Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನಡೆಯ ಎಡೆ…
Share:
Poems April 5, 2026 ಕೆ.ಆರ್ ಮಂಗಳಾ

ನಡೆಯ ಎಡೆ…

ಅತ್ತಿದ್ದು ನಕ್ಕಿದ್ದು
ಒಳಗೊಳಗೇ ಬಿಕ್ಕಿದ್ದು
ಮತ್ತೆ ಜಂಜಡಕೆ ಬೀಳಲಾರೆ ಇನ್ನು
ಎಲ್ಲ ಕಲಿಸುವ ಬದುಕು
ಎಲ್ಲ ತಿಳಿಸುವ ಗುರುವು
ದಾಟಬಲ್ಲೆನು ಈಜಿ ನೂರು ಕಡಲು

ಸುಖ-ದುಃಖ ಬರಹವನು
ಬರೆವ ಕೈಗೆ ನಮಿಸಿ
ತಪ್ಪುಸರಿಗಳ ಲೆಕ್ಕ ಒಪ್ಪಿಸಿರುವೆ
ಸಂಚಯದ ಸಂಚಿಯನು
ಕೊಡವಿ ಖಾಲಿ ಮಾಡಿ
ಅಳಿದುಳಿದುದೆಲ್ಲಾ ಹುರಿದುಬಿಡುವೆ

ಹಿಂದಣದ ಹೊರೆಯಿಲ್ಲ
ಮುಂದಣದ ಹಂಗಿಲ್ಲ
ಸಮತೆಯ ಸಿರಿಯು ಕಂಗೊಳಿಸಲಿ
ಹೊಸ ಹಸಿರು ಹೊಸ ಉಸಿರು
ಹೊಸ ಕಂಪು ಹೊಸ ತಂಪು
ನಡೆಯ ಎಡೆಯಿರಲಿ ನಿತ್ಯಸತ್ಯತೆಗೆ

ಚಳಿಗಾಳಿ ಮಳೆ ಬಿಸಿಲು
ನರನರಗಳೊಳಗಿಳಿದು
ತೂಗಿ ತೊನೆದಿಹುದು ಜೀವತಾನ
ಹಗಲಿರುಳ ತೆರೆಗಳಲಿ
ಋತುಮಾಸ ಕವಲಿನಲಿ
ಹೊರಳಿ ಸಾಗಿಹುದು ಬಾಳಯಾನ

ಆ ಮುಗಿಲು ಬಿದ್ದಾಗ
ಹಸುರೆದ್ದು ಬಂದಾಗ
ಸುಂದರವು ಸೃಷ್ಟಿಯೆಲ್ಲಾ
ಅಂತರವು ಅಳಿದಾಗ
ನಾ ಕರಗಿ ಹೋದಾಗ
ಅಮೃತವು ಮರ್ತ್ಯವೆಲ್ಲಾ…

Previous post ನನ್ನನ್ನು ಕ್ಷಮಿಸು
ನನ್ನನ್ನು ಕ್ಷಮಿಸು

Related Posts

ಅರಿವಿನ ಬಾಗಿಲು…
Share:
Poems

ಅರಿವಿನ ಬಾಗಿಲು…

October 13, 2022 ಕೆ.ಆರ್ ಮಂಗಳಾ
ಹುಚ್ಚು ಮನಸಿನ ಕುಣಿತ ದಿಕ್ಕುದಿಕ್ಕಿಗೂ ಸೆಳೆತ ಅಡಿಗಡಿಗು ಎಡತಾಕುವ ವಿಷಯಗಳ ಡೈನಮೈಟು ಕಾಲು ಎಚ್ಚರ ತಪ್ಪದಂತೆ ಜಾಣ ನಡಿಗೆಯ ಹೇಳಿಕೊಡುತಾನೆ ಹುಟ್ಟು-ಸಾವಿನ ಚಕ್ರದ ಮರ್ಮ...
ಬಯಲಾಟ
Share:
Poems

ಬಯಲಾಟ

March 17, 2021 ಜ್ಯೋತಿಲಿಂಗಪ್ಪ
ಆ ಮನೆ ಬಿಟ್ಟು ಬಂದಿರುವೆ ಎಂಬುದು ಈಗಲೂ ಇದೆ ಆ ಮನೆ ಇದೆಯೇ ಎಂಬುದು ಈಗಲೂ ಇದೆ ನಿಜ ಸುಳ್ಳು ಎಂಬುದು ನನ್ನ ಹಿತ ಆ ಮನೆ ಸಮುದ್ರ ದಾಟಲು ಹಾರುವ ಚಿಟ್ಟೆ ಹುಡುಕುತಿರುವೆ ಇನ್ನೂ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಇದ್ದಷ್ಟೇ…
ಇದ್ದಷ್ಟೇ…
January 10, 2021
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-3
ವಿದ್ವಾಂಸರ ದೃಷ್ಟಿಯಲ್ಲಿ ಬಸವಣ್ಣ-3
December 6, 2020
ಪ್ರಮಾಣಗಳಿಂದ ಅಪ್ರಮಾಣದೆಡೆ…
ಪ್ರಮಾಣಗಳಿಂದ ಅಪ್ರಮಾಣದೆಡೆ…
July 10, 2025
ಮಿಥ್ಯಾದೃಷ್ಟಿರಹಿತ ಬಯಲ ದರ್ಶನ
ಮಿಥ್ಯಾದೃಷ್ಟಿರಹಿತ ಬಯಲ ದರ್ಶನ
May 6, 2021
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
April 29, 2018
ಲಿಂಗಾಯತ ಮಠಗಳು ಮತ್ತು ಬಸವತತ್ವ
ಲಿಂಗಾಯತ ಮಠಗಳು ಮತ್ತು ಬಸವತತ್ವ
July 21, 2024
ವಚನಾಮೃತಂ: ಪುಸ್ತಕ ವಿಮರ್ಶೆ
ವಚನಾಮೃತಂ: ಪುಸ್ತಕ ವಿಮರ್ಶೆ
February 6, 2025
ಕಲಿಸು ಗುರುವೆ…
ಕಲಿಸು ಗುರುವೆ…
July 10, 2025
ಒಳಗಣ ಮರ
ಒಳಗಣ ಮರ
March 12, 2022
ಪ್ರೇಮ ಮತ್ತು ದ್ವೇಷ
ಪ್ರೇಮ ಮತ್ತು ದ್ವೇಷ
July 10, 2025
Copyright © 2026 Bayalu