕಾಲ ಉರುಳುವ ಬಗೆ ಇರುಳ ಕಣ್ಣಿನಾಗಸದಿ ಕನಸು ನಾವೆಯಾಗಿ ತೇಲುವುದು ಚುಚ್ಚುವ ಮುಳ್ಳುಗಳ...

Comments 1

  1. ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
    Jul 13, 2023 Reply

    ಕಣ್ಣೆಚ್ಚರದಲಿ ಕನಸ ನೋಡಬೇಕು.. ಎಂಬುದನ್ನು ಎಷ್ಟು ಸರಳವಾಗಿ ಹೇಳಿರುವಿರಿ.
    ಓದುವುದೇ ಒಂದು ಚೆಂದ .

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಸಂತೆಯೊಳಗಿನ ಧ್ಯಾನ
ಸಂತೆಯೊಳಗಿನ ಧ್ಯಾನ
May 10, 2022
ಕಾಲ ಮತ್ತು ದೇಶ
ಕಾಲ ಮತ್ತು ದೇಶ
September 13, 2025
ಅಚಲ ಕಥಾಲೋಕ
ಅಚಲ ಕಥಾಲೋಕ
February 10, 2023
ನಾನರಿಯದ ಬಯಲು
ನಾನರಿಯದ ಬಯಲು
April 9, 2021
ಬಯಲಾದ ಬಸವಯೋಗಿಗಳು
ಬಯಲಾದ ಬಸವಯೋಗಿಗಳು
April 3, 2019
ಗಡಿಯಲ್ಲಿ ನಿಂತು…
ಗಡಿಯಲ್ಲಿ ನಿಂತು…
May 6, 2021
ದಾಸೋಹ ತತ್ವ
ದಾಸೋಹ ತತ್ವ
January 10, 2021
ಬಸವ ಸ್ಮರಣೆ ಇಂದಿಗೂ ಏಕೆ?
ಬಸವ ಸ್ಮರಣೆ ಇಂದಿಗೂ ಏಕೆ?
May 6, 2020
ಮಾಯದ ಗಾಯ
ಮಾಯದ ಗಾಯ
October 19, 2025
ಸಾವಿಲ್ಲದ ಝೆನ್ ಗುರು-2
ಸಾವಿಲ್ಲದ ಝೆನ್ ಗುರು-2
May 10, 2022
Copyright © 2025 Bayalu