Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಕಣ್ಣ ದೀಪ
Share:
Poems September 7, 2021 ಜ್ಯೋತಿಲಿಂಗಪ್ಪ

ಕಣ್ಣ ದೀಪ

ನನ್ನ
ಮನೆಯ ಅಂಗಳದಲ್ಲಿ
ಒಬ್ಬ ಬುದ್ಧನಿದ್ದಾನೆ

ಶೋ ಕೇಸಿನಲ್ಲಿ
ಒಬ್ಬ ಬುದ್ಧನಿದ್ದಾನೆ

ಗೋಡೆಯ ಮೇಲೆ
ಒಬ್ಬ ಬುದ್ಧನಿದ್ದಾನೆ

ಎಲ್ಲೆಲ್ಲೂ ಬುದ್ಧ ಬುದ್ಧ
ಒಳಗೆ ಖಾಲಿ

ಗೋಡೆಯ
ಹಿಂದೆ ದೀಪ ಇಟ್ಟು ಹೋದ

ಊರು
ತುಂಬಾ ಬಿಕ್ಕುಗಳೇ

ಬೇಡುವ
ಕೈ ಕೊಡುವ ಕೈಯ ಕಾಯುತಿದೆ

ಬಯಲ
ಹುಡುಕಿ ಹೊರಟಿದ್ದು ನಿಜ
ಬಯಲಾಗಲಿಲ್ಲ

ನಿಜದ
ದಾರಿಯಲಿ ಸಿಕ್ಕಿದ್ದು
ಬಯಲು

ಕಣ್ಣ
ದೀಪ ಆರಿಸುವ ಗಾಳಿ
ಕತ್ತಲು

ಈಗ
ಊರ ತುಂಬಾ ಬಸವಗಳೇ
ಲಿಂಗವಿಲ್ಲ

ಆ
ಪ್ರಾಣಿಗೆ ಹೊಟ್ಟೆ
ತುಂಬಿತೋ ಸಿಟ್ಟೆಲ್ಲಾ ಇಳಿಯಿತು

ಈ
ಪ್ರಾಣಕೆ ಹೊಟ್ಟೆಯೇ ಇಲ್ಲಾ
ಸಿಟ್ಟೇ ಎಲ್ಲಾ.

Previous post ಅಸ್ತಿತ್ವವಾದಿ ಬಸವಣ್ಣ
ಅಸ್ತಿತ್ವವಾದಿ ಬಸವಣ್ಣ
Next post ಗುರುವೆ ಸುಜ್ಞಾನವೇ…
ಗುರುವೆ ಸುಜ್ಞಾನವೇ…

Related Posts

ಯಾಕೀ ಗೊಡವೆ?
Share:
Poems

ಯಾಕೀ ಗೊಡವೆ?

August 10, 2023 ಜ್ಯೋತಿಲಿಂಗಪ್ಪ
ಸಾಯುವುದು ಒಂದು ದಿನ ಇದ್ದೇ ಇದೆ ಬಿಡು ದಿನಾ ಏಕೆ ಸಾಯುವುದು ದಿನಕೆ ಸಾವಿಲ್ಲವೇ ಹುಟ್ಟುವ ಭರವಸೆ ಖಂಡಿತಾ ಹುಟ್ಟೇ ಒಂದು ಮದ ಸಾವರಿತರೆ ಮದ ಸಾವುದು ನಿತ್ಯ ಸತ್ಯದ ಗೊಡವೆ ಬೇಕೇ...
ಕ್ವಾಂಟಮ್ ಮೋಡಿ
Share:
Poems

ಕ್ವಾಂಟಮ್ ಮೋಡಿ

November 9, 2021 ಜ್ಯೋತಿಲಿಂಗಪ್ಪ
ನನ್ನ ಸುತ್ತುತ್ತಿದೆ ಈ ಬೆಳಕಿಲ್ಲದ ನೆರಳು ಎಣಿಸಲಾರೆ ಈ ಬಯಲ ಹೆಜ್ಜೆ ನನ್ನೀ ನೆಲಕೆ ಬಂದ ನನ್ನೀ ಪ್ರಜ್ಞೆ ನನ್ನೀ ನೆರಳಾಟವ ಮೆಚ್ಚಿದೆ ಬುದ್ಧನ ಹೆಜ್ಜೆ ಅಲ್ಲಮನ ಹೆಜ್ಜೆ ಈಗ...

Comments 2

  1. Rajesh Bhadravathi
    Sep 9, 2021 Reply

    ನನ್ನ ಮನೆಯಲ್ಲೂ ಬುದ್ಧನ ಮೂರ್ತಿಗಳು ತುಂಬಿಕೊಂಡಿವೆ. ನಿಮ್ಮ ಕವನದ ಆಶಯ ನೇರ ನನ್ನ ಮನಸ್ಸನ್ನೇ ಕೆಣಕುವಂತೆ ತೋರಿತು.

  2. Shrinivasa
    Sep 23, 2021 Reply

    I absolutely love your blog, content and layout are amazing. I find many of your posts to be exactly what I am looking for. Thank you.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಅವಿರಳ ಅನುಭಾವಿ-4
ಅವಿರಳ ಅನುಭಾವಿ-4
June 17, 2020
ಹೀಗೊಂದು ಹುಣ್ಣಿಮೆ…
ಹೀಗೊಂದು ಹುಣ್ಣಿಮೆ…
October 19, 2025
ಮುಕ್ತಾಯಕ್ಕ- ಅಲ್ಲಮರ ಸಂವಾದ
ಮುಕ್ತಾಯಕ್ಕ- ಅಲ್ಲಮರ ಸಂವಾದ
October 13, 2022
ಕಾಣದ ಬೆಳಕ ಜಾಡನರಸಿ…
ಕಾಣದ ಬೆಳಕ ಜಾಡನರಸಿ…
December 13, 2024
ಧೀಮಂತ ಶರಣ ಬಹುರೂಪಿ ಚೌಡಯ್ಯ
ಧೀಮಂತ ಶರಣ ಬಹುರೂಪಿ ಚೌಡಯ್ಯ
April 29, 2018
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
ಮೈಸೂರು ಜನಗಣತಿಗಳು: ತಪ್ಪಿದ ಸುವರ್ಣಾವಕಾಶವೆ?
April 6, 2023
ಕುಂಬಾರ ಲಿಂಗಾಯತರು
ಕುಂಬಾರ ಲಿಂಗಾಯತರು
March 17, 2021
ಬಸವಣ್ಣ -ಬೆಂಜಮಿನ್ ಬ್ಲೂಮರ ಕಲಿಕಾ ವರ್ಗೀಕರಣ
ಬಸವಣ್ಣ -ಬೆಂಜಮಿನ್ ಬ್ಲೂಮರ ಕಲಿಕಾ ವರ್ಗೀಕರಣ
January 7, 2022
ಹುಚ್ಚು ಖೋಡಿ ಮನಸು
ಹುಚ್ಚು ಖೋಡಿ ಮನಸು
August 6, 2022
ನೆಮ್ಮದಿ
ನೆಮ್ಮದಿ
April 6, 2020
Copyright © 2025 Bayalu