Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅರ್ಥ – ವ್ಯರ್ಥ
Share:
Poems April 5, 2026 ಜಬೀವುಲ್ಲಾ ಎಂ.ಅಸದ್

ಅರ್ಥ – ವ್ಯರ್ಥ

ಮುಗಿಲಿಗೆ ಜಿಗಿದ ಪಾದ
ಮಸ್ತಕದ ಕಂದಕದಲ್ಲಿ ಚಿಗುರಿ
ಶತಮಾನಗಳ ಮೊಳೆ ಹೊಡೆದ
ಬಿಸಿ ನೆತ್ತರು ಹೆಪ್ಪುಗಟ್ಟಿದ ಗುರುತು
ಕಾಲದ ಸಹಿಯಾಗಿ ಬದಲಾಗಿ
ಉಸಿರ ಗೊರಿಯೊಳಗೆ ಬೆರೆತು
ಹೆಜ್ಜೆ ಗುರುತುಗಳಲ್ಲಿ ಕಣ್ಣುಗಳು
ಬುಗುರಿಯಾಗಿ ಗರಗರ ತಿರುಗಿ
ಕುರುಡು ದಾರಿಯ ಅರಸಿ

ನೆರಳಿಗೆ ಬಿದ್ದ ಬೆಂಕಿ
ಯ ಆರಿಸುವ ಯತ್ನದಲಿ
ಆತ್ಮವೂ ಧಘಧಗಿಸಿ ಉರಿದು
ಆವಿಯಾಗಿ ಕರಗಿ
ಅನಂತತೆಯ ಶೂನ್ಯದಲಿ

ಹೊಕ್ಕುಳ ಬಳ್ಳಿ ಸುತ್ತಿದ ನಾಲಿಗೆ
ಚಡಪಡಿಸುತಿದೆ ಒಂದೇ ಸಮನೆ
ದಿಕ್ಕಿಲ್ಲದ ದೃಷ್ಟಿ ಗೋಡೆಗೆ ಬಡಿದು
ನೆಲಕೆ ಬಿದ್ದು ಹೊರಳಾಡಿ
ಅತ್ತು

ಕಂಬನಿಗಳ ಕನ್ನಡಿಯ ಯೋಮದಲ್ಲಿ
ಅಲೆಮಾರಿ ಒಂಟಿ ಹಕ್ಕಿಯ
ಅನಾಥ ಸದ್ದು ಮೊಳಗಿ
ರೆಕ್ಕೆ ಮುರಿದ ನೋವು ಹೂ ಮುಡಿದು
ಮಡಿದ ಹೃದಯದ ಮಣ್ಣಲ್ಲಿ ಹರಿದು
ಅಂತರಂಗದ ಕಣಿವೆಯಲಿ ನದಿಯಾಗಿ ಉಕ್ಕಿ
ಕಾಣದಾಯಿತು ಕಡಲು ಬಿಕ್ಕಿ

ಎಲ್ಲೊ ಬಿದ್ದಿದೆ ಆ ಮುರಿದ ಮರದ ಕಾಲು
ಸೂರ್ಯ ಸಾಯುವ ಈ ಸರಿಹೊತ್ತಲಿ
ಹೊತ್ತಿಸದ ದೀಪದ ನೆರಳನು
ಸುಮ್ಮನೆ ಹುಡುಕದಿರು ನೀನು

ಕತ್ತಲ ಬೀಜದ ಮೊಳಕೆಯ ಮಿಂಚು
ಹೊಂಚು ಹಾಕುತಿದೆ
ಕಟ್ಟಿದ ಅರಿವೆಯ ಬಿಡಿಸಿ
ಅರಿವಿನ ಕಂಗಳ ಮಿಡಿಸಿ
ಕಾಣು, ಕಾಣುವುದೇನು?
ಕಂಡರೆ, ಕಂಡಿಲ್ಲ ನೀನು
ಏನನ್ನೂ…

Previous post ಯುದ್ದವೋ, ಶಾಂತಿಯೋ…
ಯುದ್ದವೋ, ಶಾಂತಿಯೋ…
Next post ನನ್ನನ್ನು ಕ್ಷಮಿಸು
ನನ್ನನ್ನು ಕ್ಷಮಿಸು

