Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಒಂದಾಗಿ ನಿಂತೆ…
Share:
Poems April 6, 2024 ಕೆ.ಆರ್ ಮಂಗಳಾ

ಒಂದಾಗಿ ನಿಂತೆ…

ಆಗೀಗ ನೀರು ಕಾಣುವ
ಮಧುಮಾಲತಿ ಬಳ್ಳಿಯಲಿ
ತೊನೆವ ಕೆಂಪು-ಬಿಳಿ ಹೂಗಳು
ಪಕ್ಕದಲ್ಲೇ ನಸುಗಂಪಿನ
ದುಂಡು ಮಲ್ಲಿಗೆಯ ದಂಡು
ದೇಟಿನ ತುಂಬ ಬಣ್ಣಬಣ್ಣದ ದಾಸವಾಳ,
ಅರೆಬೆತ್ತಲಾದ ಸಂಪಿಗೆ ಮರದಲೂ
ಉಳಿದೆಲೆಗಳ ನಡುವೆ
ನಗುವ ಹಳದಿ ಘಮಲು,
ಎಲೆಯೊಂದಿಗೆ ಹೂಗಳನ್ನೂ
ಉದುರಿಸಿಕೊಳ್ಳುತಿರುವ ಚೆರ್ರಿ ಬ್ಲಾಸಂ
ಹಸಿರುಗಿಣಿಗಳು, ಚಿಟಗುಬ್ಬಿ, ಚಿಟ್ಟೆಗಳು
ನೀರ ಬಾನಿಯಲಿ
ರೆಕ್ಕೆ ಬಿಚ್ಚಿ ಮುಳಿಗೇಳುವ
ಕಾಗೆ, ಗುಬ್ಬಿ, ಪಾರಿವಾಳಗಳು…

ಎಲ್ಲಿಂದಲೋ ಹಾರಿ ಬಂದ
ಜೋಡಿ ಬುಲ್ಬುಲ್ ಹಕ್ಕಿಗಳು
ಇಳಿಬಿದ್ದ ಪೊದೆಯ ಮರೆಯಲಿದ್ದ
ಹಳೇ ಗೂಡ ಪತ್ತೆಹಚ್ಚಿ
ಕಡ್ಡಿ ಸೇರಿಸಿ, ಎಲೆ ಹೆಣೆದು,
ಭದ್ರಗೊಳಿಸಿ, ಒಪ್ಪವಾಗಿಸಿ
ಮೊಟ್ಟೆ ಇಟ್ಟು ಕಾವು ಕೊಡುತಿದ್ದರೆ
ಎಟುಕದ ಗೂಡಿಗೆ ಗೋಣೆತ್ತಿ
ಮಣ್ಣಿಗೆ ಮೈಯಾನಿಸಿ ಮಲಗಿದ
ತುಂಟ ಬೆಕ್ಕು…
ದೂರದಿಂದ ತೇಲಿ ಬರುತಿರುವ
ಕೋಗಿಲೆಯ ಕುಹೂ…ಕುಹೂ…

ಹೊರಗೆ ಸುರಿವ ಬಿಸಿಲು
ಒಳಗೆ ಕುದಿವ ಧಗೆ
ವಸಂತಕೆ ನುಗ್ಗಿದ
ಗ್ರೀಷ್ಮದುರಿಗೆ ಕಾದು
ಹಂಚಾಗಿರುವ ನೆಲಕೊರಗಿದ
ಹಣ್ಣೆಲೆಗಳ-ಹೂಗಳ ಹಾಸುಗೆ
ಭಾಷೆಯೇ ಬೇಕಿಲ್ಲದ
ಮಾತು ಮುಟ್ಟದ
ಅಕ್ಷರಗಳ ಹಂಗಿಲ್ಲದ
ಋತುಗಳ ಗತಿಗೆ
ಜೀವದ ಚಲನೆಗೆ
ನಡೆ ಇದೆ, ಶಬ್ದವೆಲ್ಲಿದೆ?

ನಿಸರ್ಗದ ನಡೆಯ ದನಿಗೆ
ಕಿವಿಯಾಗಿ, ಕಣ್ಣಾಗಿ…
ಒಂದಾಗಿ ನಿಂತೆ ಈ ಗಳಿಗೆ!

