Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಈ ಕ್ಷಣದ ಸತ್ಯ
Share:
Poems March 12, 2022 ಕೆ.ಆರ್ ಮಂಗಳಾ

ಈ ಕ್ಷಣದ ಸತ್ಯ

ಧಗಧಗಿಸಿ ಮೇಲೇರುತಿಹ
ಕೆನ್ನಾಲಿಗೆಯ ಈ ಬೆಂಕಿ
ಅಡಗಿತ್ತು ಎಲ್ಲಿ?
ಮರದ ಬೊಡ್ಡೆಯಲೋ?
ಒಣಗಿದ ಸೌದೆಯಲೋ,
ಮದ್ದಗೀರಿದ ಕಡ್ಡಿಯಲ್ಲೋ,
ಊದುತಿಹ ಗಾಳಿಯಲ್ಲೋ?
ಎಲ್ಲಿಂದ ಬಂತು
ಕಣ್ಣ ಕೋರೈಸುವ ಈ ಬೆಳಕು,
ಚಕಮಕದ ಹೊಳಪು,
ಈ ಝಳದ ಧಗೆಯು?
ಆ ಬೊಡ್ಡೆ, ಆ ಒಣಗಿದೆಲೆ,
ಆ ಕಿಡಿಯ ಬೆಸುಗೆಯಲಿ
ಇತ್ತೇ ಇಂಥ ಮೋಹಕದ ಚಳಕ?

ಗಾಳಿಯಲಿ ಕೈ ಬೀಸಿ
ಬಾಚಿಕೊಳಬಹುದೇ ಶಾಖವನು
ಮುಂದಣ ಚಳಿಗೂ ಆದೀತೆಂದು?
ಗಾಜಿನ ಸೀಸೆಯೊಳಗೆ
ತುಂಬಿಕೊಳಬಹುದೇ ಬೆಳಕ
ನಾಳಿನಿರುಳಿಗೆ ಇರಲೆಂದು?
ನಿನ್ನೆಯ ಭೂತವನು
ಬೆನ್ನೇರಿಸಿಕೊಂಡ ಮನಕೆ
ಸದಾ ನಾಳೆಯದೇ ಚಿಂತೆ…

ಈ ಕ್ಷಣಕಾದರೋ
ಹಿಂದು-ಮುಂದುಗಳಿಲ್ಲ
ದಂದುಗದ ಹಂಗಿಲ್ಲ
ಇಲ್ಲೇ, ಈಗಲೇ
ಉರಿದುರಿದು ತೋರಿ,
ತೋರುತ್ತಲೇ ಮರೆಯಾಗಿ
ಕಣ್ಣ ಮುಂದಲೇ ಕರಗುತಿಹ
ಆ ಬೆಂಕಿಗೂ,
ನನ್ನೊಡಲ ಪ್ರಾಣಕ್ಕೂ
ಇಹುದೇ ಏನಾದರೂ ಅಂತರ?

Previous post ಒಳಗಣ ಮರ
ಒಳಗಣ ಮರ
Next post ಕನ್ನಡ ಕವಿ ಸಂತರಲ್ಲಿ ಧರ್ಮ…
ಕನ್ನಡ ಕವಿ ಸಂತರಲ್ಲಿ ಧರ್ಮ…

Related Posts

ಬಿಂಬ-ಪ್ರತಿಬಿಂಬ
Share:
Poems

ಬಿಂಬ-ಪ್ರತಿಬಿಂಬ

February 5, 2020 ಜ್ಯೋತಿಲಿಂಗಪ್ಪ
ನೀನು ಅಲ್ಲಿ ಉಂಟೆಂದು ನಾನು ಇಲ್ಲಿ ತೆವಳಿ ತೆವಳಿ ಬಳಲಿದೆ ನೀನು ಎಲ್ಲಿರುವೆ ಎಂಬುದು ನನ್ನ ಕಣ್ಣರಿವು ಎಂಬುದ ನಾನಲ್ಲದೆ ನೀನರಿದೆಯಾ ಹೇಳೇ ಅಕ್ಕಾ ಬೆಳಕ ತಿಂದಲ್ಲದೆ ಕನ್ನಡಿಯಲಿ...
WHO AM I?
Share:
Poems

WHO AM I?

June 17, 2020 Chittara K. V
I have a wide brain And a open mind I think a lot at times But I come to a point To ask myself- Who am I? I swallow the pain But speak with the...

Comments 1

  1. Andanappa
    Mar 23, 2022 Reply

    ಬೆಂಕಿಗೂ ಪ್ರಾಣಕ್ಕೂ ಮೂಲಸಂಬಂಧ ಯಾವುದು? ಇದೇ ನಿರಂತರ ಹುಡುಕುವಿಕೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಪ್ರಭುಲಿಂಗಲೀಲೆ…
ಪ್ರಭುಲಿಂಗಲೀಲೆ…
May 10, 2022
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
ಶರಣರ ವಚನಗಳಲ್ಲಿ ಪ್ರಕ್ಷಿಪ್ತತೆ
April 29, 2018
ಕಣ್ಣ ದೀಪ
ಕಣ್ಣ ದೀಪ
September 7, 2021
ಬಸವೋತ್ತರ ಶರಣರ ಸ್ತ್ರೀಧೋರಣೆ
ಬಸವೋತ್ತರ ಶರಣರ ಸ್ತ್ರೀಧೋರಣೆ
April 29, 2018
ತುದಿಗಳೆರಡು ಇಲ್ಲವಾದಾಗ…
ತುದಿಗಳೆರಡು ಇಲ್ಲವಾದಾಗ…
March 9, 2023
ಬಿಟ್ಟು ಹೋದ ಬಸವಣ್ಣ
ಬಿಟ್ಟು ಹೋದ ಬಸವಣ್ಣ
April 29, 2018
ಏನ ಬೇಡಲಿ ಶಿವನೇ?
ಏನ ಬೇಡಲಿ ಶಿವನೇ?
August 2, 2020
ಶರಣರ ಅಭಿವ್ಯಕ್ತಿ ಸ್ವಾತಂತ್ರ್ಯ
ಶರಣರ ಅಭಿವ್ಯಕ್ತಿ ಸ್ವಾತಂತ್ರ್ಯ
April 29, 2018
ಆ ದಾರಿಯೇನು ಕುರುಡೇ…
ಆ ದಾರಿಯೇನು ಕುರುಡೇ…
June 5, 2021
ಶರಣೆಯರ ಸ್ಮಾರಕಗಳು
ಶರಣೆಯರ ಸ್ಮಾರಕಗಳು
April 29, 2018
Copyright © 2023 Bayalu