Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನೀನು ನಾನಲ್ಲ…
Share:
Poems July 21, 2024 ಕೆ.ಆರ್ ಮಂಗಳಾ

ನೀನು ನಾನಲ್ಲ…

ಹಿಂದಿನ ಹೆಜ್ಜೆಗಳಲಿ
ತನ್ನನ್ನೇ ಅರಸುವ
ಮುಂದಿನ ದಿನಗಳಲಿ
ತನ್ನನ್ನೇ ಮೆರೆಯಿಸುವ
ಅಸ್ತಿತ್ವದ ಹುಡುಕಾಟವೇ ನೀನು ನಾನಲ್ಲ

ಎಂದೋ ಆದುದನು
ಜತನದಲಿ ಕೂಡಿಟ್ಟು
ಎಲ್ಲವನೂ ಎಲ್ಲರನೂ
ಆ ಅಳತೆಯಲೇ ತೂಗುವ
ತಿಕಲು ಬುದ್ಧಿಯೇ ನೀನು ನಾನಲ್ಲ

ಕಂಗಳಲಿ ಕರುಳಾಗಿ
ರಸದ ದಾಸನಾಗಿ
ವಾಸನೆಯ ಜಾಡಿಗಿಳಿದು
ಸ್ಪರ್ಶಸುಖಕೆ ಬೆನ್ನುಹತ್ತಿ
ಹಿತವಾದುದನೇ ಕೇಳಲೆಳೆಸುವ ನೀನು ನಾನಲ್ಲ

ನೆನಹಿನಲಿ ಅಲೆಯಾಗಿ
ನಡೆಯಲ್ಲಿ ಸೋಗಾಗಿ
ನುಡಿಯಲ್ಲಿ ಕಪಟವಾಗಿ
ಕನಸಿನಲಿ ಬತ್ತಲೆಯಾಗಿ
ಚಿತ್ತದಲಿ ಹೆಪ್ಪುಗಟ್ಟಿದ ನೀನು ನಾನಲ್ಲ

ಆಸೆಗಣ್ಣಾಗಿ ಸುಖಕೆ ಬಾಯಾರಿ
ಸಾಧಿಸುವ ಹುಚ್ಚಾಗಿ
ಕೀರ್ತಿಕಾಮನೆಗೆ ಕಳವಳಿಸಿ
ಗುಪ್ತ ಬಯಕೆಗಳ ದಂಡಾಗಿ
ಒಳಗೊಳಗೆ ಅಂಡಲೆವ ನೀನು ನಾನಲ್ಲ

ಬಿರುಮಾತಿನ ಬಾಣವಾಗಿ
ದೂರುಗಳ ಧಾರೆಯಾಗಿ
ದ್ವೇಷದ ಕೊಂಬಾಗಿ
ಕುದಿವ ಮನವಾಗಿ, ಮೊನಚು ಅಂಬಾಗಿ
ಇದಿರ ಇರಿಯಲು ಕಾಯುವ ನೀನು ನಾನಲ್ಲ

ಮಾತಿಗೆ ಮಾತಾಗಿ
ದ್ವೇಷಕ್ಕೆ ದ್ವೇಷವಾಗಿ
ಕಷ್ಟಗಳಿಗೆ ಕೊಚ್ಚಿಹೋಗಿ
ಬೇಕು ಬೇಡಗಳ ಆಟದಲಿ ಸಿಲುಕಿ
ಕೊರಗಿ ಕಣ್ಣೀರಾಗುವ ನೀನು ನಾನಲ್ಲ

ಮೆಚ್ಚುಗೆಗೆ ಮರುಳಾಗುವ
ಹೊಗಳಿಕೆಗೆ ಹಿರಿಹಿಗ್ಗುವ
ತೆಗಳಿಕೆಗೆ ಮುನಿಸೇಳುವ
ಬೇಕಾದವರ ಅಟ್ಟಕ್ಕೇರಿಸುತಾ
ಬೇಡಾದವರ ನೀಕರಿಸುವ ನೀನು ನಾನಲ್ಲ

ಅಸೂಯೆಯಲಿ ಬೇಯುವ
ಎಡಬಿಡಂಗಿಯಲಿ ತುಯ್ಯುವ
ಆಲಸಕೆ ಮೈಚಾಚುವ
ಜ್ಞಾನಕ್ಕೆ ಮರುಳಾಗುವ
ಚಟಗಳಿಗೆ ಬೆನ್ನು ಬೀಳುವ ನೀನು ನಾನಲ್ಲ.

