Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಹುಚ್ಚು ಖೋಡಿ ಮನಸು
Share:
Poems August 6, 2022 ಕೆ.ಆರ್ ಮಂಗಳಾ

ಹುಚ್ಚು ಖೋಡಿ ಮನಸು

ಕಪ್ಪು ಕೌದಿಯ ಹೊದ್ದು
ತನ್ನ ಬಣ್ಣವನೇ ಮರೆತು
ಮಲಗಿಬಿಟ್ಟಿದೆ ನೀಲಿಯಾಗಸ
ಒಳ-ಹೊರಗು ಮಬ್ಬಾಯ್ತು…
ಕತ್ತಲೆಯ ನಂಜೇರಿ
ಕಣ್ಣು ಹರಿಸಿದುದ್ದಕ್ಕೂ
ಎಲ್ಲೆಲ್ಲೂ ಮಸುಕು
ನಿಂತಲ್ಲೇ ಯುಗಯುಗಕು ನಿಂತು
ಜೋಮುಗಟ್ಟಿತು ಕಾಲು
ನಡೆಯ ಮರೆತು…

ಮೇಘಗಳ ಆರ್ಭಟದಲಿ
ಆಗೀಗ ಸಿಡಿಯುತಿದೆ
ಮಿಂಚು-ಗುಡುಗು
ಕೊರೆವ ಚಳಿಯಲ್ಲೂ
ಬಿಟ್ಟ ನಿಟ್ಟುಸಿರ ಬಿಸಿ ಹಬೆಯು
ಸುರುಳಿಸುರುಳಿಯಾಗಿ
ಮೇಲೆ ಸರಿದು ಹೋಗುತಿದೆ…

ಎಡಬಿಡದೆ ಸುರಿಯುತಿಹ
ಮಳೆಯ ಹನಿಗಳಾ ಹಿಡಿದು
ಮುಗಿಲನೇರುವ ಕಿಚ್ಚು…
ಹಾಡುಹಗಲೇ ಕಾಣೆಯಾದ
ರವಿಯ ಹುಡುಕಿ ತರುವಾ ಹುಚ್ಚು
ಕಲ್ಪನೆಯ ಕುದುರೆಗೆ
ಎಣೆಯುಂಟೆ? ಕೊನೆವುಂಟೆ?
ನಿಜದತ್ತ ನಡೆಸುವ ಶಕ್ತಿಯುಂಟೆ?

ದೇಹ ಕಾವನು ಕಾಪಿಟ್ಟ ಜೀವಕೆ
ಎಲ್ಲಿಂದ ಬಂತಿದು
ಗಗನ ತಡಕುವ ಕನಸು!?
ನಿನ್ನೊಳಗೆ ನಿನ್ನಲ್ಲೇ
ಇಳಿದು ನೋಡೆಂದು
ತಲೆಗೆ ಮೊಟಕಿದ ಗುರು ಬೆನ್ನ ಬಳಿ ನಿಂತು

ಒಳಗಿದ್ದರೂ ಒಳಗ ನೋಡದೇ
ಹೊರಗೆ ಸುತ್ತುವ ಚಟ
ಭ್ರಮೆ ಬಿಡದ ಹಟ
ಮನಕಂಟಿ ಕಾಲಗಳೇ ಸರಿದವು…
ಗುರು ಕೊಟ್ಟ ಸುಳಿವುಗಳು
ಸಿಕ್ಕು ಕಣ್ಮರೆಯಾಗಿ ಕಾಡುತಿಹವು
ದೌರ್ಬಲ್ಯವೆನಲೇ, ಸೋಲೆನಲೆ
ಗೊಂದಲಗಳ ಬೀಡೆನಲೇ?
ಗೊತ್ತು ಗುರಿಯಿಲ್ಲದೆ ಅಲೆವ
ತುಂಡು ಮೋಡದ ತೆರದಿ
ತಳಮಳಿಸುತಿದೆ ಎದೆಯು
ಎಂದಿಗೋ ಎಂದಿಗೋ…
ನನ್ನಿರಿವಿನ ಅರಿವನರಿಯುವ ಗಳಿಗೆ
ಒದಗಿ ಬರುವುದೆಂದಿಗೋ…?

