Bayalu
  • Home
  • About Us
  • Contact Us
Close
Bayalu
Close
  • Home
  • About Us
  • Contact Us
ಈ ಕ್ಷಣದ ಸತ್ಯ
Share:
Poems March 12, 2022 ಕೆ.ಆರ್ ಮಂಗಳಾ

ಈ ಕ್ಷಣದ ಸತ್ಯ

ಧಗಧಗಿಸಿ ಮೇಲೇರುತಿಹ
ಕೆನ್ನಾಲಿಗೆಯ ಈ ಬೆಂಕಿ
ಅಡಗಿತ್ತು ಎಲ್ಲಿ?
ಮರದ ಬೊಡ್ಡೆಯಲೋ?
ಒಣಗಿದ ಸೌದೆಯಲೋ,
ಮದ್ದಗೀರಿದ ಕಡ್ಡಿಯಲ್ಲೋ,
ಊದುತಿಹ ಗಾಳಿಯಲ್ಲೋ?
ಎಲ್ಲಿಂದ ಬಂತು
ಕಣ್ಣ ಕೋರೈಸುವ ಈ ಬೆಳಕು,
ಚಕಮಕದ ಹೊಳಪು,
ಈ ಝಳದ ಧಗೆಯು?
ಆ ಬೊಡ್ಡೆ, ಆ ಒಣಗಿದೆಲೆ,
ಆ ಕಿಡಿಯ ಬೆಸುಗೆಯಲಿ
ಇತ್ತೇ ಇಂಥ ಮೋಹಕದ ಚಳಕ?

ಗಾಳಿಯಲಿ ಕೈ ಬೀಸಿ
ಬಾಚಿಕೊಳಬಹುದೇ ಶಾಖವನು
ಮುಂದಣ ಚಳಿಗೂ ಆದೀತೆಂದು?
ಗಾಜಿನ ಸೀಸೆಯೊಳಗೆ
ತುಂಬಿಕೊಳಬಹುದೇ ಬೆಳಕ
ನಾಳಿನಿರುಳಿಗೆ ಇರಲೆಂದು?
ನಿನ್ನೆಯ ಭೂತವನು
ಬೆನ್ನೇರಿಸಿಕೊಂಡ ಮನಕೆ
ಸದಾ ನಾಳೆಯದೇ ಚಿಂತೆ…

ಈ ಕ್ಷಣಕಾದರೋ
ಹಿಂದು-ಮುಂದುಗಳಿಲ್ಲ
ದಂದುಗದ ಹಂಗಿಲ್ಲ
ಇಲ್ಲೇ, ಈಗಲೇ
ಉರಿದುರಿದು ತೋರಿ,
ತೋರುತ್ತಲೇ ಮರೆಯಾಗಿ
ಕಣ್ಣ ಮುಂದಲೇ ಕರಗುತಿಹ
ಆ ಬೆಂಕಿಗೂ,
ನನ್ನೊಡಲ ಪ್ರಾಣಕ್ಕೂ
ಇಹುದೇ ಏನಾದರೂ ಅಂತರ?

Previous post ಒಳಗಣ ಮರ
ಒಳಗಣ ಮರ
Next post ಕನ್ನಡ ಕವಿ ಸಂತರಲ್ಲಿ ಧರ್ಮ…
ಕನ್ನಡ ಕವಿ ಸಂತರಲ್ಲಿ ಧರ್ಮ…

Related Posts

ಅಂದು-ಇಂದು
Share:
Poems

ಅಂದು-ಇಂದು

December 8, 2021 ಕೆ.ಆರ್ ಮಂಗಳಾ
ಅಂದು- ಹೇಗೋ ಎಂತೋ ಸುರುಸುರುಳಿಯಾಗಿ ಬಗೆಬಗೆಯಲಿ ಪರಿಪರಿಯಲಿ ಸುತ್ತಿಕೊಂಡಿದ್ದು- ಮೆತ್ತಿಕೊಂಡಿದ್ದು ಬೆಳೆಯುತ್ತಾ-ಬಲಿಯುತ್ತಾ ನಂಟಾಗಿ- ಗಂಟಾಗಿ ಯಮಯಾತನೆಯ ಹೊರೆಯಾಗಿ...
ನೆಲದ ನಿಧಾನ
Share:
Poems