Previous post ಕೇಳಿಸಿತೇ?
ಕೇಳಿಸಿತೇ?
Next post ಲಿಂಗಾಯತಧರ್ಮ ಸಂಸ್ಥಾಪಕರು -2
ಲಿಂಗಾಯತಧರ್ಮ ಸಂಸ್ಥಾಪಕರು -2

Related Posts

ಹೀಗೊಂದು ಸಂವಾದ…
Share:
Poems

ಹೀಗೊಂದು ಸಂವಾದ…

April 6, 2023 ಕೆ.ಆರ್ ಮಂಗಳಾ
ಶಿಷ್ಯೆ: ಮರೆವಿನ ಹಿಡಿತಕೆ ಮನ ಸಿಲುಕಿಹುದು ಬಯಕೆಯ ಸೆಲೆಗೆ ಮರುಳಾಗಿಹುದು ಕಾಣುವೆನೆಂತು ಜೀವದ ಸೊಬಗ ಅರಿಯುವುದೆಂತು ಪ್ರಾಣದ ಹೊಲಬ ಗೊತ್ತಿಲ್ಲದ ನಡಿಗೆ ಕತ್ತಲ ದಾರಿ...
ಆಗು ಕನ್ನಡಿಯಂತೆ…
Share:
Poems

ಆಗು ಕನ್ನಡಿಯಂತೆ…

September 13, 2025 ಕೆ.ಆರ್ ಮಂಗಳಾ
ಗ್ರಹಿಸು ಸಂಗ್ರಹಿಸಬೇಡ ಏನನ್ನೂ… ಕಂಡದ್ದು ಕೇಳಿದ್ದು ಮೂಸಿದ್ದು ಮುಟ್ಟಿದ್ದು ಅನುಭವಿಸಿದ್ದು ಓದಿದ್ದು ಕೂಡ… ತೂರಿಹೋಗಲಿ ಅವಿತ ವಾಸನೆಗಳೆಲ್ಲಾ ಮುಗಿಬಿದ್ದು ಬರುವ...

Comments 2

  1. Chinmayi
    Apr 7, 2024 Reply

    ಸರಳ, ಸುಂದರ

  2. ಶೋಭಾದೇವಿ ಅಮರಶೆಟ್ಟಿ, ಧಾರವಾಡ
    Apr 16, 2024 Reply

    ಯುಗಾದಿ ಸಮಯದಲ್ಲಿ ಎಲ್ಲ ಗಿಡ ಮರಗಳು ಚಿಗುರಿದಾಗ ವಿವಿಧ ಬಣ್ಣಗಳ ಬೇರೆ ಬೇರೆ ಹಲವು ಪರಿಮಳಗಳಿಂದ ತುಂಬಿದ ನಿಸರ್ಗದ ಹೊಸತನವು ‘ಒಂದಾಗಿ ನಿಂತೆ’ ಕವನದಲ್ಲಿ ತುಂಬಾ ಸೊಗಸಾಗಿ ಬಂದಿದೆ👌👌👍👍🙂

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಬೆಳಕಲಿ ದೀಪ
ಬೆಳಕಲಿ ದೀಪ
December 8, 2021
ವರದಿ ಕೊಡಬೇಕಿದೆ
ವರದಿ ಕೊಡಬೇಕಿದೆ
March 17, 2021
ಗುರು ತತ್ತ್ವವೇ ಅಥವಾ ವ್ಯಕ್ತಿಯೆ?
ಗುರು ತತ್ತ್ವವೇ ಅಥವಾ ವ್ಯಕ್ತಿಯೆ?
July 1, 2018
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
December 3, 2018
ಮರೆತೆ…
ಮರೆತೆ…
July 4, 2022
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
July 5, 2019
ಸವೇಜನಾಃ ಸುಖಿನೋ ಭವಂತು
ಸವೇಜನಾಃ ಸುಖಿನೋ ಭವಂತು
August 2, 2020
ಲಿಂಗಾಯತ ಧರ್ಮ ಸಂಸ್ಥಾಪಕರು
ಲಿಂಗಾಯತ ಧರ್ಮ ಸಂಸ್ಥಾಪಕರು
April 6, 2024
ಮುಖ- ಮುಖವಾಡ
ಮುಖ- ಮುಖವಾಡ
February 7, 2021
ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ
ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ
March 9, 2023
Copyright © 2025 Bayalu