Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ದಡ ಸೋಂಕದ ಅಲೆಗಳು
Share:
Poems July 10, 2025 ಜ್ಯೋತಿಲಿಂಗಪ್ಪ

ದಡ ಸೋಂಕದ ಅಲೆಗಳು

ನದಿ ಕೂಡುವ ಕಡಲ ಅಂಚು
ನಿಂತು ಸಂಬಂಧ ಹುಡುಕುತಿರುವೆ

ಕಡಲ ಸೇರುವ ನೀರು
ನದಿ ಯಾವುದು ಕಡಲು ಯಾವುದು
ಸಂಬಂಧ ಅಸಂಬಂಧ

ಎರಡೆಂಬ ಭಿನ್ನ ಅಳಿಯದೇ..

ದಾರಿ ತೋರುವ ಕೈಯ ಹಿಡಿದಿರುವೆ
ಕೈಯ ಕುರುಡು ತೋರದು ದಾರಿ

ನೀರಿರದ ದಾರಿ ನದಿ ಗುರುತು ಮೂಡಿಸಿದೆ
ನೀರಲಿ ನೀರಾಗಿಹ ನೀರು
ನೀರಾಗಿಸಿದೆ ಎನ್ನ

ಮರೆಯ ಆಚೆ ಮರೆಯಬಾರದ ಘನ

ಅರಿಯಲಿಲ್ಲ ಅರಿದಿಲ್ಲ
ಬಲ್ಲತನದ ಭಂಗ ಇನ್ನಿಲ್ಲ

ಅನನ್ಯ ಎಂಬುದೇನು…?
ಭ್ರಮೆ; ಹೇಳಬಾರದ ಶಬ್ದ ಸಂಭ್ರಮ

ಆಹಾ ಕಣ್ಣ ಸುಖವ ನೆಚ್ಚಿ
ಮಣ್ಣು ಮೆಟ್ಟಿದ ಪಾದ ಆಹಾ
ನೆಲ ಮುಟ್ಟದು ಕಣ್ಣು

ಊರು ಹಾಳಾಯಿತು;ಮದ ತಣ್ಣಗಾಯಿತು
ಹೊಗೆ ಇಲ್ಲದ ಬೆಂಕಿ ಸುಟ್ಟ ಊರು
ಕಣ್ಣಿಲ್ಲದವರ ಕಾಡಿತ್ತು

ಹರಿಯುವ ನದಿ ನೀರು
ನಾದವ ಏನೆಂದು ಬರೆಯಲಿ.

Previous post ಪ್ರೇಮ ಮತ್ತು ದ್ವೇಷ
ಪ್ರೇಮ ಮತ್ತು ದ್ವೇಷ
Next post ಕಲಿಸು ಗುರುವೆ…
ಕಲಿಸು ಗುರುವೆ…

Related Posts

ತುತ್ತೂರಿ…
Share:
Poems

ತುತ್ತೂರಿ…

June 10, 2023 ಕೆ.ಆರ್ ಮಂಗಳಾ
ತುತ್ತೂರಿ ತುತ್ತೂರಿ ಯಾಕೆ ಇಂತಹ ಪಿತೂರಿ? ಯಾವುದೇ ಮಾತಲೂ ನಿನ್ನದೇ ರಾಗ ಯಾವುದೇ ಭಾವಕೂ ನಿನ್ನದೇ ತಾಳ ಬಾಯಿಬಿಟ್ಟರೂ ನಿನ್ನದೇ ಗಾನ ಮೌನದಲಿದ್ದರೂ ನಿನ್ನದೇ ಧ್ಯಾನ...
ಕೊನೆಯಿರದ ಚಕ್ರದ ಉರುಳು
Share:
Poems

ಕೊನೆಯಿರದ ಚಕ್ರದ ಉರುಳು

October 21, 2024 ಜಬೀವುಲ್ಲಾ ಎಂ.ಅಸದ್
ಬೆಳಗು ಕತ್ತಲಿನೊಳಗೊ ಕತ್ತಲು ಬೆಳಗಿನೊಳಗೊ ನರ್ತಿಸುತ್ತಿರೆ ಜೀವ, ಭಾವ, ದೇಹ, ಆತ್ಮ ಎಲ್ಲಾ ಬಯಲಾಗಿ ಬಯಲೊಳಗೊ… ಸತ್ಯ ಸುಳ್ಳಿನೊಳಗೊ ಸುಳ್ಳು ಸತ್ಯದೊಳಗೊ ಹತ್ತಿ...

Comments 3

  1. ಷಡಕ್ಷರಿ ಎಸ್
    Jul 22, 2025 Reply

    ದಡ ಮುಟ್ಟದ ಅಲೆಗಳ ಗುರಿ ಯಾವುದು? ಗಮ್ಯವಿಲ್ಲದ ಜೀವನವನ್ನು ಒಗಟಾಗಿ ಬೆಡಗಿನ ನುಡಿಯಲ್ಲಿ ಕಟ್ಟಿದ ಕವನ ಚೆನ್ನಾಗಿದೆ👌👌👌

  2. ಶಿವಪುತ್ರ ಕಲ್ಲಹಳ್ಳಿ
    Jul 31, 2025 Reply

    ದಾರಿ ತೋರುವ ಕೈಗೆ ಕುರುಡಾದರೆ ಏನು ಗತಿ?

  3. ಬಸವಪ್ರಭು ಹತ್ತಿಕಟ್ಟಿ
    Aug 2, 2025 Reply

    ದಾರಿ ತೋರುವ ಕೈಯ ಹಿಡಿದಿರುವೆ
    ಕೈಯ ಕುರುಡು ತೋರದು ದಾರಿ- ದಿಕ್ಕು ತಪ್ಪಿದ ನಮ್ಮ ಬದುಕಿನ ಕಾರಣ 😒

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ನಿಜ ನನಸಿನ ತಾವ…
ನಿಜ ನನಸಿನ ತಾವ…
July 10, 2023
ಹಾಯ್ಕುಗಳು
ಹಾಯ್ಕುಗಳು
November 10, 2022
ಲಿಂಗಾಯತ ಧರ್ಮದ ನಿಜದ ನಿಲುವು
ಲಿಂಗಾಯತ ಧರ್ಮದ ನಿಜದ ನಿಲುವು
April 29, 2018
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
ಕ್ಯಾಲೆಂಡರ್ ಸಂಸ್ಕೃತಿ ಮತ್ತು ಬಸವಣ್ಣ
July 4, 2022
ಕಣ್ಣ ದೀಪ
ಕಣ್ಣ ದೀಪ
September 7, 2021
ಮಿಂಚೊಂದು ಬಂತು ಹೀಗೆ…
ಮಿಂಚೊಂದು ಬಂತು ಹೀಗೆ…
August 6, 2022
ದಾರಿಯಲ್ಲದ ದಾರಿ…
ದಾರಿಯಲ್ಲದ ದಾರಿ…
October 10, 2023
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
ಬಸವೇಶ್ವರರ ದಾಸೋಹ ತತ್ವ ಮತ್ತು ಗಾಂಧೀಜಿಯ ಧರ್ಮದರ್ಶಿತ್ವ
December 3, 2018
ಶರಣನಾಗುವ ಪರಿ
ಶರಣನಾಗುವ ಪರಿ
June 3, 2019
ಕೈಗೆಟುಕಿದ ಭಾವ ಬುತ್ತಿ
ಕೈಗೆಟುಕಿದ ಭಾವ ಬುತ್ತಿ
July 10, 2025
Copyright © 2025 Bayalu