Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಗುರುವೆ ಸುಜ್ಞಾನವೇ…
Share:
Poems September 7, 2021 ಕೆ.ಆರ್ ಮಂಗಳಾ

ಗುರುವೆ ಸುಜ್ಞಾನವೇ…

ಇದೆ ಎಂದೊಲಿದದ್ದು ಇಲ್ಲ
ಹಾಗೇನೂ ಅಲ್ಲ
ಎಂದು ಬಲವಾಗಿ ನಂಬಿದ್ದೂ
ಇಲ್ಲವೇ ಇಲ್ಲ…

ಹಂಬಲಿಸಿ ಹಿಡಿದಿದ್ದೆ
ಹಟ ತೊಟ್ಟು ಪಡೆದಿದ್ದೆ
ಹಬ್ಬಿಸಿಕೊಂಡಿದ್ದೇ
ಕುಸುರಿ ಭಾವಗಳ,
ಮನದ ಕವಾಟಗಳಲ್ಲಿ
ಮಧುರ ಮಾತುಗಳಲ್ಲಿ…

ಬಣ್ಣಗೆಟ್ಟವು
ದಿಕ್ಕು ಬದಲಿಸಿದವು
ನಾನೆಂಬ ದಿಬ್ಬವನು
ಒದ್ದು ಓಡಿದವು
ಕಾಲಸರಿದಂತೆಲ್ಲ
ಎಲ್ಲೋ ಮಾಯವಾದವು.
ಆದರೂ…
ಹಳಹಳಿಸಿದ ಮನ
ಮರೆವ ಕೊಡವಲಿಲ್ಲ
ಕಣ್ಣಲ್ಲಿ ಕಣ್ಣಿಟ್ಟು
ನಿಜವ ಹುಡುಕಲಿಲ್ಲ
ನಿಶೆ ಇಳಿದ ಮೇಲಾದರೂ
ಹಗಲಾಗ ಬೇಕಿತ್ತು…

ಪೊರೆಗಟ್ಟಿದ ಕಣ್ಣಲಿ
ಬೆಳಕಿನೆಳೆಗಳು
ತೂರುವುದು ಉಂಟೆ?
ಕಂಬಳಿ ಹೊದ್ದ ಎದೆಗೆ
ತಿಳಿಗಾಳಿಯಲೆ
ನುಸುಳ ಬಲ್ಲುದೆ?
ಉಸಿರಿಗೆ ತಡೆಯಾದ
ಹೊದಿಕೆಯ ಸರಿಸಲು
ಗಮನಕೆ ಅಡ್ಡಿಯಾದ
ಪೊರೆಯ ಕತ್ತರಿಸಲು
ನಿಂತ ಕಾಲುಗಳಿಗೆ
ನಡೆಯ ತೋರಿಸಲು
ಓ ಗುರುವೇ…
ನೀನೇ ಬರಬೇಕಾಯಿತು
ಕೈಹಿಡಿದು
ಭಾವ ಕಂದಕವನು
ದಾಟುವುದ ಕಲಿಸಲು.

Previous post ಕಣ್ಣ ದೀಪ
ಕಣ್ಣ ದೀಪ
Next post ವಚನಗಳ ಮಹತ್ವ
ವಚನಗಳ ಮಹತ್ವ

Related Posts

ಕಾಯೋ ಗುರುವೇ…
Share:
Poems

ಕಾಯೋ ಗುರುವೇ…

February 11, 2022 ಕೆ.ಆರ್ ಮಂಗಳಾ
ನಾನು: ಗಾಳಿಯೇ ಆಡದ, ಕತ್ತಲ ಕೋಣ್ಯಾಗ ಕಳೆದು ಹೋಗಿನಿ ನನ ಗುರುವೆ ಚಿಲಕವ ಸರಿಸಿ, ಬಾಗಿಲು ತೆಗೆದು ಬೆಳಕಾ ತೋರಿಸು ನನ ಗುರುವೆ ತಡವುತ ಎಡವುತ, ಅಲ್ಲಲ್ಲೇ ಸುತ್ತುತ ಹೈರಾಣಾಗಿಹೆ...
ನಾನುವಿನ ಉಪಟಳ
Share:
Poems

ನಾನುವಿನ ಉಪಟಳ

December 13, 2024 ಕೆ.ಆರ್ ಮಂಗಳಾ
ಕಣ್ಣಪಾಪೆಯಲಿ ನಾನವಿತು ಕುಳಿತಿರಲು ಕಾಣುವ ನೋಟಗಳಿಗೆ ಲೆಕ್ಕ ಹಾಕುವರಾರು? ತಲೆಯೊಳಗೆ ನಾನೆಂಬುದು ತತ್ತಿ ಇಟ್ಟಿರುವಾಗ ಬರುವ ಯೋಚನೆಗಳನು ಎಣಿಸಿದವರಾರು? ಮನದ ಮೂಲೆಮೂಲೆಯಲು...

