Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ತುತ್ತೂರಿ…
Share:
Poems June 10, 2023 ಕೆ.ಆರ್ ಮಂಗಳಾ

ತುತ್ತೂರಿ…

ತುತ್ತೂರಿ ತುತ್ತೂರಿ
ಯಾಕೆ ಇಂತಹ ಪಿತೂರಿ?

ಯಾವುದೇ ಮಾತಲೂ ನಿನ್ನದೇ ರಾಗ
ಯಾವುದೇ ಭಾವಕೂ ನಿನ್ನದೇ ತಾಳ
ಬಾಯಿಬಿಟ್ಟರೂ ನಿನ್ನದೇ ಗಾನ
ಮೌನದಲಿದ್ದರೂ ನಿನ್ನದೇ ಧ್ಯಾನ
ಮಾತುಮಾತಿನಲೂ ನಿನ್ನದೇ ಹೊಳಪು
ಸ್ವಗತದ ಸರಿಗಮ ನಿನ್ನದೇ ಛಾಪು!

ತುತ್ತೂರಿ ತುತ್ತೂರಿ…

ಹಿಂದಕೆ ಹೋದರೂ ಕಾಲಿಗೆ ಸಿಗುವೆ
ಮುಂದಕೆ ಬಂದರೂ ಕಣ್ಮುಂದೇ ಇರುವೆ
ಕಡೆಗಣಿಸಿದರೂ ಕಾಯುತ ನಿಲ್ಲುವೆ
ತಳ್ಳುತಲಿದ್ದರೂ ನುಸುನುಸುಳಿ ಬರುವೆ
ಸರಿಸುತಲಿದ್ದರೂ ಹೇಗೋ ನುಗ್ಗುವೆ
ಎಲ್ಲಿದೆಯೊ ಅರಿಯೆ ನೀನಿಲ್ಲದ ತಾಣ

ತುತ್ತೂರಿ ತುತ್ತೂರಿ…

ನೆನಪಿನ ಕನವರಿಕೆಗಳೆಲ್ಲ ನೀನೇ
ನಾಳಿನ ಕನಸುಗಳೆಲ್ಲವೂ ನೀನೇ
ಭಾವಗಳುದ್ದಕೂ ಮೈಚಾಚಿರುವೆ
ತಲೆಯೊಳಗೆ ಅಡಗಿ ಕುಳಿತಿರುವೆ
ನಿನ್ನೆ-ನಾಳೆಗಳ ಜೀಕುವ ಮನದಲಿ
ನೀನಲ್ಲದೆ ಬೇರೇನಿದೆ ಅಲ್ಲಿ?

ತುತ್ತೂರಿ ತುತ್ತೂರಿ…

ಬಗೆಬಗೆಯ ರೂಪದೊಳಿರುವೆ
ಗುರುತಿಸದಂತೆ ವೇಷವ ತೊಡುವೆ
ಕೈಗೆ ಸಿಗದಂತೆ ಬಣ್ಣ ಬದಲಿಸುವೆ
ಸಮಯಕೆ ತಕ್ಕ ರಾಗ ಹಾಕುವೆ
ನೀನರಿಯದ ತಂತ್ರಗಳಿವೆಯೇ?
ನೀನರಿಯದ ಕಪಟಗಳಿವೆಯೇ?

ತುತ್ತೂರಿ ತುತ್ತೂರಿ…

ಮೈಯನಪ್ಪಿದ ಮಾಯೆಯು ನೀನು
ಬುದ್ಧಿಗೆ ಬಡಿದ ಭೂತವು ನೀನು
ಕಾಣದೆ ಅಂಟಿದ ಸೂತಕ ನೀನು
ನಾನೆ ನೀನೆಂದು ಸಾಧಿಸಿ ಗೆದ್ದೆI
ನಿನ್ನನ್ನೇ ನಾನೆಂದು ನಂಬಿದೆ
ನಿನ್ನದೆ ಗದ್ದುಗೆ ನಿನ್ನದೆ ಶಾಸನ

