Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಸಂತೆಯ ಸಂತ
Share:
Poems September 7, 2020 ಜ್ಯೋತಿಲಿಂಗಪ್ಪ

ಸಂತೆಯ ಸಂತ

ಕನ್ನಡಿಯೊಳಗಿನ ಕಣ್ಣ ನಿಲುವಿಗೆ ನನ್ನದೇನು ಕಾಣಿಕೆ
ಕಣ್ಣಿಗೆ ಕರುಳು ಇರಬಾರದು
ಒಂದೆಂಬುದು ಒಂದಲ್ಲ ಎರಡೆಂಬುದು ಎರಡಲ್ಲ
ಸಂತೆಯೊಳಗೊಬ್ಬ ಸಂತನಿದ್ದಾನೆ ಕಂಡಿರಾ

ಈ ಮೂರು ಮೊಳದ ಗುಂಡಿಯ ತೋಡುವರೈದು ಮಂದಿ
ಓಡುವ ಸೂರ್ಯನ ಹಿಡಿಯಲಾಗದು ನೆರಳು
ಬಿಡಮ್ಮಾ ಇದು ಯಾವ ತತ್ವದ ಹಾಡೋ
ತಂಬೂರಿ ಮೀಟುವ ಬೆರಳು ಮೊಂಡು

ನೆನೆದರೆ ಕಾಡುವುದು ಮರೆಹು
ಮರೆದರೆ ಕಾಡುವುದು ನೆನಹು
ಅರಿದರೆ ಕಾಡುವುದು ನೆನಹು ಮರೆಹು
ಶಬ್ದದೊಳಗಣ ನಿಸದ್ದುವ ಬಲ್ಲವರೇ ಬಲ್ಲರು

ನಿನ್ನಿಂದ ನಾನರಿದೆನಲ್ಲದೆ ಎನ್ನಿಂದ ನೀನಾಗಲಿಲ್ಲ
ಅಂತರಂಗದಲಿ ಅಡಗಿಸಿಟ್ಟ ಭಾವ
ಬಹಿರಂಗದಲಿ ಪೂಜೆಗೊಳ್ಳದು
ಕಣ್ಣ ಒಳಗಣ ಬಿಂಬ ಕಣ್ಣಿಗೆ ಇಂಬು

ಬೆಟ್ಟ ಏರಿ ಬಂದವನ ಕೂಡೇನು ಕಷ್ಟ ಸುಖ
ನೆಲದಲಿ ತೆವಳುವ ಮಣ್ಣು
ಮಣ್ಣಿಲ್ಲದೆ ಇರದು
ಅಂಗವಿಲ್ಲದವಗೆ ಅಂಗಿ ತೊಡಿಸಲುಂಟೇ…

Previous post ಮನ-ಮನೆ ಅನುಭವಮಂಟಪ
ಮನ-ಮನೆ ಅನುಭವಮಂಟಪ
Next post ಮನಸ್ಸು
ಮನಸ್ಸು

Related Posts

ನದಿಯನರಸುತ್ತಾ…
Share:
Poems

ನದಿಯನರಸುತ್ತಾ…

October 6, 2020 ಜ್ಯೋತಿಲಿಂಗಪ್ಪ
ಜ್ಞಾನವೆಂಬುದೇನು? ಮನೋ ಭೇದ. -ಅಲ್ಲಮ ನಾನು ಹುಟ್ಟುವಾಗ ಹೇಳಿ ಬಂದೆನೇ ಸಾಯುವಾಗಲೂ ಅಷ್ಟೇ ಬದುಕು ಹೇಳದು ಏನೂ ಈ ಕಡಲಲಿ ಕಳೆದಿರುವ ನದಿ ಹುಡುಕುತಿರುವೆ ಹುಡುಕುತಿರುವ ನದಿ...
ಇದ್ದಷ್ಟೇ…
Share:
Poems

ಇದ್ದಷ್ಟೇ…

January 10, 2021 ಜ್ಯೋತಿಲಿಂಗಪ್ಪ
ಇದ್ದಷ್ಟೇ ಇದರಾಚೆ ಕನಸೂ ಇಲ್ಲ ನಿದ್ದೆಯೂ ಇಲ್ಲ ಇರುವಷ್ಟು ಇರುವುದು ಇದ್ದ ಹಾಗೆ ಇರು ಕನಸು ಇದ್ದಾಗಷ್ಟೇ ಕನಸು ಇರುವುದು ಎಚ್ಚರಾದರೆ ಕನಸು ಕನವರಿಸುವುದು ಎಚ್ಚರಾಗು ಉದಯದ ಮೊದಲ...

Comments 2

  1. Mariswamy Gowdar
    Sep 10, 2020 Reply

    ಕಣ್ಣೊಳಗಣ ಕರುಳು ಹಿಂಗಿದಲ್ಲದೆ ನಿನ್ನ ನೋಡಲಾಗದು… ವಚನ ನೆನಪಿಸಿದಿರಿ. ಸುಂದರ ಕವನ.

  2. Nagaraju M.P
    Sep 13, 2020 Reply

    ಕವನ abstract art ಅನ್ನು ನೆನಪಿಸುವಂತಿದೆ. ನಿಮ್ಮ ಅಲ್ಲಮ ಮತ್ತು ಅಕ್ಕನ ನೆನಪಿನ ಕವನಗಳನ್ನು ನಾನು ಓದಿದ್ದೇನೆ, ಚೆನ್ನಾಗಿವೆ ಸರ್.

Leave a Reply to Nagaraju M.P Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
ಶರಣ ಸಾಹಿತ್ಯ ಸಂಶೋಧನೆಯಲ್ಲಿ ಬೆಳಕಿಂಡಿ
April 29, 2018
ಇದ್ದ ಅಲ್ಲಮ ಇಲ್ಲದಂತೆ
ಇದ್ದ ಅಲ್ಲಮ ಇಲ್ಲದಂತೆ
April 29, 2018
ಕಾಯವೇ ಕೈಲಾಸ
ಕಾಯವೇ ಕೈಲಾಸ
April 29, 2018
ಭ್ರಾಂತಿಯೆಂಬ ತಾಯಿ…
ಭ್ರಾಂತಿಯೆಂಬ ತಾಯಿ…
April 29, 2018
ಕಾಲನೆಂಬ ಜಾಲಗಾರ…
ಕಾಲನೆಂಬ ಜಾಲಗಾರ…
January 7, 2019
ನಿಚ್ಚ ನಿಚ್ಚ ಶಿವರಾತ್ರಿ
ನಿಚ್ಚ ನಿಚ್ಚ ಶಿವರಾತ್ರಿ
March 6, 2020
ನಾನು ಯಾರು? ಎಂಬ ಆಳ ನಿರಾಳ-3
ನಾನು ಯಾರು? ಎಂಬ ಆಳ ನಿರಾಳ-3
May 6, 2020
ಶರಣರ ದೃಷ್ಟಿಯಲ್ಲಿ ವ್ರತಾಚರಣೆ
ಶರಣರ ದೃಷ್ಟಿಯಲ್ಲಿ ವ್ರತಾಚರಣೆ
October 2, 2018
ಒಂದು ತೊಟ್ಟು ಬೆಳಕು
ಒಂದು ತೊಟ್ಟು ಬೆಳಕು
February 7, 2021
ವಚನಗಳಲ್ಲಿ ಖಗೋಳ ವಿಜ್ಞಾನ
ವಚನಗಳಲ್ಲಿ ಖಗೋಳ ವಿಜ್ಞಾನ
September 7, 2020
Copyright © 2021 Bayalu