Comments 3

  1. Chandrika
    Sep 11, 2021 Reply

    ಭಾವದ ಭವವನ್ನು ದಾಟಲು ಗುರುವಿನ ಕೈಹಿಡಿದು ನಡೆವ ಬಗೆ ಸುಂದರವಾಗಿ ಅಭಿವ್ಯಕ್ತವಾಗಿದೆ.

  2. ಕೆ. ಎಸ್. ಮಲ್ಲೇಶ್
    Oct 8, 2021 Reply

    ಸರಳ ಹಾಗೂ ನೇರ ಪದಗಳಲ್ಲಿ ಅನುಪಮ ರೂಪಕಗಳ ಮೂಲಕ ಗುರುವಿನ ಮಹತ್ವವನ್ನು ಮನಮುಟ್ಟುವಂತೆ ತಿಳಿಸುವ ಕವನ. ಐಹಿಕ ಬದುಕಿನ ತೋರಿಕೆಯ ಆವರಣದೊಳಗೆ ಸಿಲುಕಿದ ಜೀವಕ್ಕೆ ಕೊನೆಗೂ ಗುರು ನಿಲುಕಿದ್ದು -ಇದೇ ಭವಕ್ಕೆ ಅನುಭಾವದ ಸಿಂಚನ

  3. SHARAN swami
    Oct 14, 2021 Reply

    ಗುರು ಶಿಷ್ಯರ ಸಂಬಂಧದ ಮಹತ್ವ ಮಧುರ ರೀತಿಯಲ್ಲಿ ಭಾವಗಳ ಮೂಲಕ ವ್ಯಕ್ತಪಡಿಸಿದ್ಧಿರಿ. ಶರಣು ಶರಣಾರ್ಥಿ

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಧರ್ಮೋ ರಕ್ಷತಿ ರಕ್ಷಿತಃ
ಧರ್ಮೋ ರಕ್ಷತಿ ರಕ್ಷಿತಃ
January 7, 2019
ಪ್ರಮಾಣಗಳಿಂದ ಅಪ್ರಮಾಣದೆಡೆ…
ಪ್ರಮಾಣಗಳಿಂದ ಅಪ್ರಮಾಣದೆಡೆ…
July 10, 2025
ಶರಣ- ಎಂದರೆ…
ಶರಣ- ಎಂದರೆ…
March 6, 2020
ಸರಳ ಸ್ವಭಾವದ ಸಮಯಾಚಾರದ ಮಲ್ಲಿಕಾರ್ಜುನ
ಸರಳ ಸ್ವಭಾವದ ಸಮಯಾಚಾರದ ಮಲ್ಲಿಕಾರ್ಜುನ
April 29, 2018
ಕುರುಹೇ ಬಯಲು
ಕುರುಹೇ ಬಯಲು
February 16, 2026
ಲಿಂಗಾಯತರ ಅವೈದಿಕ ನಂಬಿಕೆಗಳು
ಲಿಂಗಾಯತರ ಅವೈದಿಕ ನಂಬಿಕೆಗಳು
April 29, 2018
ಕಾಲನೆಂಬ ಜಾಲಗಾರ…
ಕಾಲನೆಂಬ ಜಾಲಗಾರ…
January 7, 2019
ಮುಕ್ತಾಯಕ್ಕ- ಅಲ್ಲಮರ ಸಂವಾದ
ಮುಕ್ತಾಯಕ್ಕ- ಅಲ್ಲಮರ ಸಂವಾದ
October 13, 2022
ಅಲ್ಲೀ ಸಾಹೇಬರು
ಅಲ್ಲೀ ಸಾಹೇಬರು
February 16, 2026
ನಡುವೆ ಸುಳಿವಾತ್ಮ…
ನಡುವೆ ಸುಳಿವಾತ್ಮ…
April 6, 2024
Copyright © 2026 Bayalu