ನೆಲದ ನಿಧಾನ

April 29, 2018 ಕೆ.ಆರ್ ಮಂಗಳಾ
ನನ್ನ ಶರಣರು ಅವರು ಬೇರಿಳಿಸಿ, ಬೆವರಿಳಿಸಿ ಭೂಮಿ ಉತ್ತವರು ಕಕ್ಕುಲತೆಯಿಂದ ಬದುಕ ಕಟ್ಟಿದವರು ಹಸಿದ ಹೊಟ್ಟೆಗಳಿಗೆ ಅನ್ನ ಕೊಟ್ಟವರು ಎದೆಯಿಂದ ಎದೆಗೆ ಪ್ರೀತಿ ಹರಿಸಿದವರು. ನನ್ನ...

Comments 1

  1. Andanappa
    Mar 23, 2022 Reply

    ಬೆಂಕಿಗೂ ಪ್ರಾಣಕ್ಕೂ ಮೂಲಸಂಬಂಧ ಯಾವುದು? ಇದೇ ನಿರಂತರ ಹುಡುಕುವಿಕೆ.

Leave A Comment Cancel reply

Your email address will not be published. Required fields are marked *

Search For Your Post

Close

Categories

  • Articles
  • Poems
You May Also Like
ಶರಣರ ಚರಿತ್ರೆಯ ಮೇಲೆ ಹೊಸಬೆಳಕು
ಶರಣರ ಚರಿತ್ರೆಯ ಮೇಲೆ ಹೊಸಬೆಳಕು
April 29, 2018
ಶೂನ್ಯ ಸಂಪಾದನೆ ಎಂದರೇನು?
ಶೂನ್ಯ ಸಂಪಾದನೆ ಎಂದರೇನು?
January 8, 2023
ದೂಷಕರ ಧೂಮಕೇತು
ದೂಷಕರ ಧೂಮಕೇತು
August 8, 2021
ಶರಣರು ಕಂಡ ಸಮಸಮಾಜ
ಶರಣರು ಕಂಡ ಸಮಸಮಾಜ
July 4, 2022
ಮಿಥ್ಯಾದೃಷ್ಟಿರಹಿತ ಬಯಲ ದರ್ಶನ
ಮಿಥ್ಯಾದೃಷ್ಟಿರಹಿತ ಬಯಲ ದರ್ಶನ
May 6, 2021
ವಚನಗಳ ಓದು ಮತ್ತು ಅರ್ಥೈಸುವಿಕೆ
ವಚನಗಳ ಓದು ಮತ್ತು ಅರ್ಥೈಸುವಿಕೆ
August 5, 2018
ದಾಸೋಹ ತತ್ವ
ದಾಸೋಹ ತತ್ವ
January 10, 2021
ನೀರಿನ ಬರ ನೀಗುವುದು ಹೇಗೆ?
ನೀರಿನ ಬರ ನೀಗುವುದು ಹೇಗೆ?
May 1, 2019
ಶರಣರ ದೃಷ್ಟಿಯಲ್ಲಿ ವ್ರತಾಚರಣೆ
ಶರಣರ ದೃಷ್ಟಿಯಲ್ಲಿ ವ್ರತಾಚರಣೆ
October 2, 2018
ಕರ್ತಾರನ ಕಮ್ಮಟ  ಭಾಗ-6
ಕರ್ತಾರನ ಕಮ್ಮಟ ಭಾಗ-6
December 22, 2019
Copyright © 2023 Bayalu