Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನೀನು ನಾನಲ್ಲ…
Share:
Poems July 21, 2024 ಕೆ.ಆರ್ ಮಂಗಳಾ

ನೀನು ನಾನಲ್ಲ…

ಹಿಂದಿನ ಹೆಜ್ಜೆಗಳಲಿ
ತನ್ನನ್ನೇ ಅರಸುವ
ಮುಂದಿನ ದಿನಗಳಲಿ
ತನ್ನನ್ನೇ ಮೆರೆಯಿಸುವ
ಅಸ್ತಿತ್ವದ ಹುಡುಕಾಟವೇ ನೀನು ನಾನಲ್ಲ

ಎಂದೋ ಆದುದನು
ಜತನದಲಿ ಕೂಡಿಟ್ಟು
ಎಲ್ಲವನೂ ಎಲ್ಲರನೂ
ಆ ಅಳತೆಯಲೇ ತೂಗುವ
ತಿಕಲು ಬುದ್ಧಿಯೇ ನೀನು ನಾನಲ್ಲ

ಕಂಗಳಲಿ ಕರುಳಾಗಿ
ರಸದ ದಾಸನಾಗಿ
ವಾಸನೆಯ ಜಾಡಿಗಿಳಿದು
ಸ್ಪರ್ಶಸುಖಕೆ ಬೆನ್ನುಹತ್ತಿ
ಹಿತವಾದುದನೇ ಕೇಳಲೆಳೆಸುವ ನೀನು ನಾನಲ್ಲ

ನೆನಹಿನಲಿ ಅಲೆಯಾಗಿ
ನಡೆಯಲ್ಲಿ ಸೋಗಾಗಿ
ನುಡಿಯಲ್ಲಿ ಕಪಟವಾಗಿ
ಕನಸಿನಲಿ ಬತ್ತಲೆಯಾಗಿ
ಚಿತ್ತದಲಿ ಹೆಪ್ಪುಗಟ್ಟಿದ ನೀನು ನಾನಲ್ಲ

ಆಸೆಗಣ್ಣಾಗಿ ಸುಖಕೆ ಬಾಯಾರಿ
ಸಾಧಿಸುವ ಹುಚ್ಚಾಗಿ
ಕೀರ್ತಿಕಾಮನೆಗೆ ಕಳವಳಿಸಿ
ಗುಪ್ತ ಬಯಕೆಗಳ ದಂಡಾಗಿ
ಒಳಗೊಳಗೆ ಅಂಡಲೆವ ನೀನು ನಾನಲ್ಲ

ಬಿರುಮಾತಿನ ಬಾಣವಾಗಿ
ದೂರುಗಳ ಧಾರೆಯಾಗಿ
ದ್ವೇಷದ ಕೊಂಬಾಗಿ
ಕುದಿವ ಮನವಾಗಿ, ಮೊನಚು ಅಂಬಾಗಿ
ಇದಿರ ಇರಿಯಲು ಕಾಯುವ ನೀನು ನಾನಲ್ಲ

ಮಾತಿಗೆ ಮಾತಾಗಿ
ದ್ವೇಷಕ್ಕೆ ದ್ವೇಷವಾಗಿ
ಕಷ್ಟಗಳಿಗೆ ಕೊಚ್ಚಿಹೋಗಿ
ಬೇಕು ಬೇಡಗಳ ಆಟದಲಿ ಸಿಲುಕಿ
ಕೊರಗಿ ಕಣ್ಣೀರಾಗುವ ನೀನು ನಾನಲ್ಲ

ಮೆಚ್ಚುಗೆಗೆ ಮರುಳಾಗುವ
ಹೊಗಳಿಕೆಗೆ ಹಿರಿಹಿಗ್ಗುವ
ತೆಗಳಿಕೆಗೆ ಮುನಿಸೇಳುವ
ಬೇಕಾದವರ ಅಟ್ಟಕ್ಕೇರಿಸುತಾ
ಬೇಡಾದವರ ನೀಕರಿಸುವ ನೀನು ನಾನಲ್ಲ

ಅಸೂಯೆಯಲಿ ಬೇಯುವ
ಎಡಬಿಡಂಗಿಯಲಿ ತುಯ್ಯುವ
ಆಲಸಕೆ ಮೈಚಾಚುವ
ಜ್ಞಾನಕ್ಕೆ ಮರುಳಾಗುವ
ಚಟಗಳಿಗೆ ಬೆನ್ನು ಬೀಳುವ ನೀನು ನಾನಲ್ಲ.

