Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಒಂದಾಗಿ ನಿಂತೆ…
Share:
Poems April 6, 2024 ಕೆ.ಆರ್ ಮಂಗಳಾ

ಒಂದಾಗಿ ನಿಂತೆ…

ಆಗೀಗ ನೀರು ಕಾಣುವ
ಮಧುಮಾಲತಿ ಬಳ್ಳಿಯಲಿ
ತೊನೆವ ಕೆಂಪು-ಬಿಳಿ ಹೂಗಳು
ಪಕ್ಕದಲ್ಲೇ ನಸುಗಂಪಿನ
ದುಂಡು ಮಲ್ಲಿಗೆಯ ದಂಡು
ದೇಟಿನ ತುಂಬ ಬಣ್ಣಬಣ್ಣದ ದಾಸವಾಳ,
ಅರೆಬೆತ್ತಲಾದ ಸಂಪಿಗೆ ಮರದಲೂ
ಉಳಿದೆಲೆಗಳ ನಡುವೆ
ನಗುವ ಹಳದಿ ಘಮಲು,
ಎಲೆಯೊಂದಿಗೆ ಹೂಗಳನ್ನೂ
ಉದುರಿಸಿಕೊಳ್ಳುತಿರುವ ಚೆರ್ರಿ ಬ್ಲಾಸಂ
ಹಸಿರುಗಿಣಿಗಳು, ಚಿಟಗುಬ್ಬಿ, ಚಿಟ್ಟೆಗಳು
ನೀರ ಬಾನಿಯಲಿ
ರೆಕ್ಕೆ ಬಿಚ್ಚಿ ಮುಳಿಗೇಳುವ
ಕಾಗೆ, ಗುಬ್ಬಿ, ಪಾರಿವಾಳಗಳು…

ಎಲ್ಲಿಂದಲೋ ಹಾರಿ ಬಂದ
ಜೋಡಿ ಬುಲ್ಬುಲ್ ಹಕ್ಕಿಗಳು
ಇಳಿಬಿದ್ದ ಪೊದೆಯ ಮರೆಯಲಿದ್ದ
ಹಳೇ ಗೂಡ ಪತ್ತೆಹಚ್ಚಿ
ಕಡ್ಡಿ ಸೇರಿಸಿ, ಎಲೆ ಹೆಣೆದು,
ಭದ್ರಗೊಳಿಸಿ, ಒಪ್ಪವಾಗಿಸಿ
ಮೊಟ್ಟೆ ಇಟ್ಟು ಕಾವು ಕೊಡುತಿದ್ದರೆ
ಎಟುಕದ ಗೂಡಿಗೆ ಗೋಣೆತ್ತಿ
ಮಣ್ಣಿಗೆ ಮೈಯಾನಿಸಿ ಮಲಗಿದ
ತುಂಟ ಬೆಕ್ಕು…
ದೂರದಿಂದ ತೇಲಿ ಬರುತಿರುವ
ಕೋಗಿಲೆಯ ಕುಹೂ…ಕುಹೂ…

ಹೊರಗೆ ಸುರಿವ ಬಿಸಿಲು
ಒಳಗೆ ಕುದಿವ ಧಗೆ
ವಸಂತಕೆ ನುಗ್ಗಿದ
ಗ್ರೀಷ್ಮದುರಿಗೆ ಕಾದು
ಹಂಚಾಗಿರುವ ನೆಲಕೊರಗಿದ
ಹಣ್ಣೆಲೆಗಳ-ಹೂಗಳ ಹಾಸುಗೆ
ಭಾಷೆಯೇ ಬೇಕಿಲ್ಲದ
ಮಾತು ಮುಟ್ಟದ
ಅಕ್ಷರಗಳ ಹಂಗಿಲ್ಲದ
ಋತುಗಳ ಗತಿಗೆ
ಜೀವದ ಚಲನೆಗೆ
ನಡೆ ಇದೆ, ಶಬ್ದವೆಲ್ಲಿದೆ?

ನಿಸರ್ಗದ ನಡೆಯ ದನಿಗೆ
ಕಿವಿಯಾಗಿ, ಕಣ್ಣಾಗಿ…
ಒಂದಾಗಿ ನಿಂತೆ ಈ ಗಳಿಗೆ!