ತುತ್ತೂರಿ ತುತ್ತೂರಿ…

ಇಂತು
ಸ್ವಯದ ಮೇಲೆ ಸಾಗಿತ್ತು
ಪರದ ಮೆರವಣಿಗೆ
ಗುರು ಬರುವ ತನಕ ನಡೆದಿತ್ತು
ಸೆಂಗೋಲಿನ ಉರವಣಿಗೆ…

Previous post ಮೀನಿನ ಬಯಕೆ
ಮೀನಿನ ಬಯಕೆ
Next post ನಾ ಬರಬಾರದಿತ್ತು ಇಂಥ ಊರಿಗೆ…
ನಾ ಬರಬಾರದಿತ್ತು ಇಂಥ ಊರಿಗೆ…

Related Posts

ನಿಮ್ಮಿಂದಲೇ ನಾನು
Share:
Poems

ನಿಮ್ಮಿಂದಲೇ ನಾನು

February 11, 2022 ಜ್ಯೋತಿಲಿಂಗಪ್ಪ
ನಾನು ಹುಟ್ಟಿದ ಮೇಲೆ ಹುಟ್ಟಿತು ನನ್ನ ಇತಿಹಾಸ ನಾನು ಸತ್ತ ಮೇಲೆ ಹುಟ್ಟಿದ್ದು ನನ್ನ ಚರಿತ್ರೆ ಈ ನಡುವಿನ ಅಂತರ ನಾನು ಇದ್ದುದ್ದು ನನ್ನ ಸುಳ್ಳು ನಿಜ ನಾನು ಹೇಳಬಲ್ಲನೇ ನನ್ನ...
ಈ ಕ್ಷಣದ ಸತ್ಯ
Share:
Poems

ಈ ಕ್ಷಣದ ಸತ್ಯ

March 12, 2022 ಕೆ.ಆರ್ ಮಂಗಳಾ
ಧಗಧಗಿಸಿ ಮೇಲೇರುತಿಹ ಕೆನ್ನಾಲಿಗೆಯ ಈ ಬೆಂಕಿ ಅಡಗಿತ್ತು ಎಲ್ಲಿ? ಮರದ ಬೊಡ್ಡೆಯಲೋ? ಒಣಗಿದ ಸೌದೆಯಲೋ, ಮದ್ದಗೀರಿದ ಕಡ್ಡಿಯಲ್ಲೋ, ಊದುತಿಹ ಗಾಳಿಯಲ್ಲೋ? ಎಲ್ಲಿಂದ ಬಂತು ಕಣ್ಣ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅನುಭವ ಮಂಟಪದ ಸುತ್ತ (ಭಾಗ-1)
ಅನುಭವ ಮಂಟಪದ ಸುತ್ತ (ಭಾಗ-1)
January 15, 2026
ಮಿಂಚೊಂದು ಬಂತು ಹೀಗೆ…
ಮಿಂಚೊಂದು ಬಂತು ಹೀಗೆ…
August 6, 2022
ಕಾಯೋ ಗುರುವೇ…
ಕಾಯೋ ಗುರುವೇ…
February 11, 2022
ಅನಾದಿ ಕಾಲದ ಗಂಟು…
ಅನಾದಿ ಕಾಲದ ಗಂಟು…
November 10, 2022
ಮುಂದಿನ ಪೀಳಿಗೆಗೆ ಶರಣರ ಕಲ್ಪನೆ
ಮುಂದಿನ ಪೀಳಿಗೆಗೆ ಶರಣರ ಕಲ್ಪನೆ
March 6, 2024
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
April 29, 2018
ನಾನು ಯಾರು? ಎಂಬ ಆಳ ನಿರಾಳ (ಭಾಗ-4)
ನಾನು ಯಾರು? ಎಂಬ ಆಳ ನಿರಾಳ (ಭಾಗ-4)
June 17, 2020
ಧರ್ಮವನ್ನು ಒಡೆಯುವುದು – ಹಾಗೆಂದರೇನು?
ಧರ್ಮವನ್ನು ಒಡೆಯುವುದು – ಹಾಗೆಂದರೇನು?
October 2, 2018
ಅನುಪಮ ಯೋಗಿ ಅನಿಮಿಷ
ಅನುಪಮ ಯೋಗಿ ಅನಿಮಿಷ
May 6, 2020
ಭೃತ್ಯಾಚಾರ
ಭೃತ್ಯಾಚಾರ
June 5, 2021
Copyright © 2026 Bayalu