Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಬೆಳಕ ಬೆಂಬತ್ತಿ…
Share:
Poems November 9, 2021 ಕೆ.ಆರ್ ಮಂಗಳಾ

ಬೆಳಕ ಬೆಂಬತ್ತಿ…

ಸಾಲು ಸಾಲು ಹಣತೆಗಳ ಹಚ್ಚಿ
ನೋಡುತ್ತಲೇ ಇದೆ
ಆಸೆಯಿಂದ ಈ ಮನ
ಬೆಳಕ ಗೋರಲು… ಒಳಗ ಬೆಳಗಲು…

ಕತ್ತಲೆಯ ಭಯವೋ, ಬೆಳಕಿನ ಮೋಹವೋ..

ಒಳಗೆ ಇಳಿದಷ್ಟೂ, ಹೆಜ್ಜೆ ಇಟ್ಟಷ್ಟೂ
ಅನಾದಿ ಕಾಲದ ಅಜ್ಞಾನದ ಕಮಟು
ಆ ದೂಳು, ಆ ಗದ್ದಲ
ಸಾವಿರ ಸಾವಿರ ಇರುಳು
ಬಸಿದು ಕುಳಿತಂತೆ ನನ್ನೊಳಗೆ
ದಟ್ಟಗತ್ತಲು, ಕಾರ್ಗತ್ತಲು, ಕಡುಗತ್ತಲು
ಭವದ ಈ ಗವಗತ್ತಲನಟ್ಟಲು
ಸಾವಿರ ಸೂರ್ಯರೂ ಸಾಲಲಿಕ್ಕಿಲ್ಲ!

ಅಷ್ಟಿಷ್ಟು ಬತ್ತಿಗೆ, ಇಷ್ಟಿಷ್ಟು ಎಣ್ಣೆ
ಉರಿಯು ದಾಟುತಲಿರುವ
ಮರ್ಮವ ಕಾಣಬಲ್ಲೆಯಾ?

ಕಾಯ- ಜೀವದ ಬೆಸುಗೆಯಲಿ
ಅನೂಹ್ಯ ಪ್ರಕೃತಿಯೊಳಿರುವ
ಜೀವಚೈತನ್ಯವ ನೋಡಬಲ್ಲೆಯಾ?

-ಗುರು ಹಚ್ಚಿದ ಕಿಡಿಯಲ್ಲಿ
ಕಪ್ಪಾದ ಕಣ್ಣಾಲೆಯೊಳಗೊಂದು ಮಿಂಚು!
ಕಂದೀಲು ಹಿಡಿದು
ಬೆಳಕ ಹುಡುಕಲು ಹೊರಟ
ಮನ ನಾಚಿತ್ತು… ನಾಚಿತ್ತು…

Previous post ಕ್ವಾಂಟಮ್ ಮೋಡಿ
ಕ್ವಾಂಟಮ್ ಮೋಡಿ
Next post ನಾನು ಯಾರು?
ನಾನು ಯಾರು?

Related Posts

ಹೆಸರಿಲ್ಲದಾ ಊರಿನ ಹಾಡು
Share:
Poems

ಹೆಸರಿಲ್ಲದಾ ಊರಿನ ಹಾಡು

May 6, 2020 ಪದ್ಮಾಲಯ ನಾಗರಾಜ್
ಚಿಂತೆಯೊಳಗೇ ಹಾವೊಂದೈತೆ/ ಡೊಂಕು ಹಾದಿಯ ತೊರೆಯಿರೋ ನಾನು ಎಂಬುದು ಕಳಚಿ ಹೋದರೆ/ ಇಹುದು ಸುಖವೆಂದರಿಯಿರೋ //ಪ// ಮೂರ್ಖತನದ ಕತ್ತಲೊಳಗೆ/ ಭ್ರಮೆಯ ಗಿಳಿಯೊಂದಾಡಿತೋ ಶೋಕಿ ದಾರಿಯು...
ಹುಡುಕಿಕೊಡು ಗುರುವೇ…
Share:
Poems

ಹುಡುಕಿಕೊಡು ಗುರುವೇ…

July 4, 2022 ಕೆ.ಆರ್ ಮಂಗಳಾ
ದೇಹದಲ್ಲೋ ಭಾವದಲ್ಲೋ ಎದೆಯ ಒಳಗೋ ತಲೆಯ ಒಳಗೋ ಕಳೆದುಹೋಗಿದ್ದೇನೆ ನಾನು ಕಳೆದುಹೋಗಿದ್ದೇನೆ… ಕುಲದಲ್ಲೋ ಛಲದಲ್ಲೋ ಹಠದಲ್ಲೋ ಅಹಮಿನಲ್ಲೋ ಸೇರಿಹೋಗಿದ್ದೇನೆ ನಾನು...

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ವಚನಗಳಲ್ಲಿ ಶಿವ
ವಚನಗಳಲ್ಲಿ ಶಿವ
September 4, 2018
ಭ್ರಾಂತಿಯೆಂಬ ತಾಯಿ…
ಭ್ರಾಂತಿಯೆಂಬ ತಾಯಿ…
April 29, 2018
ಅಲ್ಲಮರ ಒಂದು ‘ಸ್ವವಿರೋಧ’ದ ವಚನ
ಅಲ್ಲಮರ ಒಂದು ‘ಸ್ವವಿರೋಧ’ದ ವಚನ
August 2, 2020
ತೋರಲಿಲ್ಲದ ಸಿಂಹಾಸನದ ಮೇಲೆ…
ತೋರಲಿಲ್ಲದ ಸಿಂಹಾಸನದ ಮೇಲೆ…
December 22, 2019
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
ಮಠಗಳೂ, ಮಠಾಧೀಶರೂ ಮತ್ತು ಹೋರಾಟವೂ
April 29, 2018
ಒಳಗನರಿವ ಬೆಡಗು
ಒಳಗನರಿವ ಬೆಡಗು
September 10, 2022
ಆ ದಾರಿಯೇನು ಕುರುಡೇ…
ಆ ದಾರಿಯೇನು ಕುರುಡೇ…
June 5, 2021
ಐನಸ್ಟೈನ್ ಮತ್ತು ದೇವರು
ಐನಸ್ಟೈನ್ ಮತ್ತು ದೇವರು
October 5, 2021
ಕರ್ತಾರನ ಕಮ್ಮಟ
ಕರ್ತಾರನ ಕಮ್ಮಟ
July 5, 2019
ಅವಿರಳ ಅನುಭಾವಿ: ಚನ್ನಬಸವಣ್ಣ
ಅವಿರಳ ಅನುಭಾವಿ: ಚನ್ನಬಸವಣ್ಣ
March 6, 2020
Copyright © 2023 Bayalu