Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನೋಟದ ಕೂಟ…
Share:
Poems May 10, 2023 ಕೆ.ಆರ್ ಮಂಗಳಾ

ನೋಟದ ಕೂಟ…

ಕಾಣುವುದೇ ಒಂದು
ನೋಟ ಹೇಳುವುದೇ ಬೇರೊಂದು
ಉಸಿರ ಘಮಲಲಿ ಇಲ್ಲಾ
ಹಿಡಿದ ವಾಸನೆಯ ಕುರುಹು
ಕಿವಿಗೆ ಬಿದ್ದ ಶಬ್ದಕೂ
ಕೇಳಿಸಿಕೊಂಡುದಕೂ
ಕಾಣಲಿಲ್ಲ ಸಾಮ್ಯತೆ
ನಾಲಿಗೆ ರುಚಿಸಿದ್ದಕ್ಕೂ
ಸವಿಯ ಬಯಕೆಗೂ ಎಲ್ಲಿದೆ ಹೋಲಿಕೆ
ಮೈಗೆ ತಾಕಿದ ಸ್ಪರ್ಶಕ್ಕೂ
ಅದಿತ್ತ ಸಂದೇಶಕೂ ಎಷ್ಟೊಂದು ಅಂತರ!
ಕಾಣದು ಕಣ್ಣು, ಕೇಳದು ಕಿವಿ,
ಆಘ್ರಾಣಿಸದು ಮೂಗು, ಸ್ಪರ್ಶಿಸದು ತ್ವಚೆ,
ರುಚಿಸಲೊಲ್ಲದು ನಾಲಿಗೆ ಇದ್ದುದನು ಇದ್ದ ಹಾಗೆ…

ಮನದ ಕೋಣೆಯ ಹೊಕ್ಕು
ಬರುವ ಗ್ರಹಿಕೆಗಳಿಗೆಲ್ಲಾ
ಸಾವಿರ ಬಣ್ಣ, ಸಾವಿರ ಭಾವ
ಅರ್ಥಗಳು, ಅನರ್ಥಗಳು ಸಾಲು ಸಾಲು…
ನೋಟ ಕೂಟದ ಮಾಟ
ಭವದ ಬಂಧನದಾಟ
ಇಂದ್ರಿಯಗಳ ಬಲೆಯಲ್ಲಿ
ಬದುಕು ಬದುಕಲರಿಯದೆ
ಇರುವಿಕೆಯ ನಿಜವ ಕಾಣದೆ
ಹಳವಂಡದಲೇ ನಿಟ್ಟುಸಿರನಿಡುತ
ಸವೆಸಿ ಬಿಡುವುದು ಕಾಲ…

ಗುರು ತೋರ್ದ ಉಪಾಯದಲಿ
ಇಂದ್ರಿಯ ಸಂಚ ನಿಲಿಸಿ
ಕಂಗಳ ಕರುಳ ಕತ್ತರಿಸಿ
ಕಲ್ಪನೆಯ ಸಂಚಯ ಇಲ್ಲವಾಗಿಸಲು
ನೋಟದ ಹಂಗಿಲ್ಲ ಕೂಟದುಪಟಳವಿಲ್ಲ
ನಿರ್ಮಲದ ತಿಳಿಯೊಡಲು
ನಿಚ್ಚಳದ ಜಗದಲ್ಲಿ ಸ್ವಚ್ಛ ಮನವು.

Previous post ಈ  ದಾರಿ…
ಈ ದಾರಿ…
Next post ಒಂದಷ್ಟು ಸರಳ ಸಲಹೆಗಳು…
ಒಂದಷ್ಟು ಸರಳ ಸಲಹೆಗಳು…

Related Posts

ಶಾಂತಿ
Share:
Poems

ಶಾಂತಿ

April 11, 2025 Bayalu
ಪಯಣದ ಉಬ್ಬುತಗ್ಗು ಹಾದಿಯಲಿ, ಗಂಧದ ಕಣವಾಗು ಬಯಲಲಿ, ಸುಮದ ದಳವಾಗು ವನದಲಿ, ಓ ಮನವೇ, ಕಂದನ ಮುಗ್ದ ನಗುವಾಗು.| ೧ | ಹರುಷ ದುಗುಡಗಳ ಮೇಳದಲಿ, ಮಧುರ ನೆನಪುಗಳ ಹೊಳೆಯಾಗು,...
ನೀರು… ಬರಿ ನೀರೇ?
Share:
Poems

ನೀರು… ಬರಿ ನೀರೇ?

