Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಶಾಂತಿ
Share:
Poems April 11, 2025 Bayalu

ಶಾಂತಿ

ಪಯಣದ ಉಬ್ಬುತಗ್ಗು ಹಾದಿಯಲಿ,
ಗಂಧದ ಕಣವಾಗು ಬಯಲಲಿ,
ಸುಮದ ದಳವಾಗು ವನದಲಿ,
ಓ ಮನವೇ,
ಕಂದನ ಮುಗ್ದ ನಗುವಾಗು.| ೧ |

ಹರುಷ ದುಗುಡಗಳ ಮೇಳದಲಿ,
ಮಧುರ ನೆನಪುಗಳ ಹೊಳೆಯಾಗು,
ಹಾಡಾಗು ಕಾಡುವ ನೋವಿಗೆ,
ಓ ಮನವೇ,
ಬಾನಲಿ ಹಾರುವ ಹಕ್ಕಿಯಾಗು. | ೨ |

ಕಷ್ಟಸುಖಗಳು ಬೆರೆತ ಬದುಕಿನಲಿ,
ಚಿಂತನೆಯ ಮುನಿಯಾಗು ಗದ್ದಲದಲಿ,
ಹರಿವ ನದಿಯಾಗು ಹರುಷದಲಿ
ಓ ಮನವೇ,
ಕರುಣೆ ಮಮತೆಗಳ ಸೆಲೆಯಾಗು. | ೩ |

ನೇಸರನ ದಿಗಂತದಂಚಿನ ಪಥದಲಿ,
ಮುಪ್ಪುದೇಹ ಕೊನೆ ಕೋರಿದಂದು,
ಮುಕ್ತನಾಗು ತುಂಬು ಹೃದಯದಲಿ,
ಓ ಮನವೇ,
ಪರಮ ಶಾಂತಿಯ ನೆಲೆಯಾಗು. | ೪ |

-ಅಂಬಳೆ ನಾಗ
(ರವೀಂದ್ರನಾಥ್ ಟಾಗೋರ್ ಅವರ ಕವಿತೆಯಿಂದ ಸ್ಫೂರ್ತಿ ಪಡೆದು)

Previous post ಕಾಲ- ಕಲ್ಪಿತವೇ?
ಕಾಲ- ಕಲ್ಪಿತವೇ?
Next post ಕೊನೆಯಿರದ ಚಕ್ರದ ಉರುಳು
ಕೊನೆಯಿರದ ಚಕ್ರದ ಉರುಳು

Related Posts

ಯಾಕೀ ಗೊಡವೆ?
Share:
Poems

ಯಾಕೀ ಗೊಡವೆ?

August 10, 2023 ಜ್ಯೋತಿಲಿಂಗಪ್ಪ
ಸಾಯುವುದು ಒಂದು ದಿನ ಇದ್ದೇ ಇದೆ ಬಿಡು ದಿನಾ ಏಕೆ ಸಾಯುವುದು ದಿನಕೆ ಸಾವಿಲ್ಲವೇ ಹುಟ್ಟುವ ಭರವಸೆ ಖಂಡಿತಾ ಹುಟ್ಟೇ ಒಂದು ಮದ ಸಾವರಿತರೆ ಮದ ಸಾವುದು ನಿತ್ಯ ಸತ್ಯದ ಗೊಡವೆ ಬೇಕೇ...
ಈ ಕ್ಷಣದ ಸತ್ಯ
Share:
Poems

ಈ ಕ್ಷಣದ ಸತ್ಯ

March 12, 2022 ಕೆ.ಆರ್ ಮಂಗಳಾ
ಧಗಧಗಿಸಿ ಮೇಲೇರುತಿಹ ಕೆನ್ನಾಲಿಗೆಯ ಈ ಬೆಂಕಿ ಅಡಗಿತ್ತು ಎಲ್ಲಿ? ಮರದ ಬೊಡ್ಡೆಯಲೋ? ಒಣಗಿದ ಸೌದೆಯಲೋ, ಮದ್ದಗೀರಿದ ಕಡ್ಡಿಯಲ್ಲೋ, ಊದುತಿಹ ಗಾಳಿಯಲ್ಲೋ? ಎಲ್ಲಿಂದ ಬಂತು ಕಣ್ಣ...

Comments 3

  1. Raviraju A
    Apr 20, 2025 Reply

    ಮುಕ್ತವಾಗಲಿ ಮನವು ಎಲ್ಲಾ ಕ್ಲೀಷೆಗಳಿಂದ… ಶಾಂತ ಲಹರಿಯಂತಿದೆ ಭಾವನೆ.

  2. ಕೀರ್ತಿ ಎನ್, ಗುಂಡ್ಲುಪೇಟೆ
    Apr 28, 2025 Reply

    ಪಯಣದ ಉಬ್ಬುತಗ್ಗು ಹಾದಿಯಲಿ, ಗಂಧದ ಕಣವಾಗು ಬಯಲಲಿ- ಮಾರ್ಮಿಕವಾದ ಸಾಲುಗಳು. ಗಂಧದ ಕಣವಾಗುವುದು!

  3. ಉಮಾದೇವಿ ಶಂಕರಪ್ಪ
    May 1, 2025 Reply

    ಬಯಲು ಕವನಗಳು ಮತ್ತೆ ಮತ್ತೆ ಓದುವಂತಿವೆ✌️

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಕಾಲ- ಕಲ್ಪಿತವೇ?
ಕಾಲ- ಕಲ್ಪಿತವೇ?
April 11, 2025
ಅಪ್ಪನಿಲ್ಲದ ಮನೆ
ಅಪ್ಪನಿಲ್ಲದ ಮನೆ
January 10, 2021
ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ
ಅರಿವಿಂದ ಅರಿವ ನಿರ್ಮಲ ಗುರುಕಾರುಣ್ಯ
May 1, 2019
ವಚನ ಸಾಹಿತ್ಯದ ಸಂಕೀರ್ಣತೆ
ವಚನ ಸಾಹಿತ್ಯದ ಸಂಕೀರ್ಣತೆ
April 29, 2018
ಮಾತು ಮಾಯೆ
ಮಾತು ಮಾಯೆ
July 4, 2021
ಗೆರೆ ಎಳೆಯದೆ…
ಗೆರೆ ಎಳೆಯದೆ…
October 13, 2022
ಮುಕ್ತಾಯಕ್ಕ- ಅಲ್ಲಮರ ಸಂವಾದ
ಮುಕ್ತಾಯಕ್ಕ- ಅಲ್ಲಮರ ಸಂವಾದ
October 13, 2022
ಇದ್ದಷ್ಟೇ…
ಇದ್ದಷ್ಟೇ…
January 10, 2021
ಸತ್ಯ ಸಂಶೋಧನಾ ಲೇಖನ – ಒಂದು ಹೊಸ ಹೆಜ್ಜೆ
ಸತ್ಯ ಸಂಶೋಧನಾ ಲೇಖನ – ಒಂದು ಹೊಸ ಹೆಜ್ಜೆ
April 29, 2018
ಮನ ಉಂಟೇ ಮರುಳೇ, ಶಿವಯೋಗಿಗೆ?
ಮನ ಉಂಟೇ ಮರುಳೇ, ಶಿವಯೋಗಿಗೆ?
November 10, 2022
Copyright © 2025 Bayalu