Previous post ಆಸರೆ
ಆಸರೆ
Next post ಅಜಗಣ್ಣ – ಮುಕ್ತಾಯಕ್ಕರ ಬಾಂಧವ್ಯ
ಅಜಗಣ್ಣ – ಮುಕ್ತಾಯಕ್ಕರ ಬಾಂಧವ್ಯ

Related Posts

ನನ್ನೊಳಗಣ ಮರೀಚಿಕೆ
Share:
Poems

ನನ್ನೊಳಗಣ ಮರೀಚಿಕೆ

February 5, 2020 ಪದ್ಮಾಲಯ ನಾಗರಾಜ್
ಈ ಊರು ನದಿದಡೆಯಲ್ಲಿನ ಪ್ರವಾಹ ಭೀತಿಯ ಅಭದ್ರತೆ… ಈ ಊರು ಛಿದ್ರ ವಿಛಿದ್ರಗಳ ಸಂಗಮ ಬಿಂದು… ಈ ಊರು ಪ್ರತಿಮಾ ವಿಧಾನದ ಭಾವಸುಧೆ… ಈ ಊರು ವಿಷಾದ, ವ್ಯಸನಗಳ ನದೀ ಸುಳಿ… ಈ ಊರು...
ನಿಮ್ಮಿಂದಲೇ ನಾನು
Share:
Poems

ನಿಮ್ಮಿಂದಲೇ ನಾನು

February 11, 2022 ಜ್ಯೋತಿಲಿಂಗಪ್ಪ
ನಾನು ಹುಟ್ಟಿದ ಮೇಲೆ ಹುಟ್ಟಿತು ನನ್ನ ಇತಿಹಾಸ ನಾನು ಸತ್ತ ಮೇಲೆ ಹುಟ್ಟಿದ್ದು ನನ್ನ ಚರಿತ್ರೆ ಈ ನಡುವಿನ ಅಂತರ ನಾನು ಇದ್ದುದ್ದು ನನ್ನ ಸುಳ್ಳು ನಿಜ ನಾನು ಹೇಳಬಲ್ಲನೇ ನನ್ನ...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಬಯಲಾಟ
ಬಯಲಾಟ
March 17, 2021
ವಚನಗಳ ಓದು ಮತ್ತು ಅರ್ಥೈಸುವಿಕೆ
ವಚನಗಳ ಓದು ಮತ್ತು ಅರ್ಥೈಸುವಿಕೆ
August 5, 2018
ಐನಸ್ಟೈನ್ ಮತ್ತು ದೇವರು
ಐನಸ್ಟೈನ್ ಮತ್ತು ದೇವರು
October 5, 2021
ಅವಿರಳ ಅನುಭಾವಿ-4
ಅವಿರಳ ಅನುಭಾವಿ-4
June 17, 2020
ಮನ-ಮನೆ ಅನುಭವಮಂಟಪ
ಮನ-ಮನೆ ಅನುಭವಮಂಟಪ
September 7, 2020
ಅಷ್ಟಾವರಣವೆಂಬ ಭಕ್ತಿ ಸಾಧನ
ಅಷ್ಟಾವರಣವೆಂಬ ಭಕ್ತಿ ಸಾಧನ
August 6, 2022
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ
December 3, 2018
ಶರಣೆಯರ ಸ್ಮಾರಕಗಳು
ಶರಣೆಯರ ಸ್ಮಾರಕಗಳು
April 29, 2018
ಆ ಬಿರುಗಾಳಿ ಹುಟ್ಟಲೊಡನೆ…
ಆ ಬಿರುಗಾಳಿ ಹುಟ್ಟಲೊಡನೆ…
January 8, 2023
ಬಯಲಾದ ಬಸವಯೋಗಿಗಳು
ಬಯಲಾದ ಬಸವಯೋಗಿಗಳು
April 3, 2019
Copyright © 2023 Bayalu