December 13, 2024 ಜ್ಯೋತಿಲಿಂಗಪ್ಪ
ಕತ್ತಲೆಂಬುದು ಕಣ್ಣ ಮುಂದೋ ಕಣ್ಣ ಹಿಂದೋ… ಜ್ಞಾನ ಎಂಬುದು ಅರಿವಲ್ಲ ಅರಿದರೆ ಅಜ್ಞಾನ… ಕತ್ತಲ ಒಳಗಣ ಬೆಳಕ ಕೊಯ್ಯುವ ಜಾಣ ಬಲ್ಲ ಜ್ಞಾನದ ಬೆಳಸ ಜ್ಞಾನವೇನು...

Comments 3

  1. ಜಿ.ಎಚ್.ಜ್ಯೋತಿಲಿಂಗಪ್ಪ ಶಿವನಕೆರೆ
    May 10, 2023 Reply

    ಅನುಭವ.. ಅನುಭಾವ ಗಳನ್ನು ಎಷ್ಟೊಂದು ಸರಳವಾಗಿ ಹೇಳಿರುವಿರಿ.

  2. ಕೆ ಎಸ್ ಮಲ್ಲೇಶ್
    May 13, 2023 Reply

    ನಿಮ್ಮ ಕವನ “ನೋಟ ಕೂಟದ ಮಾಟ” ವನ್ನು ನಾನು ಹೀಗೆ ಗ್ರಹಿಸಿದೆ.
    ವಾಸ್ತವಕ್ಕೂ ಇಂದ್ರಿಯಗಳ ಗ್ರಹಿಕೆಯಿಂದ ಉಂಟಾದ ಅನುಭವಕ್ಕೂ ನಡುವಿರುವ ವ್ಯತ್ಯಾಸವನ್ನು ಕಾವ್ಯದ ಸಂಕ್ಷಿಪ್ತತೆ ಹಾಗೂ ಸೊಗಡಿನ ಮೂಲಕ ಕವನ ತಿಳಿಸಿದೆ. ಫಳಾರೆಂದು ಮಿಂಚಿತು, ಧಡ್ ಎಂದು ಸದ್ದಾಯಿತು, ಅಮೃತದ ಸವಿಗೆ ಬಾಯಿ ಚಪ್ಪರಿಸಿತ್ತು, ಘಮ್ ಎಂದು ಹೂವಿನ ವಾಸನೆ ಮೂಗಿಗೆ ಬಡಿದಿತ್ತು. ಚಟೀರ್ ಎಂದು ಕೆನ್ನೆಗೆ ಏಟು ಬಿತ್ತು ಎನ್ನುವಾಗ ನಿಜಕ್ಕೂ ಆ ಶಬ್ದಗಳೇ ಉಂಟಾದವೆ? ಖಂಡಿತ ಇಲ್ಲ. ಅಲ್ಲಿ ಉಂಟಾದ ನಿಜ ಶಬ್ದಗಳನ್ನು ಗ್ರಹಿಸುವ/ ತಿಳಿಯುವ/ ಸಂವಹಿಸುವ ಕ್ಷಮತೆ, ಸಾಮರ್ಥ್ಯ ನಮ್ಮಲ್ಲಿ ಅಂತರ್ಗತವಾಗಿದ್ದರೂ ಅವುಗಳ ಇರುವಿಕೆಯನ್ನೂ ಗಮನಿಸದಷ್ಟರ ಮಟ್ಟಿಗೆ ನಾವು ಭ್ರಮೆಗಳಿಗೆ ಆತುಕೊಂಡಿದ್ದೇವೆ. ಈ ಕಾರಣದಿಂದಲೇ ಭ್ರಮೆಗಳ ಬಗೆಗಿರುವ ವಿಶ್ವಾಸ ವಾಸ್ತವಗಳ ಬಗೆಗಿಲ್ಲ. ಆ ಭ್ರಮೆಗಳ ಬಲೆಯಲ್ಲಿ ನಮ್ಮ ಭವವನ್ನು ಬಂಧನವಾಗಿಸಿಕೊಂಡಿದ್ದೇವೆ.