ಈ ಬಗೆಬಗೆಯ ಹೊಂಡದಲಿ
ಮುಳಿಗೇಳುವ ಮಜದಲಿ
ನಿಜದ ನಾನು ನನಗೆ ಸಿಗಲೇ ಇಲ್ಲ
ಇದೆ-ಇಲ್ಲಗಳ ನಡುವೆ
ಅಲ್ಲದ್ದು ತೂರಿಕೊಂಡು
ಬದುಕು ಲಪಟಾಯಿಸಿದ್ದು ಅರಿವಾಗಲಿಲ್ಲ.

Previous post ಹುಡುಕಾಟ
ಹುಡುಕಾಟ
Next post ಸುಂದರ, ಸೂಕ್ಷ್ಮ ದ್ವೀಪ ಜಪಾನ್
ಸುಂದರ, ಸೂಕ್ಷ್ಮ ದ್ವೀಪ ಜಪಾನ್

Related Posts

ಬೆಳಕು ಸಿಕ್ಕೀತೆ?
Share:
Poems

ಬೆಳಕು ಸಿಕ್ಕೀತೆ?

March 9, 2023 ಜ್ಯೋತಿಲಿಂಗಪ್ಪ
ಈಗ ನೀನು ಮರೆವು ನಾನು ಇರುವೆ ನಾ.. ಹೇಳ ಬಾರದು ಕೇಳ ಬಾರದು ಬಾಳೆ ಹಣ್ಣಾಗಿ ಈಗಷ್ಟೇ ಬಾಗಿದೆ ಏನೇ ಹೇಳಿ ಕಾಣುವುದೆಲ್ಲಾ ಸತ್ಯವೇ ಅಲ್ಲಾ ಏನೂ ಆಗಬಹುದು ಆಕಾಶ ಮೈದೆರೆದರೆ ಬಯಲು...
ವರದಿ ಕೊಡಬೇಕಿದೆ
Share:
Poems

ವರದಿ ಕೊಡಬೇಕಿದೆ

March 17, 2021 ಕೆ.ಆರ್ ಮಂಗಳಾ
ತನುವ ಭೇದಿಸಿ, ಮನವ ಶೋಧಿಸಿ ವರದಿ ಕೊಡಲು ಅಟ್ಟಿದ್ದಾನೆ ಗುರು ನನ್ನೊಳಗೆ ನನ್ನ… ಗೊಂದಲದ ಗೂಡೆಂದು ನೆಪ ಒಡ್ಡುವಂತಿಲ್ಲ ಮುಗ್ಗಲು ವಾಸನೆಯೆಂದು ಹಿಂದೆ ಬರುವಂತಿಲ್ಲ ಎಲ್ಲೋ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ವಚನ ಸಾಹಿತ್ಯದ ಸಂಕೀರ್ಣತೆ
ವಚನ ಸಾಹಿತ್ಯದ ಸಂಕೀರ್ಣತೆ
April 29, 2018
ಕಡಕೋಳ: ಮರೆತ ಹೆಜ್ಜೆಗಳ ಗುಲ್ದಾಸ್ಥ
ಕಡಕೋಳ: ಮರೆತ ಹೆಜ್ಜೆಗಳ ಗುಲ್ದಾಸ್ಥ
December 9, 2025
ತೊತ್ತುಗೆಲಸವ ಮಾಡು
ತೊತ್ತುಗೆಲಸವ ಮಾಡು
June 5, 2021
ಲಿಂಗಪೂಜೆ – ಜಂಗಮಸೇವೆ
ಲಿಂಗಪೂಜೆ – ಜಂಗಮಸೇವೆ
March 12, 2022
ಸ್ವಾಮಿಗಳು ಮತ್ತು ಭಕ್ತ ಹಿತಚಿಂತನೆ
ಸ್ವಾಮಿಗಳು ಮತ್ತು ಭಕ್ತ ಹಿತಚಿಂತನೆ
March 17, 2021
ಸಂತೆಯ ಸಂತ
ಸಂತೆಯ ಸಂತ
September 7, 2020
ಭಕ್ತನಾಗುವುದೆಂದರೆ…
ಭಕ್ತನಾಗುವುದೆಂದರೆ…
January 10, 2021
ಬೆಳಕು ಸಿಕ್ಕೀತೆ?
ಬೆಳಕು ಸಿಕ್ಕೀತೆ?
March 9, 2023
ಹಾದಿಯ ಹಣತೆ…
ಹಾದಿಯ ಹಣತೆ…
June 12, 2025
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
August 2, 2019
Copyright © 2026 Bayalu