Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹುಡುಕಿಕೊಡು ಗುರುವೇ…
Share:
Poems July 4, 2022 ಕೆ.ಆರ್ ಮಂಗಳಾ

ಹುಡುಕಿಕೊಡು ಗುರುವೇ…

ದೇಹದಲ್ಲೋ ಭಾವದಲ್ಲೋ
ಎದೆಯ ಒಳಗೋ ತಲೆಯ ಒಳಗೋ
ಕಳೆದುಹೋಗಿದ್ದೇನೆ ನಾನು
ಕಳೆದುಹೋಗಿದ್ದೇನೆ…

ಕುಲದಲ್ಲೋ ಛಲದಲ್ಲೋ
ಹಠದಲ್ಲೋ ಅಹಮಿನಲ್ಲೋ
ಸೇರಿಹೋಗಿದ್ದೇನೆ ನಾನು
ಸೇರಿಹೋಗಿದ್ದೇನೆ…

ಸಂಗದಲ್ಲೋ ಸಂಸಾರದಲ್ಲೋ
ಸ್ನೇಹದಲ್ಲೋ ಪ್ರೇಮದಲ್ಲೋ
ಮುಳುಗಿಹೋಗಿದ್ದೇನೆ ನಾನು
ಮುಳುಗಿಹೋಗಿದ್ದೇನೆ…

ನೆನಪಿನಲ್ಲೋ ಕನಸಿನಲ್ಲೋ
ಮಾತಿನಲ್ಲೋ ಮೌನದಲ್ಲೋ
ಕರಗಿ ಹೋಗಿದ್ದೇನೆ ನಾನು
ಕರಗಿ ಹೋಗಿದ್ದೇನೆ…

ಬರೆಯುತಿರುವ ಅಕ್ಷರಗಳಲ್ಲೋ
ಕಲೆ ಹಾಕಿದ ಮಾಹಿತಿಯೊಳಗೋ
ಮಸುಕಾಗಿದ್ದೇನೆ
ಕಳೆದು ಹೋದ ಕಾಲದಲ್ಲೋ
ನಾಳೆ ಬರುವ ದಿನಗಳಲ್ಲೋ
ಜಾರಿಹೋಗಿದ್ದೇನೆ…

ಮತಿಗೆಟ್ಟು ಧೃತಿಗೆಟ್ಟು
ಮುಂದ ತಿಳಿಯದೇ, ಗೊತ್ತನರಿಯದೇ
ನಡೆವ ದಾರಿಯಲ್ಲಿ ದಿಕ್ಕುತಪ್ಪಿದ್ದೇನೆ
ಹುಡುಕಿಕೊಡು ಗುರುವೆ
ನನ್ನ ನನಗೆ ಹುಡುಕಿಕೊಡು.

Previous post ಮರೆತೆ…
ಮರೆತೆ…
Next post ಅಷ್ಟಾವರಣವೆಂಬ ಭಕ್ತಿ ಸಾಧನ
ಅಷ್ಟಾವರಣವೆಂಬ ಭಕ್ತಿ ಸಾಧನ

Related Posts

ಕಾಯೋ ಗುರುವೇ…
Share:
Poems

ಕಾಯೋ ಗುರುವೇ…

February 11, 2022 ಕೆ.ಆರ್ ಮಂಗಳಾ
ನಾನು: ಗಾಳಿಯೇ ಆಡದ, ಕತ್ತಲ ಕೋಣ್ಯಾಗ ಕಳೆದು ಹೋಗಿನಿ ನನ ಗುರುವೆ ಚಿಲಕವ ಸರಿಸಿ, ಬಾಗಿಲು ತೆಗೆದು ಬೆಳಕಾ ತೋರಿಸು ನನ ಗುರುವೆ ತಡವುತ ಎಡವುತ, ಅಲ್ಲಲ್ಲೇ ಸುತ್ತುತ ಹೈರಾಣಾಗಿಹೆ...
ನಾನು ಯಾರು?
Share:
Poems

ನಾನು ಯಾರು?

