Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಈ ಕ್ಷಣದ ಸತ್ಯ
Share:
Poems March 12, 2022 ಕೆ.ಆರ್ ಮಂಗಳಾ

ಈ ಕ್ಷಣದ ಸತ್ಯ

ಧಗಧಗಿಸಿ ಮೇಲೇರುತಿಹ
ಕೆನ್ನಾಲಿಗೆಯ ಈ ಬೆಂಕಿ
ಅಡಗಿತ್ತು ಎಲ್ಲಿ?
ಮರದ ಬೊಡ್ಡೆಯಲೋ?
ಒಣಗಿದ ಸೌದೆಯಲೋ,
ಮದ್ದಗೀರಿದ ಕಡ್ಡಿಯಲ್ಲೋ,
ಊದುತಿಹ ಗಾಳಿಯಲ್ಲೋ?
ಎಲ್ಲಿಂದ ಬಂತು
ಕಣ್ಣ ಕೋರೈಸುವ ಈ ಬೆಳಕು,
ಚಕಮಕದ ಹೊಳಪು,
ಈ ಝಳದ ಧಗೆಯು?
ಆ ಬೊಡ್ಡೆ, ಆ ಒಣಗಿದೆಲೆ,
ಆ ಕಿಡಿಯ ಬೆಸುಗೆಯಲಿ
ಇತ್ತೇ ಇಂಥ ಮೋಹಕದ ಚಳಕ?

ಗಾಳಿಯಲಿ ಕೈ ಬೀಸಿ
ಬಾಚಿಕೊಳಬಹುದೇ ಶಾಖವನು
ಮುಂದಣ ಚಳಿಗೂ ಆದೀತೆಂದು?
ಗಾಜಿನ ಸೀಸೆಯೊಳಗೆ
ತುಂಬಿಕೊಳಬಹುದೇ ಬೆಳಕ
ನಾಳಿನಿರುಳಿಗೆ ಇರಲೆಂದು?
ನಿನ್ನೆಯ ಭೂತವನು
ಬೆನ್ನೇರಿಸಿಕೊಂಡ ಮನಕೆ
ಸದಾ ನಾಳೆಯದೇ ಚಿಂತೆ…

ಈ ಕ್ಷಣಕಾದರೋ
ಹಿಂದು-ಮುಂದುಗಳಿಲ್ಲ
ದಂದುಗದ ಹಂಗಿಲ್ಲ
ಇಲ್ಲೇ, ಈಗಲೇ
ಉರಿದುರಿದು ತೋರಿ,
ತೋರುತ್ತಲೇ ಮರೆಯಾಗಿ
ಕಣ್ಣ ಮುಂದಲೇ ಕರಗುತಿಹ
ಆ ಬೆಂಕಿಗೂ,
ನನ್ನೊಡಲ ಪ್ರಾಣಕ್ಕೂ
ಇಹುದೇ ಏನಾದರೂ ಅಂತರ?

Previous post ಒಳಗಣ ಮರ
ಒಳಗಣ ಮರ
Next post ಕನ್ನಡ ಕವಿ ಸಂತರಲ್ಲಿ ಧರ್ಮ…
ಕನ್ನಡ ಕವಿ ಸಂತರಲ್ಲಿ ಧರ್ಮ…

Related Posts

ಭಾರ
Share:
Poems

ಭಾರ

October 6, 2020 ಕೆ.ಆರ್ ಮಂಗಳಾ
ಕಳೆದು ಹೋದ ದಿನಗಳ ಭಾರ ಉಳಿಸಿಕೊಂಡ ನೆನಪಿನ ಭಾರ ಕಾಣದಿರುವ ಕ್ಷಣಗಳ ಭಾರ ಕಲ್ಪನೆಗಳ ಹೆಣಿಕೆಯ ಭಾರ… ಹೊರಲಾರೆ ತಂದೆ ಈ ತಲೆಭಾರ ಹೊತ್ತು ನಡೆಯಲಾರೆ ಮುಂದೆ… ಹಳಸಿಹೋದ ವಿಷಯದ ಭಾರ...
ಹಾಯ್ಕು
Share:
Poems

ಹಾಯ್ಕು

September 6, 2023 ಜ್ಯೋತಿಲಿಂಗಪ್ಪ
೦೧ ದೀಪ ಹಿಡಿದು ಇರುಳು ಆ ನಕ್ಷತ್ರ ಹುಡುಕಲುಂಟೇ… ೦೨ ಮದವೇ ಮದ್ಯ ಮದ ಏರಿದ ಅಷ್ಟೂ ಮತ್ತು ಏರಿತು. ೦೩ ಸಾವು ಎಂಬುದು ಕೊಬ್ಬಿನ ಮಾತು ಅಲ್ಲಾ ಮೆಲ್ಲ ಮಾತಾಡು. ೦೪...

Comments 1

  1. Andanappa
    Mar 23, 2022 Reply

    ಬೆಂಕಿಗೂ ಪ್ರಾಣಕ್ಕೂ ಮೂಲಸಂಬಂಧ ಯಾವುದು? ಇದೇ ನಿರಂತರ ಹುಡುಕುವಿಕೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
‘ಅಲ್ಲಮ’ ಎಂಬ ಹೆಸರು
‘ಅಲ್ಲಮ’ ಎಂಬ ಹೆಸರು
August 6, 2022
ಲಿಂಗದ ಹಂಗೇ…
ಲಿಂಗದ ಹಂಗೇ…
September 10, 2022
ಹಣತೆ ಸಾಕು
ಹಣತೆ ಸಾಕು
September 14, 2024
ಹಣತೆಯ ಹಂಗು
ಹಣತೆಯ ಹಂಗು
October 19, 2025
ಮಾಣಿಕ್ಯದ ದೀಪ್ತಿ
ಮಾಣಿಕ್ಯದ ದೀಪ್ತಿ
June 12, 2025
ಸಂದೇಹ ನಿವೃತ್ತಿ…
ಸಂದೇಹ ನಿವೃತ್ತಿ…
October 6, 2020
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
August 2, 2019
ನನ್ನೆದುರು ನಾ…
ನನ್ನೆದುರು ನಾ…
March 6, 2024
ಮಿತ್ರ-ಶತೃಗಳಿರುವುದು ನಡಾವಳಿಕೆಯಲ್ಲಿ
ಮಿತ್ರ-ಶತೃಗಳಿರುವುದು ನಡಾವಳಿಕೆಯಲ್ಲಿ
September 7, 2021
ಬೆಳಕಲಿ ದೀಪ
ಬೆಳಕಲಿ ದೀಪ
December 8, 2021
Copyright © 2026 Bayalu