Previous post ಕೇಳಿಸಿತೇ?
ಕೇಳಿಸಿತೇ?
Next post ಲಿಂಗಾಯತಧರ್ಮ ಸಂಸ್ಥಾಪಕರು -2
ಲಿಂಗಾಯತಧರ್ಮ ಸಂಸ್ಥಾಪಕರು -2

Related Posts

ಗಡಿಯಲ್ಲಿ ನಿಂತು…
Share:
Poems

ಗಡಿಯಲ್ಲಿ ನಿಂತು…

May 6, 2021 ಜ್ಯೋತಿಲಿಂಗಪ್ಪ
ಈ ಬಯಲಲಿ ಕುಳಿತು ಹಿಂದಣ ಹೆಜ್ಜೆಗಳ ಎಣಿಸುತಿರುವೆ ಖಾಲಿ ಮುಖವಿಲ್ಲದ ನಾಳೆಗಳು ಮುಖವಾಡದ ನಿನ್ನೆಗಳು ಮುಖಾಮುಖಿ ಯ ಇಂದು ಈ ಅರಳಿದ ಅರಳೆ ರಾಟೆಯಲಿ ಸಿಲುಕಿ ನೂಲು ಹಾಸು ಹೊಕ್ಕು...
ನಿಜ ನನಸಿನ ತಾವ…
Share:
Poems

ನಿಜ ನನಸಿನ ತಾವ…

July 10, 2023 ಕೆ.ಆರ್ ಮಂಗಳಾ
ಕಣ್ಣು ಮುಚ್ಚಿದಾಗ ಬರುವ ಕನಸಿಗೂ ಕಣ್ಬಿಟ್ಟಾಗಿನ ದಿನದ ಚಿತ್ರಾವಳಿಗೂ ಏನಿಹುದು ಅಂತರ? ನಗು, ಅಳು, ನೋವು, ಸಂಕಟ… ಅನುಭವದಲ್ಲಿ ಅದ್ದಿ ತೆಗೆದಂತೆ ಎಲ್ಲ ಎದುರೆದುರೇ ನಡೆದಂತೆ!...

Comments 2

  1. Chinmayi
    Apr 7, 2024 Reply

    ಸರಳ, ಸುಂದರ

  2. ಶೋಭಾದೇವಿ ಅಮರಶೆಟ್ಟಿ, ಧಾರವಾಡ
    Apr 16, 2024 Reply

    ಯುಗಾದಿ ಸಮಯದಲ್ಲಿ ಎಲ್ಲ ಗಿಡ ಮರಗಳು ಚಿಗುರಿದಾಗ ವಿವಿಧ ಬಣ್ಣಗಳ ಬೇರೆ ಬೇರೆ ಹಲವು ಪರಿಮಳಗಳಿಂದ ತುಂಬಿದ ನಿಸರ್ಗದ ಹೊಸತನವು ‘ಒಂದಾಗಿ ನಿಂತೆ’ ಕವನದಲ್ಲಿ ತುಂಬಾ ಸೊಗಸಾಗಿ ಬಂದಿದೆ👌👌👍👍🙂

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ
ಲಿಂಗಾಯತ ಧರ್ಮದ ತಾತ್ವಿಕ ಚಿಂತನಾ ಗೋಷ್ಠಿ
March 9, 2023
ಬೇಡವಾದುದನ್ನು ಡಿಲೀಟ್ ಮಾಡುತ್ತಿರಬೇಕು
ಬೇಡವಾದುದನ್ನು ಡಿಲೀಟ್ ಮಾಡುತ್ತಿರಬೇಕು
January 7, 2022
ಹರನು ಮೂಲಿಗನಾಗಿ…
ಹರನು ಮೂಲಿಗನಾಗಿ…
March 5, 2019
ಸದ್ಗುರು ಸಾಧಕ ಬಸವಣ್ಣ
ಸದ್ಗುರು ಸಾಧಕ ಬಸವಣ್ಣ
May 6, 2021
ನಾನು ಯಾರು? ಎಂಬ ಆಳ-ನಿರಾಳ-5
ನಾನು ಯಾರು? ಎಂಬ ಆಳ-ನಿರಾಳ-5
August 2, 2020
ಕೊಂಡಗುಳಿ ಕೇಶಿರಾಜ ಮತ್ತು…
ಕೊಂಡಗುಳಿ ಕೇಶಿರಾಜ ಮತ್ತು…
April 6, 2020
ಚೋರಚಿಕ್ಕ ಶರಣ ಚಿಕ್ಕಯ್ಯನಾದ ಕತೆ
ಚೋರಚಿಕ್ಕ ಶರಣ ಚಿಕ್ಕಯ್ಯನಾದ ಕತೆ
January 7, 2019
ಮಾಡುವಂತಿರಬೇಕು, ಮಾಡದಂತಿರಬೇಕು…
ಮಾಡುವಂತಿರಬೇಕು, ಮಾಡದಂತಿರಬೇಕು…
April 29, 2018
ನೀನು ನಾನಲ್ಲ…
ನೀನು ನಾನಲ್ಲ…
July 21, 2024
ಕಾದಿ ಗೆಲಿಸಯ್ಯ ಎನ್ನನು
ಕಾದಿ ಗೆಲಿಸಯ್ಯ ಎನ್ನನು
April 29, 2018
Copyright © 2025 Bayalu