December 8, 2021 Bayalu
ಕನ್ನಡಿ ಪ್ರತಿಬಿಂಬದಲ್ಲಿ ಕಂಡ ಕರಿಮೈಯ ಕವಚ ನೋಡಿ ಊಹಿಸಿಕೊಂಡದ್ದು ಸತ್ತು ಶವವಾಗಿ ಮಣ್ಣಲ್ಲಿ ಮಣ್ಣಾಗಿ ಹೋದವರನು ಕಂಡು ಊಹೆ ಕಳಚಿ, ಮೈಯ ಭ್ರಮೆಯಿಂದ ಹೊರಬಿದ್ದವನು ಕೇಳಿದ ನಾನು...

Comments 3

  1. Manohara acharya
    Jul 5, 2022 Reply

    ನಮಸ್ತೆ ಮಂಗಳ.ಹುಡುಕಿ ಕೊಡಿ ಗುರುವೇ ಮತ್ತು ನನ್ನ ನಿನ್ನ ನಡುವೆ ಬಹಳ ಸೊಗಸಾಗಿದೆ. ಇನ್ನು ಹೆಚ್ಚು ಹೆಚ್ಚು ಹೊರಬರಲಿ ಎಂದು ಆಶಿಸುತ್ತೇನೆ.ಪ್ರೀತಿ ಇರಲಿ

  2. H V Jaya
    Jul 6, 2022 Reply

    ಕವನ ಬಹಳ ಅರ್ಥಗರ್ಭಿತವಾಗಿದೆ… ನಾನೂ ಅಜ್ಞಾನದ ಕತ್ತಲೆಯೊಳಗೆ ಕಳದುಹೋಗಿದ್ದೇನೆ. ಸುಜ್ಞಾನವನ್ನು ನೀಡಿ ಹುಡುಕಿ ಕೊಡಿ ಗುರುವೆ…

  3. ಪೆರೂರು ಜಾರು, ಉಡುಪಿ
    Jul 7, 2022 Reply

    ಕಳೆದುಕೊಂಡವರನ್ನು ಹುಡುಕಿಕೊಡುವ ಗುರುಗಳು ಇಂದೂ ಇದ್ದಾರೆಯೆ? ಪೋಲೀಸರಂತೂ ಕಳೆದುಕೊಂಡವರಿಂದ ತಮಗೇನು ಲಾಭ ಎಂದು ತಿಳಿದ ಬಳಿಕ ಹುಡುಕುತ್ತಾರೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಬಿಂಬ-ಪ್ರತಿಬಿಂಬ
ಬಿಂಬ-ಪ್ರತಿಬಿಂಬ
February 5, 2020
ಅಳಿದು ಕೂಡುವುದು- ಅಳಿಯದೆ ಕೂಡುವುದು
ಅಳಿದು ಕೂಡುವುದು- ಅಳಿಯದೆ ಕೂಡುವುದು
March 9, 2023
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
April 29, 2018
ಗುರುಪಥ
ಗುರುಪಥ
January 4, 2020
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
April 29, 2018
ಐನಸ್ಟೈನ್ ಮತ್ತು ದೇವರು
ಐನಸ್ಟೈನ್ ಮತ್ತು ದೇವರು
October 5, 2021
ಸಾಮರಸ್ಯದ ಮಹಾನದಿ: ಕಡಕೋಳ ಮಡಿವಾಳಪ್ಪ
ಸಾಮರಸ್ಯದ ಮಹಾನದಿ: ಕಡಕೋಳ ಮಡಿವಾಳಪ್ಪ
February 10, 2023
ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದರೆ ಎನಗಿದು ಸೋಜಿಗ…
ಕಾಣಬಾರದ ಲಿಂಗವು ಕರಸ್ಥಲಕ್ಕೆ ಬಂದರೆ ಎನಗಿದು ಸೋಜಿಗ…
June 3, 2019
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
February 7, 2021
ಶಿವನ ಕುದುರೆ – 2
ಶಿವನ ಕುದುರೆ – 2
June 3, 2019
Copyright © 2023 Bayalu