Related Posts

ನದಿಯನರಸುತ್ತಾ…
Share:
Poems

ನದಿಯನರಸುತ್ತಾ…

October 6, 2020 ಜ್ಯೋತಿಲಿಂಗಪ್ಪ
ಜ್ಞಾನವೆಂಬುದೇನು? ಮನೋ ಭೇದ. -ಅಲ್ಲಮ ನಾನು ಹುಟ್ಟುವಾಗ ಹೇಳಿ ಬಂದೆನೇ ಸಾಯುವಾಗಲೂ ಅಷ್ಟೇ ಬದುಕು ಹೇಳದು ಏನೂ ಈ ಕಡಲಲಿ ಕಳೆದಿರುವ ನದಿ ಹುಡುಕುತಿರುವೆ ಹುಡುಕುತಿರುವ ನದಿ...
ನೆಲದ ನಿಧಾನ
Share:
Poems

ನೆಲದ ನಿಧಾನ

April 29, 2018 ಕೆ.ಆರ್ ಮಂಗಳಾ
ನನ್ನ ಶರಣರು ಅವರು ಬೇರಿಳಿಸಿ, ಬೆವರಿಳಿಸಿ ಭೂಮಿ ಉತ್ತವರು ಕಕ್ಕುಲತೆಯಿಂದ ಬದುಕ ಕಟ್ಟಿದವರು ಹಸಿದ ಹೊಟ್ಟೆಗಳಿಗೆ ಅನ್ನ ಕೊಟ್ಟವರು ಎದೆಯಿಂದ ಎದೆಗೆ ಪ್ರೀತಿ ಹರಿಸಿದವರು. ನನ್ನ...

Comments 1

  1. ಸಿದ್ದು ಪಾಟೀಲ್, ಗೌರಿಬಿದನೂರು
    Apr 9, 2026 Reply

    ಕಾಣುತ್ತಿರುವುದು, ಕಂಡೂ ಕಾಣದಿರುವುದು- ಇವುಗಳ ತಾಕಲಾಟದಲ್ಲಿ ಅರ್ಥಗಳು ವ್ಯರ್ಥಗಳಾಗಿ, ವ್ಯರ್ಥವೆಂದವುಗಳು ಅರ್ಥವನ್ನು ಹುದುಗಿಸಿಕೊಂಡ ಪರಿ ಈ ಜಗ, ಈ ಜೀವನ. ಸೊಗಸಾದ ಕವನ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ…
ನಾನು ಬಂದ ಕಾರ್ಯಕ್ಕೆ ನೀವು ಬಂದಿರಯ್ಯ…
July 1, 2018
ನೆಟ್ಟ ನಂಜು ಹಾಲೀಂಟದು
ನೆಟ್ಟ ನಂಜು ಹಾಲೀಂಟದು
June 5, 2021
ದುಡಿಮೆಯೆಲ್ಲವೂ ಕಾಯಕವೇ?
ದುಡಿಮೆಯೆಲ್ಲವೂ ಕಾಯಕವೇ?
November 10, 2022
ಹೀಗೊಂದು ತಲಪರಿಗೆ (ಭಾಗ-2)
ಹೀಗೊಂದು ತಲಪರಿಗೆ (ಭಾಗ-2)
July 4, 2021
ಪ್ರಭುಲಿಂಗಲೀಲೆ…
ಪ್ರಭುಲಿಂಗಲೀಲೆ…
May 10, 2022
ಭಕ್ತನಾದೆನೆಂಬವರೆಲ್ಲಾ ಭವಿಗಳಾದರು -ಅಮುಗೆ ರಾಯಮ್ಮ
ಭಕ್ತನಾದೆನೆಂಬವರೆಲ್ಲಾ ಭವಿಗಳಾದರು -ಅಮುಗೆ ರಾಯಮ್ಮ
October 13, 2022
ದಾರಿ ಬಿಡಿ…
ದಾರಿ ಬಿಡಿ…
December 6, 2020
ಆ ಬಿರುಗಾಳಿ ಹುಟ್ಟಲೊಡನೆ…
ಆ ಬಿರುಗಾಳಿ ಹುಟ್ಟಲೊಡನೆ…
January 8, 2023
ಶರಣ ಕುಂಬಾರಣ್ಣನ ಸರಸ ದಾಂಪತ್ಯ
ಶರಣ ಕುಂಬಾರಣ್ಣನ ಸರಸ ದಾಂಪತ್ಯ
May 1, 2019
ಗಮ್ಯದೆಡೆಗೆ ಗಮನ
ಗಮ್ಯದೆಡೆಗೆ ಗಮನ
July 5, 2019
Copyright © 2026 Bayalu