Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹುಡುಕಿಕೊಡು ಗುರುವೇ…
Share:
Poems July 4, 2022 ಕೆ.ಆರ್ ಮಂಗಳಾ

ಹುಡುಕಿಕೊಡು ಗುರುವೇ…

ದೇಹದಲ್ಲೋ ಭಾವದಲ್ಲೋ
ಎದೆಯ ಒಳಗೋ ತಲೆಯ ಒಳಗೋ
ಕಳೆದುಹೋಗಿದ್ದೇನೆ ನಾನು
ಕಳೆದುಹೋಗಿದ್ದೇನೆ…

ಕುಲದಲ್ಲೋ ಛಲದಲ್ಲೋ
ಹಠದಲ್ಲೋ ಅಹಮಿನಲ್ಲೋ
ಸೇರಿಹೋಗಿದ್ದೇನೆ ನಾನು
ಸೇರಿಹೋಗಿದ್ದೇನೆ…

ಸಂಗದಲ್ಲೋ ಸಂಸಾರದಲ್ಲೋ
ಸ್ನೇಹದಲ್ಲೋ ಪ್ರೇಮದಲ್ಲೋ
ಮುಳುಗಿಹೋಗಿದ್ದೇನೆ ನಾನು
ಮುಳುಗಿಹೋಗಿದ್ದೇನೆ…

ನೆನಪಿನಲ್ಲೋ ಕನಸಿನಲ್ಲೋ
ಮಾತಿನಲ್ಲೋ ಮೌನದಲ್ಲೋ
ಕರಗಿ ಹೋಗಿದ್ದೇನೆ ನಾನು
ಕರಗಿ ಹೋಗಿದ್ದೇನೆ…

ಬರೆಯುತಿರುವ ಅಕ್ಷರಗಳಲ್ಲೋ
ಕಲೆ ಹಾಕಿದ ಮಾಹಿತಿಯೊಳಗೋ
ಮಸುಕಾಗಿದ್ದೇನೆ
ಕಳೆದು ಹೋದ ಕಾಲದಲ್ಲೋ
ನಾಳೆ ಬರುವ ದಿನಗಳಲ್ಲೋ
ಜಾರಿಹೋಗಿದ್ದೇನೆ…

ಮತಿಗೆಟ್ಟು ಧೃತಿಗೆಟ್ಟು
ಮುಂದ ತಿಳಿಯದೇ, ಗೊತ್ತನರಿಯದೇ
ನಡೆವ ದಾರಿಯಲ್ಲಿ ದಿಕ್ಕುತಪ್ಪಿದ್ದೇನೆ
ಹುಡುಕಿಕೊಡು ಗುರುವೆ
ನನ್ನ ನನಗೆ ಹುಡುಕಿಕೊಡು.

Previous post ಮರೆತೆ…
ಮರೆತೆ…
Next post ಅಷ್ಟಾವರಣವೆಂಬ ಭಕ್ತಿ ಸಾಧನ
ಅಷ್ಟಾವರಣವೆಂಬ ಭಕ್ತಿ ಸಾಧನ

Related Posts

ಒಳಗಣ ಮರ
Share:
Poems

ಒಳಗಣ ಮರ

March 12, 2022 ಜ್ಯೋತಿಲಿಂಗಪ್ಪ
ಈ ಪದ ಏನು ನಿಜ ಹೇಳುತ್ತಾ ನಿಜ ಹೇಳುವುದು ಅಲ್ಲಾ ಕಾಣುವುದು ಅಲ್ಲಾ ಕೇಳುವುದು ಅಲ್ಲಾ ಅನುಭಾವಿಸುವುದು ಭಾವದಲಿ ಆನು ನಿಜವಾಗುವುದು ಈ ಪದ ಅರ್ಥದಲಿ ಏನಿದೆಯೋ ಅಕ್ಷರ ಬಲ್ಲವರು...
ಗಡಿಯಲ್ಲಿ ನಿಂತು…
Share:
Poems

ಗಡಿಯಲ್ಲಿ ನಿಂತು…

May 6, 2021 ಜ್ಯೋತಿಲಿಂಗಪ್ಪ
ಈ ಬಯಲಲಿ ಕುಳಿತು ಹಿಂದಣ ಹೆಜ್ಜೆಗಳ ಎಣಿಸುತಿರುವೆ ಖಾಲಿ ಮುಖವಿಲ್ಲದ ನಾಳೆಗಳು ಮುಖವಾಡದ ನಿನ್ನೆಗಳು ಮುಖಾಮುಖಿ ಯ ಇಂದು ಈ ಅರಳಿದ ಅರಳೆ ರಾಟೆಯಲಿ ಸಿಲುಕಿ ನೂಲು ಹಾಸು ಹೊಕ್ಕು...

