Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಆಗು ಕನ್ನಡಿಯಂತೆ…
Share:
Poems September 13, 2025 ಕೆ.ಆರ್ ಮಂಗಳಾ

ಆಗು ಕನ್ನಡಿಯಂತೆ…

ಗ್ರಹಿಸು
ಸಂಗ್ರಹಿಸಬೇಡ
ಏನನ್ನೂ…
ಕಂಡದ್ದು ಕೇಳಿದ್ದು
ಮೂಸಿದ್ದು ಮುಟ್ಟಿದ್ದು
ಅನುಭವಿಸಿದ್ದು
ಓದಿದ್ದು ಕೂಡ…

ತೂರಿಹೋಗಲಿ
ಅವಿತ
ವಾಸನೆಗಳೆಲ್ಲಾ
ಮುಗಿಬಿದ್ದು
ಬರುವ
ಯೋಚನೆಗಳೆಲ್ಲಾ
ಹೊಂಚು
ಹಾಕುವ
ಸಂಚಯಗಳೆಲ್ಲಾ…
ಸಂಕಲ್ಪ
ವಿಕಲ್ಪಗಳ
ತೊಳಲಾಟಗಳೆಲ್ಲಾ…

ಮಾತು
ಬಲಿಯದ ಮುನ್ನ
ಮೌನ ತಾಳು
ಮೌನ
ಕರಗುವ ಮುನ್ನ
ಖಾಲಿಯಾಗು…

ಸಹನಳಾಗು
ಭೂಮಿಯಂತೆ
ಸ್ವತಂತ್ರವಾಗಿರು
ಗಾಳಿಯಂತೆ
ಹರಿಯುತಿರು
ನೀರಿನಂತೆ
ಶುದ್ಧವಾಗಿರು
ಬೆಂಕಿಯಂತೆ
ಮುಕ್ತವಾಗಿರು
ಆಗಸದಂತೆ…

ಗುರು-
ಎಲ್ಲ ಹೇಳಿಯೂ
ಹೇಳದ ಗುಟ್ಟು…
ತೋರುವ ಕನ್ನಡಿ
ಕೂಡಿಡದು ಏನನೂ…
ಕನ್ನಡಿಯಾದರಲ್ಲವೆ
ಮನವೆಂಬುದು
ಬೇರಲ್ಲಾ
ಮಹಾದೇವನ ಅರುಹು.

Previous post ನಾನು  ಬಿಂಬ
ನಾನು ಬಿಂಬ
Next post ಕುವೆಂಪು ಕಣ್ಣಲ್ಲಿ ಬಸವಣ್ಣ
ಕುವೆಂಪು ಕಣ್ಣಲ್ಲಿ ಬಸವಣ್ಣ

Related Posts

ಈ ಕ್ಷಣದ ಸತ್ಯ
Share:
Poems

ಈ ಕ್ಷಣದ ಸತ್ಯ

March 12, 2022 ಕೆ.ಆರ್ ಮಂಗಳಾ
ಧಗಧಗಿಸಿ ಮೇಲೇರುತಿಹ ಕೆನ್ನಾಲಿಗೆಯ ಈ ಬೆಂಕಿ ಅಡಗಿತ್ತು ಎಲ್ಲಿ? ಮರದ ಬೊಡ್ಡೆಯಲೋ? ಒಣಗಿದ ಸೌದೆಯಲೋ, ಮದ್ದಗೀರಿದ ಕಡ್ಡಿಯಲ್ಲೋ, ಊದುತಿಹ ಗಾಳಿಯಲ್ಲೋ? ಎಲ್ಲಿಂದ ಬಂತು ಕಣ್ಣ...
ಈ  ದಾರಿ…
Share:
Poems

ಈ ದಾರಿ…

May 10, 2023 ಜ್ಯೋತಿಲಿಂಗಪ್ಪ
ಈ ದಾರಿ ಹೋಗುವುದು ಎಲ್ಲಿಗೆ ನಾನೂ ಅರಿಯೆ ನೀವೂ ಅರಿಯೆರಿ ಅರಿದವನಂತೆ ನಾನು ಹೋಗುತಿರಲು ಅರಿಯದವರಂತೆ ನೀವು ಸುಮ್ಮನೇ ಇರುವಿರಿ ಏನು ಚೆಂದ ಅಲ್ಲಲ್ಲಿಗೆ ಅಲ್ಲಲ್ಲಿಗೆ ದಾರಿ...

Comments 1

  1. ಸುರೇಶ್ ಪಾಟೀಲ್
    Oct 2, 2025 Reply

    ಅಕ್ಕಾ, ಪದೇಪದೇ ಓದಿಸಿಕೊಳ್ಳುವ ಮಾತುಗಳಿವೆ ನಿಮ್ಮ ಕವನದಲ್ಲಿ, ಬಹಳ ಹಿಡಿಸಿತು. ಅಂತಹ ಗುರು ಸಿಗುವ ಪುಣ್ಯ ಎಲ್ಲರಿಗೂ ಇರುವುದಿಲ್ಲ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಮಹದೇವ ಭೂಪಾಲ ಮಾರಯ್ಯನಾದದ್ದು…
ಮಹದೇವ ಭೂಪಾಲ ಮಾರಯ್ಯನಾದದ್ದು…
March 5, 2019
ಲಿಂಗಾಯತರ ಅವೈದಿಕ ನಂಬಿಕೆಗಳು
ಲಿಂಗಾಯತರ ಅವೈದಿಕ ನಂಬಿಕೆಗಳು
April 29, 2018
ಶರಣ ಕುಂಬಾರಣ್ಣನ ಸರಸ ದಾಂಪತ್ಯ
ಶರಣ ಕುಂಬಾರಣ್ಣನ ಸರಸ ದಾಂಪತ್ಯ
May 1, 2019
ಮಿಥ್ಯಾದೃಷ್ಟಿರಹಿತ ಬಯಲ ದರ್ಶನ
ಮಿಥ್ಯಾದೃಷ್ಟಿರಹಿತ ಬಯಲ ದರ್ಶನ
May 6, 2021
ಸತ್ಯ ಸಂಶೋಧನಾ ಲೇಖನ – ಒಂದು ಹೊಸ ಹೆಜ್ಜೆ
ಸತ್ಯ ಸಂಶೋಧನಾ ಲೇಖನ – ಒಂದು ಹೊಸ ಹೆಜ್ಜೆ
April 29, 2018
ಆಗು ಕನ್ನಡಿಯಂತೆ…
ಆಗು ಕನ್ನಡಿಯಂತೆ…
September 13, 2025
ಸಕಾರವೋ… ನಕಾರವೋ…
ಸಕಾರವೋ… ನಕಾರವೋ…
July 5, 2019
ಅನಿಮಿಷ- ಕಾದು ಗಾರಾದ ಮಣ್ಣು(7)
ಅನಿಮಿಷ- ಕಾದು ಗಾರಾದ ಮಣ್ಣು(7)
June 12, 2025
ಗುರು ಶಿಷ್ಯ ಸಂಬಂಧ
ಗುರು ಶಿಷ್ಯ ಸಂಬಂಧ
April 6, 2024
ಮಹಾಮನೆಯ ಕಟ್ಟಿದ ಬಸವಣ್ಣ
ಮಹಾಮನೆಯ ಕಟ್ಟಿದ ಬಸವಣ್ಣ
December 8, 2021
Copyright © 2025 Bayalu