Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ನದಿಯನರಸುತ್ತಾ…
Share:
Poems October 6, 2020 ಜ್ಯೋತಿಲಿಂಗಪ್ಪ

ನದಿಯನರಸುತ್ತಾ…

ಜ್ಞಾನವೆಂಬುದೇನು? ಮನೋ ಭೇದ.
-ಅಲ್ಲಮ
ನಾನು
ಹುಟ್ಟುವಾಗ
ಹೇಳಿ ಬಂದೆನೇ ಸಾಯುವಾಗಲೂ
ಅಷ್ಟೇ ಬದುಕು ಹೇಳದು ಏನೂ
ಈ
ಕಡಲಲಿ
ಕಳೆದಿರುವ ನದಿ ಹುಡುಕುತಿರುವೆ
ಹುಡುಕುತಿರುವ
ನದಿ
ಕಳೆದಿದೆ ಕಡಲು
ಕಡಲಲಿ ಕಳೆಯುವ
ನದಿ
ಹುಡುಕುವುದೇ
ಕಡಲಿನಲಿ ಕಳೆಯುವ ನದಿಯ
ಬೆನ್ನೇರಿದೆ ಉಪ್ಪು
ಅವಲಂಬಿತನ ಹಂಗು ಬಿತ್ತಿದೆ
ದ್ವೇಷದ ಬೀಜ
ಹೇಳು ಸಾಯಲು ಬಿತ್ತ ಬೇಕು
ಬಂಜೆ
ಬೀಜ ಬಿತ್ತಿ ನೆಲ
ಬಂಜೆ ನನ್ನ ಮನಸ್ಸಿಗೆ ನಾನೇ
ಸಾಕ್ಷಿ
ಸದಾ ಸುಳ್ಳು ಒಂದರ
ಪಡಿನೆಳಲು ಇನ್ನೊಂದು
ರೂಹು ಕಣ್ಣ ಚೆಲುವು
ನಾನೇ ಒಂದು ಹೊರೆ
ಈ
ನೆಲಕ್ಕೆ ನನ್ನ ತಲೆಯ ಮೇಲಿನ
ಹೊರೆ
ಯಾಕೆ ಹೊರಿಸಲಿ ನಾನೇ ಹೊರುವೆ
ನಕ್ಕಿತು ನೆಲ
ಕಣ್ಣೀರು ಸವಿದರೆ ಉಪ್ಪರಿಯದು.

Previous post ಮನಸ್ಸು
ಮನಸ್ಸು
Next post ಭಾರ
ಭಾರ

Related Posts

ಇದ್ದಷ್ಟೇ…
Share:
Poems

ಇದ್ದಷ್ಟೇ…

January 10, 2021 ಜ್ಯೋತಿಲಿಂಗಪ್ಪ
ಇದ್ದಷ್ಟೇ ಇದರಾಚೆ ಕನಸೂ ಇಲ್ಲ ನಿದ್ದೆಯೂ ಇಲ್ಲ ಇರುವಷ್ಟು ಇರುವುದು ಇದ್ದ ಹಾಗೆ ಇರು ಕನಸು ಇದ್ದಾಗಷ್ಟೇ ಕನಸು ಇರುವುದು ಎಚ್ಚರಾದರೆ ಕನಸು ಕನವರಿಸುವುದು ಎಚ್ಚರಾಗು ಉದಯದ ಮೊದಲ...
ಹೆಸರಿಲ್ಲದಾ ಊರಿನ ಹಾಡು
Share:
Poems

ಹೆಸರಿಲ್ಲದಾ ಊರಿನ ಹಾಡು

May 6, 2020 ಪದ್ಮಾಲಯ ನಾಗರಾಜ್
ಚಿಂತೆಯೊಳಗೇ ಹಾವೊಂದೈತೆ/ ಡೊಂಕು ಹಾದಿಯ ತೊರೆಯಿರೋ ನಾನು ಎಂಬುದು ಕಳಚಿ ಹೋದರೆ/ ಇಹುದು ಸುಖವೆಂದರಿಯಿರೋ //ಪ// ಮೂರ್ಖತನದ ಕತ್ತಲೊಳಗೆ/ ಭ್ರಮೆಯ ಗಿಳಿಯೊಂದಾಡಿತೋ ಶೋಕಿ ದಾರಿಯು...

Comments 1

  1. Nirmala R
    Oct 10, 2020 Reply

    ಕಡಲಲ್ಲಿ ನದಿ ತನ್ನ ಹುಡುಕುವ ಇಮೇಜ್ ಸೊಗಸಾಗಿದೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಬಿಟ್ಟು ಹೋದ ಬಸವಣ್ಣ
ಬಿಟ್ಟು ಹೋದ ಬಸವಣ್ಣ
April 29, 2018
ಭಕ್ತನಾಗುವುದೆಂದರೆ…
ಭಕ್ತನಾಗುವುದೆಂದರೆ…
January 10, 2021
ಅನುಭಾವ ಮತ್ತು ಅನಿರ್ವಚನೀಯತೆ
ಅನುಭಾವ ಮತ್ತು ಅನಿರ್ವಚನೀಯತೆ
March 12, 2022
ನನ್ನೊಳಗಣ ಮರೀಚಿಕೆ
ನನ್ನೊಳಗಣ ಮರೀಚಿಕೆ
February 5, 2020
ಲಿಂಗವಾಗುವ ಪರಿ…
ಲಿಂಗವಾಗುವ ಪರಿ…
April 29, 2018
ಶಿವನ ಕುದುರೆ…
ಶಿವನ ಕುದುರೆ…
May 1, 2019
ಬಸವಣ್ಣವರ ಆಶಯಗಳು
ಬಸವಣ್ಣವರ ಆಶಯಗಳು
July 4, 2021
ಸತ್ಯದ ಬೆನ್ನು ಹತ್ತಿ…
ಸತ್ಯದ ಬೆನ್ನು ಹತ್ತಿ…
April 29, 2018
ಪದ, ಬಳಕೆ ಮತ್ತು ಅರ್ಥ
ಪದ, ಬಳಕೆ ಮತ್ತು ಅರ್ಥ
November 9, 2021
ಮನಸ್ಸು
ಮನಸ್ಸು
September 7, 2020
Copyright © 2022 Bayalu