Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅನಾದಿ ಕಾಲದ ಗಂಟು…
Share:
Poems November 10, 2022 ಕೆ.ಆರ್ ಮಂಗಳಾ

ಅನಾದಿ ಕಾಲದ ಗಂಟು…

ಹಗುರಾಗುತಿದೆ ಹೃದಯ
ಹೆಗಲ ಹೊರೆ ಇಳಿದು
ಭೂಮಿಗಿಂತಲೂ ವಜನ
ಹತ್ತಿಗಿಂತಲೂ ಹಗುರ
ಹೊರಲಾಗದ ಭಾರ ಹೊತ್ತಿದ್ದ
ಎದೆಗೆ, ಈಗ ಎಂಥದೋ ನಿರಾಳ…

ಕಣ್ಣುಬಿಟ್ಟಾಗಿನಿಂದ ಕಂಡದ್ದು
ಎಲ್ಲೆಲ್ಲೋ ಕೇಳಿದ್ದು
ಅವರಿವರು ಕಲಿಸಿದ್ದು
ಮೂಸಿದ್ದು ಹೊಸೆದದ್ದು
ಖಾಲಿಯಾಗದ ಗಂಟು
ಹೆಗಲೇರಿ ಕುಳಿತಿತ್ತು…

ಮುಟ್ಟಿದ್ದು ಮೂರಾಗಿ
ಇಟ್ಟಿದ್ದು ಆರಾಗಿ
ಬಗಲಚೀಲದಲಿದ್ದವು
ಚಿತ್ರವಿಭ್ರಮದ ಸರಕು
ಭವದ ಸಂತೆಯಲಿತ್ತು
ಅನಾದಿ ಕಾಲದ ಗಂಟು…

ಮಾಯೆಯೋ ಮರೆವೋ
ರೂಢಿಗೆ ಬಿದ್ದ ಚಾಳಿಯೋ
ಕಾರ್ಯ-ಕಾರಣದ ಚಕ್ರವೋ?
ಸ್ವಲಿಖಿತ ಹಣೆಬರಹವೋ
ಛಿದ್ರಚಿತ್ತದ ವ್ಯಾಧಿಯಲಿ
ನರಳುತಿದೆ ಲೋಕ…

ಬೆಳೆದಂತೆ ಭುಜವೇರುತ್ತಾ
ನರನಾಡಿಗಳ ಹಬ್ಬಿ
ನನ್ನ ನುಂಗಿ ಬಿಟ್ಟಿದ್ದು
ಈವರೆಗೂ ಅರಿವಾಗಲೇ ಇಲ್ಲ!!
ಗುರು ತೋರುವ ತನಕ
ಭಾರ ಹೊತ್ತುದೇ ತಿಳಿಯಲಿಲ್ಲ!!!

Previous post ಹಾಯ್ಕುಗಳು
ಹಾಯ್ಕುಗಳು
Next post ಶೂನ್ಯ ಸಂಪಾದನೆ ಎಂದರೇನು?
ಶೂನ್ಯ ಸಂಪಾದನೆ ಎಂದರೇನು?

Related Posts

ಗ್ರಹಣ
Share:
Poems

ಗ್ರಹಣ

December 9, 2025 ಡಾ. ಪಂಚಾಕ್ಷರಿ ಹಳೇಬೀಡು
ಗ್ರಹಣ ಹಿಡಿದದ್ದು ಯಾರಿಗೆ? ರವಿಗೋ, ಶಶಿಗೋ, ಮೂರ್ಖನಿಗೋ? ವಿಶಾಲಾಗಸದಿ ಸುತ್ತುವರು ಭೂರವಿಚಂದ್ರತಾರೆ ಸೃಷ್ಟಿಯಲಿ ಸನಿಹವಿಲ್ಲ, ಸಂಬಂಧವುಂಟು! ಸ್ಪರ್ಷ ಮೊದಲಿಲ್ಲ...
ನದಿಯನರಸುತ್ತಾ…
Share:
Poems

ನದಿಯನರಸುತ್ತಾ…

October 6, 2020 ಜ್ಯೋತಿಲಿಂಗಪ್ಪ
ಜ್ಞಾನವೆಂಬುದೇನು? ಮನೋ ಭೇದ. -ಅಲ್ಲಮ ನಾನು ಹುಟ್ಟುವಾಗ ಹೇಳಿ ಬಂದೆನೇ ಸಾಯುವಾಗಲೂ ಅಷ್ಟೇ ಬದುಕು ಹೇಳದು ಏನೂ ಈ ಕಡಲಲಿ ಕಳೆದಿರುವ ನದಿ ಹುಡುಕುತಿರುವೆ ಹುಡುಕುತಿರುವ ನದಿ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಹೆಸರಿಲ್ಲದಾ ಊರಿನ ಹಾಡು
ಹೆಸರಿಲ್ಲದಾ ಊರಿನ ಹಾಡು
May 6, 2020
ವಚನಗಳ ನೆಲೆಯಲ್ಲಿ ವ್ಯಕ್ತಿತ್ವ ವಿಕಸನ
ವಚನಗಳ ನೆಲೆಯಲ್ಲಿ ವ್ಯಕ್ತಿತ್ವ ವಿಕಸನ
July 10, 2025
ನಾನು  ಬಿಂಬ
ನಾನು ಬಿಂಬ
September 13, 2025
ಧೀಮಂತ ಶರಣ ಬಹುರೂಪಿ ಚೌಡಯ್ಯ
ಧೀಮಂತ ಶರಣ ಬಹುರೂಪಿ ಚೌಡಯ್ಯ
April 29, 2018
ನೆಲದ ಮರೆಯ ನಿಧಾನದಂತೆ…
ನೆಲದ ಮರೆಯ ನಿಧಾನದಂತೆ…
April 29, 2018
ವೀರ
ವೀರ
April 29, 2018
ಲಿಂಗಾಯತ ಧರ್ಮದ ಆಚಾರ-ವಿಚಾರ-ಸಂಘಟನೆ
ಲಿಂಗಾಯತ ಧರ್ಮದ ಆಚಾರ-ವಿಚಾರ-ಸಂಘಟನೆ
April 6, 2023
ಒಳಗೆ ತೊಳೆಯಲರಿಯದೆ…
ಒಳಗೆ ತೊಳೆಯಲರಿಯದೆ…
May 10, 2022
ವಚನ ಸಾಹಿತ್ಯದ ಸಂಕೀರ್ಣತೆ
ವಚನ ಸಾಹಿತ್ಯದ ಸಂಕೀರ್ಣತೆ
April 29, 2018
WHO AM I?
WHO AM I?
June 17, 2020
Copyright © 2026 Bayalu