Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಅನಾದಿ ಕಾಲದ ಗಂಟು…
Share:
Poems November 10, 2022 ಕೆ.ಆರ್ ಮಂಗಳಾ

ಅನಾದಿ ಕಾಲದ ಗಂಟು…

ಹಗುರಾಗುತಿದೆ ಹೃದಯ
ಹೆಗಲ ಹೊರೆ ಇಳಿದು
ಭೂಮಿಗಿಂತಲೂ ವಜನ
ಹತ್ತಿಗಿಂತಲೂ ಹಗುರ
ಹೊರಲಾಗದ ಭಾರ ಹೊತ್ತಿದ್ದ
ಎದೆಗೆ, ಈಗ ಎಂಥದೋ ನಿರಾಳ…

ಕಣ್ಣುಬಿಟ್ಟಾಗಿನಿಂದ ಕಂಡದ್ದು
ಎಲ್ಲೆಲ್ಲೋ ಕೇಳಿದ್ದು
ಅವರಿವರು ಕಲಿಸಿದ್ದು
ಮೂಸಿದ್ದು ಹೊಸೆದದ್ದು
ಖಾಲಿಯಾಗದ ಗಂಟು
ಹೆಗಲೇರಿ ಕುಳಿತಿತ್ತು…

ಮುಟ್ಟಿದ್ದು ಮೂರಾಗಿ
ಇಟ್ಟಿದ್ದು ಆರಾಗಿ
ಬಗಲಚೀಲದಲಿದ್ದವು
ಚಿತ್ರವಿಭ್ರಮದ ಸರಕು
ಭವದ ಸಂತೆಯಲಿತ್ತು
ಅನಾದಿ ಕಾಲದ ಗಂಟು…

ಮಾಯೆಯೋ ಮರೆವೋ
ರೂಢಿಗೆ ಬಿದ್ದ ಚಾಳಿಯೋ
ಕಾರ್ಯ-ಕಾರಣದ ಚಕ್ರವೋ?
ಸ್ವಲಿಖಿತ ಹಣೆಬರಹವೋ
ಛಿದ್ರಚಿತ್ತದ ವ್ಯಾಧಿಯಲಿ
ನರಳುತಿದೆ ಲೋಕ…

ಬೆಳೆದಂತೆ ಭುಜವೇರುತ್ತಾ
ನರನಾಡಿಗಳ ಹಬ್ಬಿ
ನನ್ನ ನುಂಗಿ ಬಿಟ್ಟಿದ್ದು
ಈವರೆಗೂ ಅರಿವಾಗಲೇ ಇಲ್ಲ!!
ಗುರು ತೋರುವ ತನಕ
ಭಾರ ಹೊತ್ತುದೇ ತಿಳಿಯಲಿಲ್ಲ!!!

Previous post ಹಾಯ್ಕುಗಳು
ಹಾಯ್ಕುಗಳು
Next post ಶೂನ್ಯ ಸಂಪಾದನೆ ಎಂದರೇನು?
ಶೂನ್ಯ ಸಂಪಾದನೆ ಎಂದರೇನು?

Related Posts

ಗಾಳಿ ಬುರುಡೆ
Share:
Poems

ಗಾಳಿ ಬುರುಡೆ

June 17, 2020 ಪದ್ಮಾಲಯ ನಾಗರಾಜ್
ನಂಬಿ ಕೆಡಬ್ಯಾಡೋ/ ಈ ಗಾಳಿ ಬುರುಡೆಯ ನೆಚ್ಚಿ ಕೆಡಬ್ಯಾಡೋ/ ನೆಚ್ಚಿ ಸೋತ್ಹೋಗಬೇಡಾ ಅರಗಿಣಿಯ ಮಾತ ಕೇಳಿ/ ತರಗೆಲೆಯಂತೆ ನೀನು ಗಾಳಿಗೆ ತೂರ್ಹೋಗಬೇಡಾ //ನಂಬಿ// ಚಿತ್ರಾ...
ಕಣ್ಣ ದೀಪ
Share:
Poems

ಕಣ್ಣ ದೀಪ

September 7, 2021 ಜ್ಯೋತಿಲಿಂಗಪ್ಪ
ನನ್ನ ಮನೆಯ ಅಂಗಳದಲ್ಲಿ ಒಬ್ಬ ಬುದ್ಧನಿದ್ದಾನೆ ಶೋ ಕೇಸಿನಲ್ಲಿ ಒಬ್ಬ ಬುದ್ಧನಿದ್ದಾನೆ ಗೋಡೆಯ ಮೇಲೆ ಒಬ್ಬ ಬುದ್ಧನಿದ್ದಾನೆ ಎಲ್ಲೆಲ್ಲೂ ಬುದ್ಧ ಬುದ್ಧ ಒಳಗೆ ಖಾಲಿ ಗೋಡೆಯ ಹಿಂದೆ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅಗ್ನಿಯ ಸುಡುವಲ್ಲಿ…
ಅಗ್ನಿಯ ಸುಡುವಲ್ಲಿ…
April 29, 2018
ಗುರುವೇ ತೆತ್ತಿಗನಾದ
ಗುರುವೇ ತೆತ್ತಿಗನಾದ
April 29, 2018
ಶರಣರು ಕಂಡ ಸಹಜಧರ್ಮ
ಶರಣರು ಕಂಡ ಸಹಜಧರ್ಮ
April 29, 2018
ಮಣ್ಣು ಮೆಟ್ಟಿದ ದಾರಿ
ಮಣ್ಣು ಮೆಟ್ಟಿದ ದಾರಿ
October 5, 2021
ಸತ್ಯದ ಬೆನ್ನು ಹತ್ತಿ…
ಸತ್ಯದ ಬೆನ್ನು ಹತ್ತಿ…
April 29, 2018
ಅಪ್ಪನಿಲ್ಲದ ಮನೆ
ಅಪ್ಪನಿಲ್ಲದ ಮನೆ
January 10, 2021
ಶರಣನಾಗುವ ಪರಿ
ಶರಣನಾಗುವ ಪರಿ
June 3, 2019
ಜಾತಿಗಳು ಬೆರೆಯದೆ ಸುಖವಿಲ್ಲ
ಜಾತಿಗಳು ಬೆರೆಯದೆ ಸುಖವಿಲ್ಲ
September 13, 2025
ಭಾಷೆ ಮತ್ತು ಚಿಂತನೆ
ಭಾಷೆ ಮತ್ತು ಚಿಂತನೆ
September 14, 2024
ನಾನು ಯಾರು? ಎಂಬ ಆಳ-ನಿರಾಳ
ನಾನು ಯಾರು? ಎಂಬ ಆಳ-ನಿರಾಳ
March 6, 2020
Copyright © 2025 Bayalu