ಈ ಬಗೆಬಗೆಯ ಹೊಂಡದಲಿ
ಮುಳಿಗೇಳುವ ಮಜದಲಿ
ನಿಜದ ನಾನು ನನಗೆ ಸಿಗಲೇ ಇಲ್ಲ
ಇದೆ-ಇಲ್ಲಗಳ ನಡುವೆ
ಅಲ್ಲದ್ದು ತೂರಿಕೊಂಡು
ಬದುಕು ಲಪಟಾಯಿಸಿದ್ದು ಅರಿವಾಗಲಿಲ್ಲ.

Previous post ಹುಡುಕಾಟ
ಹುಡುಕಾಟ
Next post ಸುಂದರ, ಸೂಕ್ಷ್ಮ ದ್ವೀಪ ಜಪಾನ್
ಸುಂದರ, ಸೂಕ್ಷ್ಮ ದ್ವೀಪ ಜಪಾನ್

Related Posts

ನಿನ್ನೆ-ಇಂದು
Share:
Poems

ನಿನ್ನೆ-ಇಂದು

May 10, 2022 ಕೆ.ಆರ್ ಮಂಗಳಾ
ನಿನ್ನೆ- ಬೆಳಗ ಕಾಣದ ಮಸುಕು ಚಿತ್ತದ ಜಾಡ್ಯ, ಮರೆವಿನ ಬಾಧೆ ಬೆಂಬಿಡದ ಕಾಮನೆಗಳಲಿ ಬಂಧಿಯಾಗಿದೆ ಜೀವ ಬಿಡಿಸು ಗುರುವೆ ಇದರ ಪ್ರವರ… ಇಂದು- ಬೆಳಕ ಕೊಡುತಿಹ ಆ ದೀಪ ಯಾವುದಕೆ...
ಬಿಟ್ಟು ಹೋದ ಬಸವಣ್ಣ
Share:
Poems

ಬಿಟ್ಟು ಹೋದ ಬಸವಣ್ಣ

April 29, 2018 ಡಾ. ಶಶಿಕಾಂತ ಪಟ್ಟಣ
ಬಿಟ್ಟು ಹೋದ ಬಸವಣ್ಣ ನೆತ್ತಿ ಸುಡುವ ಬಿಸಿಲಿನಲ್ಲಿ ತನ್ನ ನೆರಳ ತಾ ತುಳಿದುಕೊಂಡು. ಮನೆಗೆ ಹೋಗದೆ, ಮಡದಿ ಮಕ್ಕಳಿಗೆ ತಿಳಿಸದೆ, ಮತ್ತೆ ಮರಳಿ ಬಾರದ, ಹೊರಳಿ ತಿರುಗಿ ನೋಡದ, ಭಾರ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
August 2, 2019
ನಡುವೆ ಸುಳಿವಾತ್ಮ…
ನಡುವೆ ಸುಳಿವಾತ್ಮ…
April 6, 2024
ಮನಕ್ಕೆ ಮನ ಸಾಕ್ಷಿಯಾಗಿ…
ಮನಕ್ಕೆ ಮನ ಸಾಕ್ಷಿಯಾಗಿ…
October 2, 2018
ಯುವಮನಗಳೊಂದಿಗೆ ಸಂವಾದ
ಯುವಮನಗಳೊಂದಿಗೆ ಸಂವಾದ
September 13, 2025
ಮೊಟ್ಟೆ- ಗೂಡು
ಮೊಟ್ಟೆ- ಗೂಡು
April 11, 2025
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
April 6, 2023
ಭಾರ
ಭಾರ
October 6, 2020
ನೀರಬೊಂಬೆಗೆ ನಿರಾಳದ ಗೆಜ್ಜೆ
ನೀರಬೊಂಬೆಗೆ ನಿರಾಳದ ಗೆಜ್ಜೆ
April 29, 2018
ಗುರುವೆ ಸುಜ್ಞಾನವೇ…
ಗುರುವೆ ಸುಜ್ಞಾನವೇ…
September 7, 2021
ಬಸವೋತ್ತರ ಶರಣರ ಸ್ತ್ರೀಧೋರಣೆ
ಬಸವೋತ್ತರ ಶರಣರ ಸ್ತ್ರೀಧೋರಣೆ
April 29, 2018
Copyright © 2025 Bayalu