    ಎಲ್ಲ ಸಂಬಂಧಗಳ ನಡುವೆ ಇದ್ದೂ ಅವು ತೋರುವ ಭ್ರಮೆಗಳ ಅಂಧಕಾರದಲ್ಲಿ ಸಿಲುಕದೆ ವಾಸ್ತವದ ಬೆಳಕಿನಲ್ಲಿ ನಡೆವವನೇ ಗುರು. ಈ ಜಟಿಲ ಜಗತ್ತಿನೊಳಗೆ ನಮ್ಮ ಇಂದ್ರಿಯಗಳು ಭ್ರಮೆಗಳ ಬೆನ್ನೇರಿ ಅಂಡಲೆಯುವುದನ್ನು ತಪ್ಪಿಸಿ, ಎಂದಿನಿಂದಲೋ ಅಂಟಿರುವ ಧೂಳನ್ನು ಝಾಡಿಸಿ, ಸತ್ಯದ ದರ್ಶನ ಮಾಡಿಸುವ ಶಕ್ತಿ ಆ ಗುರುವಿಗಿದೆ.

  3. ಪೆರೂರು ಜಾರು, ಉಡುಪಿ
    May 13, 2023 Reply

    ಅರ್ಥಗಳ, ಅನರ್ಥಗಳ ತುಲನೆಯಲಿ
    ವ್ಯರ್ಥವಾಗುವ ಸಮಯ.
    ಅರ್ಥ ಹಿಂದೆ ಅರ್ಥಾಪೇಕ್ಷೆ ಮುಂದೆ
    ಸ್ವಾರ್ಥದಲಿ ಸಾಯುತಿದೆ ಕಂಡುಂಡುದೆಲ್ಲ

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಭಾವದಲ್ಲಿ ಭ್ರಮಿತರಾದವರ…
ಭಾವದಲ್ಲಿ ಭ್ರಮಿತರಾದವರ…
July 4, 2022
ಯೋಗ – ಶಿವಯೋಗ
ಯೋಗ – ಶಿವಯೋಗ
August 2, 2019
ವೈಜ್ಞಾನಿಕ ಧರ್ಮಿ ಬಸವಣ್ಣ – ಧಾರ್ಮಿಕ ವಿಜ್ಞಾನಿ ಐನ್‍ಸ್ಟೈನ್
ವೈಜ್ಞಾನಿಕ ಧರ್ಮಿ ಬಸವಣ್ಣ – ಧಾರ್ಮಿಕ ವಿಜ್ಞಾನಿ ಐನ್‍ಸ್ಟೈನ್
June 14, 2024
ಬೆಳಕಿನೆಡೆಗೆ…
ಬೆಳಕಿನೆಡೆಗೆ…
June 10, 2023
ಕಾದಿ ಗೆಲಿಸಯ್ಯ ಎನ್ನನು
ಕಾದಿ ಗೆಲಿಸಯ್ಯ ಎನ್ನನು
April 29, 2018
ನೋಟದ ಕೂಟ…
ನೋಟದ ಕೂಟ…
May 10, 2023
ಅರಿವಿಗೆ ಬಂದ ಆರು ಸ್ಥಲಗಳು
ಅರಿವಿಗೆ ಬಂದ ಆರು ಸ್ಥಲಗಳು
August 11, 2025
ದೇವರಲ್ಲಿ ಬೇಡುವ ವರ: ಲಿಂಗಭಕ್ತಿ-ಜಂಗಮಪ್ರೇಮ
ದೇವರಲ್ಲಿ ಬೇಡುವ ವರ: ಲಿಂಗಭಕ್ತಿ-ಜಂಗಮಪ್ರೇಮ
February 11, 2022
ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ
ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ
May 1, 2019
ನೆಲದ ಮರೆಯ ನಿಧಾನದಂತೆ…
ನೆಲದ ಮರೆಯ ನಿಧಾನದಂತೆ…
April 29, 2018
Copyright © 2026 Bayalu