Comments 3

  1. Manohara acharya
    Jul 5, 2022 Reply

    ನಮಸ್ತೆ ಮಂಗಳ.ಹುಡುಕಿ ಕೊಡಿ ಗುರುವೇ ಮತ್ತು ನನ್ನ ನಿನ್ನ ನಡುವೆ ಬಹಳ ಸೊಗಸಾಗಿದೆ. ಇನ್ನು ಹೆಚ್ಚು ಹೆಚ್ಚು ಹೊರಬರಲಿ ಎಂದು ಆಶಿಸುತ್ತೇನೆ.ಪ್ರೀತಿ ಇರಲಿ

  2. H V Jaya
    Jul 6, 2022 Reply

    ಕವನ ಬಹಳ ಅರ್ಥಗರ್ಭಿತವಾಗಿದೆ… ನಾನೂ ಅಜ್ಞಾನದ ಕತ್ತಲೆಯೊಳಗೆ ಕಳದುಹೋಗಿದ್ದೇನೆ. ಸುಜ್ಞಾನವನ್ನು ನೀಡಿ ಹುಡುಕಿ ಕೊಡಿ ಗುರುವೆ…

  3. ಪೆರೂರು ಜಾರು, ಉಡುಪಿ
    Jul 7, 2022 Reply

    ಕಳೆದುಕೊಂಡವರನ್ನು ಹುಡುಕಿಕೊಡುವ ಗುರುಗಳು ಇಂದೂ ಇದ್ದಾರೆಯೆ? ಪೋಲೀಸರಂತೂ ಕಳೆದುಕೊಂಡವರಿಂದ ತಮಗೇನು ಲಾಭ ಎಂದು ತಿಳಿದ ಬಳಿಕ ಹುಡುಕುತ್ತಾರೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮಾತು ಮಾಯೆ
ಮಾತು ಮಾಯೆ
July 4, 2021
ಕುರುಹಿಲ್ಲದಾತಂಗೆ ಹೆಸರಾವುದು?
ಕುರುಹಿಲ್ಲದಾತಂಗೆ ಹೆಸರಾವುದು?
February 6, 2019
ಕನ್ನಗತ್ತಿಯ ಮಾರಯ್ಯ
ಕನ್ನಗತ್ತಿಯ ಮಾರಯ್ಯ
April 3, 2019
ಪೈಗಂಬರರ ಮಾನವೀಯ ಸಂದೇಶ
ಪೈಗಂಬರರ ಮಾನವೀಯ ಸಂದೇಶ
November 7, 2020
ಶಾಸ್ತ್ರ ಘನವೆಂಬೆನೆ?
ಶಾಸ್ತ್ರ ಘನವೆಂಬೆನೆ?
December 3, 2018
ಜಗವ ಸುತ್ತಿಪ್ಪುದು ನಿನ್ನ ಮಾಯೆ…
ಜಗವ ಸುತ್ತಿಪ್ಪುದು ನಿನ್ನ ಮಾಯೆ…
April 29, 2018
ವೈಚಾರಿಕ ಚಳುವಳಿಯ ಮರುಸ್ಥಾಪನೆ
ವೈಚಾರಿಕ ಚಳುವಳಿಯ ಮರುಸ್ಥಾಪನೆ
April 29, 2018
ಹುಚ್ಚು ಖೋಡಿ ಮನಸು
ಹುಚ್ಚು ಖೋಡಿ ಮನಸು
August 6, 2022
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
ಇಂದಿನ ಪರಿಸ್ಥಿತಿಯಲ್ಲಿ ಕಾಯಕ-ದಾಸೋಹ
February 7, 2021
ನಿಚ್ಚ ನಿಚ್ಚ ಶಿವರಾತ್ರಿ
ನಿಚ್ಚ ನಿಚ್ಚ ಶಿವರಾತ್ರಿ
March 6, 2020
Copyright © 2023 Bayalu